ಶಿಕ್ಷಣವೆಂಬುದು ವ್ಯಾಪಾರವಲ್ಲ: ಸುಪ್ರೀಂಕೋರ್ಟ್

ಶಿಕ್ಷಣವೆಂಬುದು ವ್ಯಾಪಾರವಲ್ಲ: ಸುಪ್ರೀಂಕೋರ್ಟ್

ನವದೆಹಲಿ: ಶಿಕ್ಷಣವೆಂಬುವುದು ಲಾಭಗಳಿಸುವ ವ್ಯಾಪಾರವಲ್ಲ. ಹೀಗಾಗಿ ಬೋಧನಾ ಶುಲ್ಕ ಯಾವಾಗಲೂ ಕೈಗೆಟುಕುವಂತಿರಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಇದನ್ನೂ ಓದಿ: ಒಲಾ-ಊಬರ್ ವಿವಾದ: ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ 4 ವಾರ ಕಾಲಾವಕಾಶ ನೀಡಿದ ಹೈಕೋರ್ಟ್

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ. ಆರ್. ಶಾ ಹಾಗೂ ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠ, ರಾಜ್ಯದ ಮೆಡಿಕಲ್ ಕಾಲೇಜುಗಳ ಬೊಧನಾ ಶುಲ್ಕವನ್ನು ವಾರ್ಷಿಕ 24 ಲಕ್ಷ ರೂ. ಗೆ ಹೆಚ್ಚಳ ಮಾಡಿದ್ದ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ್ದ ಆಂದ್ರಪ್ರದೇಶ ಹೈಕೋರ್ಟ್ ನ ಕ್ರಮವನ್ನು ಎತ್ತಿಹಿಡಿಯಿತು.

ಹೈಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ನಾರಾಯಣ ಮೆಡಿಕಲ್ ಕಾಲೇಜು ಹಾಗೂ ಆಂಧ್ರಪ್ರದೇಶ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದವು. ನಾರಾಯಣ ಮೆಡಿಕಲ್ ಕಾಲೇಜು ಹಾಗೂ ರಾಜ್ಯ ಸರ್ಕಾರ ಪ್ರಕರಣದ ವೆಚ್ಚ ಒಟ್ಟು 5 ಲಕ್ಷ ರೂ ನೀಡಬೇಕು. ಎಂದು ಆದೇಶಿಸಿದ ನ್ಯಾಯಪೀಠ, ಈ ಮೊತ್ತವನ್ನು ಆರು ವಾರಗಳೊಳಗೆ ಕೋರ್ಟ್ ರಿಜಿಸ್ಟ್ರಿಯಲ್ಲಿ ಠೇವಣಿ ಇಡುವಂತೆ ಸೂಚಿಸಿದೆ.

ಬೋಧನಾ ಶುಲ್ಕವನ್ನು 24 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಇದು ಈ ಮೊದಲಿದ್ದ ಶುಲ್ಕಕ್ಕಿಂತ ಏಳು ಪಟ್ಟು ಹೆಚ್ಚು ಇದ್ದು, ಯಾವ ರೀತಿಯಲ್ಲಾದರೂ ಈ ಕ್ರಮ ಸಮರ್ಥನೀಯವಲ್ಲ  ಎಂದು ನ್ಯಾಯಪೀಠ ಹೇಳಿದೆ.

suddiyaana