ನಿಮ್ಗೆ ಕನಸಿನಲ್ಲಿ ಈ ವಸ್ತು ಕಂಡರೆ ಏನರ್ಥ? – ಸ್ವಪ್ನ ಶಾಸ್ತ್ರ ಏನ್ ಹೇಳುತ್ತೆ?

ಸ್ವಪ್ನ ಶಾಸ್ತ್ರದ ಪ್ರಕಾರ, ನಾವು ನಿದ್ರಾವಸ್ಥೆಯಲ್ಲಿ ಕಾಣುವ ಪ್ರತಿಯೊಂದು ಕನಸುಗಳಿಗೂ ಅದರದ್ದೇ ಆದ ಅರ್ಥವಿದೆ. ಆ ಕನಸುಗಳು ನಮಗೆ ಜೀವನದಲ್ಲಿ ಮುಂಬರುವ ಒಳ್ಳೆಯ ಮತ್ತು ಕೆಟ್ಟ ಸಮಯಗಳ ಸೂಚನೆಯನ್ನು ನೀಡುತ್ತದೆ. ಕನಸುಗಳು ಕೇವಲ ನಮ್ಮ ಆಲೋಚನೆಗಳು ಅಥವಾ ಮನಸ್ಸಿನ ಪ್ರತಿಬಿಂಬಗಳಲ್ಲ. ಬದಲಿಗೆ, ನಿದ್ರೆಯಲ್ಲಿ ಕಾಣುವ ಕನಸುಗಳು ಹೆಚ್ಚಾಗಿ ಮುಂಬರುವ ಒಳ್ಳೆಯ ಅಥವಾ ಕೆಟ್ಟ ಸಮಯಗಳ ಕನ್ನಡಿಯೂ ಆಗಿದೆ. ಇಲ್ಲಿ ಕೆಲವೊಂದು ಕನಸುಗಳ ಕುರಿತು ಹೇಳಲಾಗಿದ್ದು, ಈ ಕನಸುಗಳು ನಮ್ಮ ಮುಂದಿನ ಜೀವನದಲ್ಲಿನ ರಾಜಯೋಗದ ಕುರಿತು ಹೇಳುತ್ತದೆ. ಇಂತಹ ಕನಸುಗಳು ಬಿದ್ದರೆ ನಿಮ್ಮ ರಾಜಯೋಗ ಪ್ರಾರಂಭವಾಗಿದೆ ಎಂದರ್ಥ ಮತ್ತು ಇವುಗಳು ಶುಭ ಕನಸುಗಳಾಗಿವೆ.
ಹಸಿರು ಬಣ್ಣದ ಹೂವು, ಮರ
ಸ್ವಪ್ನ ಶಾಸ್ತ್ರದ ಪ್ರಕಾರ, ಶುಭ ಕನಸುಗಳಲ್ಲಿ ಇಂತಹ ಕನಸುಗಳು ಕೂಡ ಶುಭ ಸೂಚನೆಯನ್ನು ನೀಡುವಂತಹ ಕನಸಾಗಿದೆ. ನೀವು ಕನಸಿನಲ್ಲಿ ಹಸಿರು ಬಣ್ಣದ ಹೂವುಗಳನ್ನು ನೋಡಿದರೆ ಅಥವಾ ಹಸಿರು ಮರಗಳನ್ನು ಅಥವಾ ಸಸ್ಯಗಳನ್ನು ನೋಡಿದರೆ ಅದನ್ನು ಅತ್ಯಂತ ಶುಭ ಸಂಕೇತ ಅಥವಾ ಶುಭ ಕನಸು ಎಂದು ಹೇಳಲಾಗುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ, ಇಂತಹ ಕನಸುಗಳು ಬಿದ್ದರೆ ಅದು ನಮಗೆ ಸಂತೋಷವನ್ನು, ಸಮೃದ್ಧಿಯನ್ನು ಮತ್ತು ಪ್ರಗತಿಯನ್ನು ಸೂಚಿಸುವಂತಹ ಕನಸುಗಳಾಗಿದೆ. ಇಂತಹ ಕನಸುಗಳು ಮುಂಬರುವ ದಿನಗಳಲ್ಲಿ ನಾವು ಹಣಕಾಸಿನ ಲಾಭವನ್ನು ಪಡೆದುಕೊಳ್ಳುವುದರ ಬಗ್ಗೆ ಹೇಳುತ್ತದೆ.
ದೇವಸ್ಥಾನ ಅಥವಾ ಉರಿಯುವ ದೀಪವ
ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ನಾವು ದೇವಸ್ಥಾನವನ್ನು ನೋಡುವುದು ಅಥವಾ ಉರಿಯುವ ದೀಪವನ್ನು ನೋಡುವುದು ತುಂಬಾನೇ ಶುಭವೆಂದು ಪರಿಗಣಿಸಲಾಗುತ್ತದೆ. ದೇವಸ್ಥಾನವಾಗಲಿ ಅಥವಾ ದೀಪವಾಗಲಿ ದೈವಿಕ ಶಕ್ತಿಯ ರೂಪವಾಗಿದೆ. ಇವುಗಳಲ್ಲಿ ದೈವಿಕ ಶಕ್ತಿಯು ನೆಲೆಸಿರುತ್ತದೆ. ನಿಮಗೂ ಇಂತಹ ಕನಸುಗಳು ಬಿದ್ದರೆ ಸದ್ಯದಲ್ಲೇ ನಿಮಗೆ ರಾಜಯೋಗ ಪ್ರಾರಂಭವಾಗಲಿದೆ ಎಂದರ್ಥ. ಇದು ಧನಾಗಮನ ಅಥವಾ ರಾಜಯೋಗದ ಸೂಚನೆಯಾಗಿದೆ
ಹಸು ಮತ್ತು ಕರು
ಮುಂಜಾನೆಯ ಕನಸುಗಳನ್ನು ಅತ್ಯಂತ ಶುಭವೆನ್ನುವ ನಂಬಿಕೆ ನಮ್ಮ ಧರ್ಮದಲ್ಲಿದೆ. ಅಷ್ಟು ಮಾತ್ರವಲ್ಲ, ಮುಂಜಾನೆ ಕಂಡ ಕನಸುಗಳು ಶೀಘ್ರದಲ್ಲೇ ನನಸೂ ಆಗುತ್ತದೆ ಎನ್ನಲಾಗಿದೆ. ಮುಂಜಾನೆ ನಾವು ನಮ್ಮ ಕನಸಿನಲ್ಲಿ ಹಸು ಮತ್ತು ಕರುವನ್ನು ಒಟ್ಟಿಗೆ ನೋಡಿದರೆ ಅದನ್ನು ಅದೃಷ್ಟದ ಸಂಕೇತವಾಗಿರುತ್ತದೆ. ಇಂತಹ ಕನಸುಗಳು ನಮಗೆ ಧನಲಾಭವಾಗುವ ಮುನ್ನ ಬೀಳುತ್ತದೆ. ಹಸುವನ್ನು ಗೋಮಾತೆಯೆಂದು, ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇಂತಹ ಕನಸುಗಳು ಲಕ್ಷ್ಮಿ ದೇವಿಯ ಆಗಮನದ ಸೂಚನೆಯಾಗಿದೆ.
ಚಿನ್ನ ಅಥವಾ ಚಿನ್ನದ ಆಭರಣ
ಸ್ವಪ್ನ ಶಾಸ್ತ್ರದ ಪ್ರಕಾರ, ನೀವು ನಿಮ್ಮ ಕನಸಿನಲ್ಲಿ ಚಿನ್ನ ಅಥವಾ ಚಿನ್ನದ ಆಭರಣಗಳನ್ನು ನೋಡುವುದು ತುಂಬಾನೇ ಶುಭವೆಂದು ಹೇಳಲಾಗುತ್ತದೆ. ಚಿನ್ನಾಭರಣಗಳ ಕನಸು ನೀವು ಶೀಘ್ರದಲ್ಲೇ ಆರ್ಥಿಕ ಲಾಭವನ್ನು ಪಡೆದುಕೊಳ್ಳುತ್ತೀರಿ ಎಂಬುದರ ಸೂಚನೆಯಾಗಿದೆ. ಇಂತಹ ಕನಸುಗಳು ಬಿದ್ದವರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯುವುದು. ವ್ಯಾಪಾರ, ವ್ಯವಹಾರ ಹಾಗೂ ಉದ್ಯಮದಲ್ಲಿ ಲಾಭವು ಹೆಚ್ಚಾಗುವುದು.

ನೋಡಿರಿ

