ಘಾಟ್ನಲ್ಲಿ ಕಮರಿಗೆ ಬಿದ್ದ ಬಸ್! – ಮೂವರು ಸಾವು.. 38 ಪ್ರಯಾಣಿಕರಿಗೆ ಗಾಯ

ಮಧ್ಯಪ್ರದೇಶದ ಇಂದೋರ್ನಲ್ಲಿ ಭೀಕರ ಅವಘಡವೊಂದು ಸಂಭವಿಸಿದೆ. 40 ಕ್ಕೂ ಪ್ರಯಾಣಿಕರಿದ್ದ ಬಸ್ಸೊಂದು ತಡ ರಾತ್ರಿ ಕಮರಿಗೆ ಬಿದ್ದಿದ್ದು, ಮೂವರು ಮೃತಪಟ್ಟಿದ್ದಾರೆ. 38 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಸೂರ್ಯಕುಮಾರ್! – ಗಂಡನ ಯಶಸ್ಸಿಗಾಗಿ ಕಾಪು ಮಾರಿಗುಡಿಗೆ ಭೇಟಿ ನೀಡಿದ ದೇವಿಶಾ!
ಬಸ್ ಸೋಮವಾರ ರಾತ್ರಿ ಓಂಕಾರೇಶ್ವರದಿಂದ ಇಂದೋರ್ಗೆ ಹೊರಟಿತ್ತು. ಭೇರು ಘಾಟ್ ಬಳಿ ಬಸ್ ಬರುತ್ತಿದ್ದಂತೆ ಕಮರಿಗೆ ಉರುಳಿ ಬಿದ್ದಿದೆ. ಹೀಗಾಗಿ ಬಸ್ನಲ್ಲಿದ್ದವರ ಪೈಕಿ ಸ್ಥಳದಲ್ಲೇ ಇಬ್ಬರು ಉಸಿರು ಚೆಲ್ಲಿದ್ದಾರೆ. ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ 38 ಜನರು ಗಂಭೀರವಾಗಿ ಗಾಯಗೊಂಡಿದ್ದು ಇದರಲ್ಲಿ ಮೂವರು ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಸದ್ಯ ಗಾಯಾಳುಗಳನ್ನು ಇಂದೋರ್ನ ಎಂವೈ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು ರಕ್ಷಣೆ ಕಾರ್ಯದಲ್ಲಿ ತೊಡಗಿ ಹಲವರನ್ನು ಕಾಪಾಡಿದ್ದಾರೆ. ಆ್ಯಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ .
ಇನ್ನು ಘಟನೆಯಲ್ಲಿ ಬದುಕುಳಿದ ನವಲ್ ಸಿಂಗ್ ಚೌಹಾಣ್ ಎನ್ನುವರು ಮಾತನಾಡಿ, ಬಸ್ ಇಂದೋರ್ಗೆ ಹೋಗುವಾಗ ಮಾರ್ಗಮಧ್ಯೆ ಡಾಬಾದಲ್ಲಿ ನಿಲ್ಲಿಸಿ ಎಲ್ಲರೂ ಊಟ ಮಾಡಿದ್ದೇವು. ಮತ್ತೆ ಬಸ್ ಹೊರಡಲು ಪ್ರಾರಂಭವಾಗಿ ಸ್ವಲ್ಪ ದೂರ ಹೋಗಿತ್ತು ಅಷ್ಟೇ, ಆದರೆ ಅಷ್ಟರಲ್ಲೇ ಆಳವಾದ ಕಮರಿಗೆ ಬಸ್ ಬಿದ್ದಿತು ಎಂದಿದ್ದಾರೆ. ಅಲ್ಲದೇ ಘಟನೆಯಲ್ಲಿ ಬದುಕುಳಿದ ಇಲ್ಲೊಬ್ಬರು ಮಾತನಾಡಿ, ಅನಿತಾ ಬಾಯಿ ಎನ್ನುವ ನನ್ನ ಅತ್ತೆಯನ್ನು ಕಳೆದುಕೊಂಡೆ ಎಂದು ಕಣ್ಣೀರು ಹಾಕಿದ್ದಾರೆ.

ನೋಡಿರಿ

