ಒಡೆಯುತ್ತೇನೆ ಎನ್ನಲು ಪ್ರತಾಪ ಸಿಂಹ ಯಾರು?- ಸಿದ್ದು ವಾಗ್ದಾಳಿ
ಗುಂಬಜ್ ರೀತಿ ಇರುವುದೆಲ್ಲಾ ಒಡೆದು ಬಿಡುತ್ತೀರಾ? – ಸಿದ್ದು ಪ್ರಶ್ನೆ

ಒಡೆಯುತ್ತೇನೆ ಎನ್ನಲು ಪ್ರತಾಪ ಸಿಂಹ ಯಾರು?- ಸಿದ್ದು ವಾಗ್ದಾಳಿಗುಂಬಜ್ ರೀತಿ ಇರುವುದೆಲ್ಲಾ ಒಡೆದು ಬಿಡುತ್ತೀರಾ? – ಸಿದ್ದು ಪ್ರಶ್ನೆ

ಮೈಸೂರು: ಗುಂಬಜ್ ತಾನೇ ತೆರವು ಮಾಡ್ತೀನಿ ಅನ್ನೋ ಸಂಸದ ಪ್ರತಾಪ್ ಸಿಂಹ ಹೇಳಿಕೆಯನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರವಾಗಿ ವಿರೋಧಿಸಿದ್ದಾರೆ. ಗುಂಬಜ್ ಒಡೆಯುತ್ತೇನೆ ಎನ್ನಲು ಪ್ರತಾಪ ಸಿಂಹ ಯಾರು?, ಸಂಸದನಾಗಿ ಕಾಮನ್ ಸೆನ್ಸ್ ಬೇಡ್ವಾ?, ಅವರು ಮನೆಯಿಂದ ದುಡ್ಡು ಹಾಕಿ ಬಸ್ ನಿಲ್ದಾಣ ಕಟ್ಟಿಸಿದ್ದಾರಾ? ಎಂದು ಸಂಸದ ಪ್ರತಾಪ್ ಸಿಂಹ ಅವರನ್ನು ವಿಪಕ್ಷನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ‘ಗುಂಬಜ್ ತೆರವು ಮಾಡಲು ಜಿಲ್ಲಾಡಳಿತದ ಅನುಮತಿ ಬೇಕಿಲ್ಲ’ –ಸಂಸದ ಪ್ರತಾಪ್ ಸಿಂಹ ಗುಡುಗು

ಮೈಸೂರು ನಗರದ ಊಟಿ ರಸ್ತೆಯ ಜೆಎಸ್‌ಎಸ್‌ ಕಾಲೇಜು ಬಳಿ ನಿರ್ಮಿಸಿರುವ ಬಸ್  ಶೆಲ್ಟರ್ ಮೇಲಿರುವ ಗುಂಬಜ್ ತೆರವು ಮಾಡದಿದ್ದರೆ, ತಾನೇ ಬಂದು ಒಡೆಯುವುದಾಗಿ ಸಂಸದ ಪ್ರತಾಪ್ ಸಿಂಹ ಗುಡುಗಿದ್ದರು. ಈ ಬಗ್ಗೆ ವಿಪಕ್ಷನಾಯಕ ಸಿದ್ದರಾಮಯ್ಯ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಅಶಾಂತಿ ನಿರ್ಮಾಣ ಮಾಡಲು ಸಂಸದರು ಈ ರೀತಿ ಮಾತನಾಡುತ್ತಿದ್ದಾರೆ. ಅಧಿಕಾರಿಗಳು ವಿನ್ಯಾಸ ಕೊಡುವಾಗ ಏನು ಮಾಡುತ್ತಿದ್ದೀರಿ?. ಈಗ ನಾನೇ ಒಡೆಯುತ್ತೇನೆ ಅಂದ್ರೆ ಅದರ ಅರ್ಥ ಏನು ?. ಚುನಾವಣೆ ಸಂದರ್ಭದಲ್ಲಿ ಮತಗಳ ಕ್ರೋಡಿಕರಣಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ. ಹೀಗೆ ಇರಬೇಕು ಎಂಬ ರೂಲ್ಸ್ ಎಲ್ಲಿದೆ?. ಸರ್ಕಾರಿ ಅಧಿಕಾರಿಗಳು ಮಾಡಿರುವ  ಪ್ಲ್ಯಾನ್ ಇದು. ಗುಂಬಜ್ ರೀತಿ ಇರುವುದನೆಲ್ಲಾ ಒಡೆದು ಬಿಡುತ್ತೀರಾ?.  ಜಾತಿ ಧರ್ಮದ ವಿಚಾರವನ್ನು ಜನರು ಒಪ್ಪುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

suddiyaana