ಡಿಕೆಶಿಗೆ ಕೆಡವಲು ಮಾಟ? – ಪ್ರಜ್ವಲ್‌ ಗೂ ಯಾಗಕ್ಕೂ ಸಂಬಂಧವಿದ್ಯಾ?
ಶತ್ರು ಭೈರವಿ ಯಾಗವೇ ಏಕೆ?

ಡಿಕೆಶಿಗೆ ಕೆಡವಲು ಮಾಟ? – ಪ್ರಜ್ವಲ್‌ ಗೂ ಯಾಗಕ್ಕೂ ಸಂಬಂಧವಿದ್ಯಾ?ಶತ್ರು ಭೈರವಿ ಯಾಗವೇ ಏಕೆ?

ಒಂದು ಕಡೆ ಜರ್ಮನಿಯಿಂದ ಪ್ರಜ್ವಲ್‌ ರೇವಣ್ಣ ಫ್ಲೈಟ್‌ ಹತ್ತುತ್ತಿದ್ದಂತೆ ಇನ್ನೊಂದು ಕಡೆ ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಮತ್ತೊಂದು ಬಾಂಬ್‌ ಹಾಕಿದ್ದಾರೆ.. ಸರ್ಕಾರವನ್ನು  ಕೆಡವಲು ಕೇರಳದಲ್ಲಿ ಯಾಗ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.. ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರು ಈ ಯಾಗವನ್ನು ನಡೆಸುತ್ತಿದ್ದಾರೆಂದು ಹೇಳಿರುವ ಡಿಕೆಶಿ, ಸಿಎಂ ಹಾಗೂ ತಮ್ಮ ವಿರುದ್ಧ ಶತ್ರು ಭೈರವಿ ಯಾಗ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ..

ಇದನ್ನೂ ಓದಿ: ಪೆನ್‌ ಡ್ರೈವ್‌ ಪ್ರಜ್ವಲ್‌ ಕೊನೆಗೂ ಅರೆಸ್ಟ್‌  – ಜೆಡಿಎಸ್‌ ಗೆ ಹೊಡೆತ ಬೀಳುತ್ತಾ?

ಡಿಕೆಶಿ ಕಟ್ಟಿಹಾಕಲು ಯಾಗ?

ಕೇರಳದ ರಾಜರಾಜೇಶ್ವರಿ ದೇಗುಲದ ಸಮೀಪದಲ್ಲಿ ಯಾಗ ನಡೆಸಲಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಆರೋಪ ಮಾಡಿದ್ದಾರೆ.. ಈ ಯಾಗದ ಬಗ್ಗೆ ಮಾಹಿತಿಯನ್ನು ಕಲೆಹಾಕಿರುವ ಡಿಸಿಎಂ, ಅದರಲ್ಲಿ 21 ಕಪ್ಪು ಮೇಕೆಗಳನ್ನು ಬಲಿ ಕೊಡಲು ಸಿದ್ಧತೆ ಮಾಡಲಾಗಿದೆ ಎಂದಿದ್ದಾರೆ.. ಇನ್ನು ಮೇಕೆಯ ಜೊತೆಗೆ ಹತ್ತು ಕೋಣಗಳ ಬಲಿ ನೀಡಲೂ ಮುಂದಾಗಿದ್ದಾರೆ.. ಅಲ್ಲದೆ ಐದು ಹಂದಿಗಳು, ಕೋಳಿಗಳ ಬಲಿಗೂ ಸಿದ್ಧತೆ ಮಾಡಲಾಗಿದೆಯಂತೆ.. ಹೀಗೆ ಪಂಚ ಬಲಿಯ ಮೂಲಕ ಶತ್ರು ಭೈರವಿ ಯಾಗ ನಡೆಸುತ್ತಿದ್ದಾರೆ ಎನ್ನುವುದು ಡಿಸಿಎಂ ಆರೋಪ.. ಈ ಯಾಗವನ್ನು ಸಿಎಂ ಸಿದ್ದರಾಮಯ್ಯ  ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧವೇ ಮಾಡಲಾಗುತ್ತಿದೆಯಂತೆ.. ಈ ಶತ್ರು ಭೈರವಿ ಯಾಗ ಈಗಲೂ ಕೇರಳದಲ್ಲಿ ಮುಂದುವರೆದಿದೆ ಎಂದು ಡಿಕೆ ಶಿವಕುಮಾರ್‌ ಖಚಿತ ಮಾಹಿತಿ ನೀಡಿದ್ದಾರೆ.

ಈ ರೀತಿ ಯಾಗ ನಡೆಸುತ್ತಿರುವ ಮಾಹಿತಿ ಸಿಕ್ಕಿದ ಬೆನ್ನಲ್ಲೇ ಕೇರಳದ ಕೆಲ ತಂತ್ರಿಗಳು ಡಿಸಿಎಂ ಡಿಕೆ ಶಿವಕುಮಾರ್  ಅವರಿಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರಂತೆ.. ಇದರ ಬೆನ್ನಲ್ಲೇ ಯಾರು ಏನೇ ಯಾಗ ಮಾಡಿದರೂ ತಮ್ಮನ್ನು ಕಾಪಾಡೋದಿಕ್ಕೆ ಭಗವಂತ ಇದ್ದಾನೆ ಎಂಬ ವಿಶ್ವಾಸವನ್ನು ಡಿಕೆಶಿ ವ್ಯಕ್ತಪಡಿಸಿದ್ದಾರೆ.. ಡಿಸಿಎಂ ಈ ರೀತಿಯ ಆರೋಪ ಮಾಡಿರುವುದರಿಂದ ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೂ ಈ ಯಾಗಕ್ಕೂ ಸಂಬಂಧವಿದೆಯೇ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.

Shwetha M