ನಾಮಪತ್ರ ಗೊಂದಲಕ್ಕೆ ತೆರೆ – ಮತಯುದ್ಧಕ್ಕೆ ಸಜ್ಜಾದ ಡಿಕೆಶಿ!

ನಾಮಪತ್ರ ಗೊಂದಲಕ್ಕೆ ತೆರೆ – ಮತಯುದ್ಧಕ್ಕೆ ಸಜ್ಜಾದ ಡಿಕೆಶಿ!

ಕಾರ್ಯಕರ್ತರ ದಂಡು. ಕಾಂಗ್ರೆಸ್ ಬಾವುಟಗಳ ಹಾರಾಟ. ಬೃಹತ್ ಮೆರವಣಿಗೆ. ಹೀಗೆ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ ಶಿವಕುಮಾರ್​ರ ಶಕ್ತಿಪ್ರದರ್ಶನಕ್ಕೆ ಕನಕಪುರವೇ ಕಂಪಿಸಿತ್ತು. ಇಲ್ಲೇನಿದ್ರೂ ಡಿಕೆ ಬ್ರದರ್ಸ್ ಹವಾ ಅಂತಾ ಬೆಂಬಲಿಗರೆಲ್ಲಾ ಜೈಕಾರ ಕೂಗಿದ್ರು.

ಆದ್ರೆ ಅದ್ಧೂರಿಯಾಗಿ ನಾಮಿನೇಷನ್ ಫೈಲ್ ಮಾಡಿದ ಡಿಕೆಶಿಗೆ ಅಂದಿನಿಂದಲೇ ನಡುಕ ಶುರುವಾಗಿತ್ತು. ಚುನಾವಣಾ ಯುದ್ಧ ಆರಂಭಕ್ಕೂ ಮುನ್ನವೇ ಶಸ್ತ್ರತ್ಯಾಗ ಮಾಡುವಂಥ ಸಂದರ್ಭ ಬರುವ ಭಯ ಕಾಡಿತ್ತು. ಯಾಕಂದ್ರೆ ಆಸ್ತಿ ಹಾಗೂ ತೆರಿಗೆ ಲೆಕ್ಕಾಚಾರ ಸಮಸ್ಯೆಯಿಂದಾಗಿ ನಾಮಪತ್ರ ರಿಜೆಕ್ಟ್​ ಮಾಡುತ್ತಾರೆ ಎನ್ನುವ ಆತಂಕ ಎದುರಾಗಿತ್ತು. ಇದೇ ಕಾರಣಕ್ಕೆ ಕೊನೇ ಕ್ಷಣದಿಂದ ಕನಕಪುರ ಕ್ಷೇತ್ರದಿಂದ ಸೋದರ ಡಿ.ಕೆ ಸುರೇಶ್​ರಿಂದಲೂ ಉಮೇದುವಾರಿಕೆ ಸಲ್ಲಿಸಿದ್ರು. ಆದ್ರೆ ಈ ಭಯ, ಈ ಗೊಂದಲಗಳಿಗೆಲ್ಲಾ ಇವತ್ತು ತೆರೆ ಬಿದ್ದಿದೆ. ಡಿಕೆ ಬ್ರದರ್ಸ್ ಜೊತೆ ಕಾಂಗ್ರೆಸ್ ನಾಯಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಲ್ಲಿಸಿದ್ದ ನಾಲ್ಕು ನಾಮಪತ್ರಗಳು ಸ್ವೀಕೃತವಾಗಿವೆ. ಚುನಾವಣಾ ಆಯೋಗ  ನಾಮಪತ್ರ ಅಂಗೀಕರಿಸಿದ್ದು, ಡಿಕೆ ಶಿವಕುಮಾರ್ ಸ್ಪರ್ಧೆಗೆ ಯಾವುದೇ ಅಡ್ಡಿ ಇಲ್ಲ ಎಂದಿದೆ. ಈ ಮೂಲಕ ಕನಕಪುರ ರಣಕಣದಲ್ಲಿ ಕಾಂಗ್ರೆಸ್​ನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಮತ್ತು ಬಿಜೆಪಿಯ ಸಾಮ್ರಾಟ್ ಆರ್.ಅಶೋಕ್ ನಡುವೆ ಕದನ ನಡೆಯೋದು ಫಿಕ್ಸ್ ಆಗಿದೆ.

suddiyaana