ಕೊವಿಡ್ ವೇಳೆ ನಡೆದ ಭ್ರಷ್ಟಾಚಾರದ ವರದಿ ಕೇಳಿದ ದಿನೇಶ್ ಗುಂಡೂರಾವ್ – ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣದ ತನಿಖೆಗೆ ಆದೇಶ

ಕೊವಿಡ್ ವೇಳೆ ನಡೆದ ಭ್ರಷ್ಟಾಚಾರದ ವರದಿ ಕೇಳಿದ ದಿನೇಶ್ ಗುಂಡೂರಾವ್ – ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣದ ತನಿಖೆಗೆ ಆದೇಶ

ಆರೋಗ್ಯ ಸಚಿವರಾದ ಮೇಲೆ ದಿನೇಶ್ ಗುಂಡೂರಾವ್ ಫುಲ್ ಌಕ್ಟೀವ್ ಆಗಿದ್ದು, ಇಲಾಖೆಯಲ್ಲಿನ ಅವ್ಯವಸ್ಥೆಗಳ ವಿರುದ್ಧ ಸಮರ ಸಾರಿದ್ದಾರೆ. ಇದೀಗ ಕೊವಿಡ್ ವೇಳೆ ನಡೆದ ಭ್ರಷ್ಟಾಚಾರದ ಬಗ್ಗೆ ವರದಿ ಕೇಳಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ದಿನೇಶ್, ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮತ್ತೊಂದು ಸಭೆಯಲ್ಲಿ ಸಂಪೂರ್ಣ ವರದಿ ನೀಡಬೇಕೆಂದು ತಿಳಿಸಿದ್ದಾರೆ. ಇದೇ ವೇಳೆ ಕೊವಿಡ್ ವೇಳೆ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿನ ಆಕ್ಸಿಜನ್ ದುರಂತ ಪ್ರಕರಣದ ತನಿಖೆಗೆ ಮತ್ತೆ ಮರುಜೀವ ನೀಡಿದ್ದು, ಈ ಬಗ್ಗೆಯೂ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಚಾಮರಾಜನಗರದ ಆಕ್ಸಿಜನ್ ದುರಂತ ಪ್ರಕರಣದ ಸಂಬಂಧ ಆರೋಗ್ಯ ಇಲಾಖೆಯಿಂದ ತನಿಖೆಯೇ ಆಗಿಲ್ಲ. ಇದರಲ್ಲಿ ತಪ್ಪು ಯಾರದ್ದು ಎಂದು ಗೊತ್ತೇ ಇಲ್ಲ. ಈ ಹಿನ್ನೆಲೆ ಪ್ರಕರಣದ ಸಂಪೂರ್ಣ ವರದಿ ಕೇಳಿದ್ದಾರೆ.

suddiyaana