ಫೈನ್.. ಬ್ಯಾನ್.. ದಿಗ್ವೇಶ್ ತಪ್ಪು ಮಾಡಿಲ್ವಾ – ಪಂತ್ ಕ್ರೆಡಿಟ್ ಗೆ ರಾಥಿ ಬಲಿಯಾದ್ರಾ?

ಫೈನ್.. ಬ್ಯಾನ್.. ದಿಗ್ವೇಶ್ ತಪ್ಪು ಮಾಡಿಲ್ವಾ – ಪಂತ್ ಕ್ರೆಡಿಟ್ ಗೆ ರಾಥಿ ಬಲಿಯಾದ್ರಾ?

2025ರ ಸೀಸನ್​ನಲ್ಲಿ ದಿಗ್ವೇಶ್ ರಾಥಿಯಷ್ಟು ಕಾಂಟ್ರವರ್ಸಿ ಯಾರೂ ಮಾಡಿಲ್ಲ. ಅದು ಆನ್​ ಫೀಲ್ಡ್ ಇರ್ಲಿ ಅಥವಾ ಆಫ್ ಫೀಲ್ಡ್ ಇರ್ಲಿ.. ಅದ್ರಲ್ಲೂ ಆರ್​ಸಿಬಿ ವಿರುದ್ಧದ ಪಂದ್ಯದ ಬಳಿಕ ಮತ್ತಷ್ಟು ಹಾಟ್ ಟಾಪಿಕ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತೂ ರಾಥಿಯದ್ದೇ ಪೋಸ್ಟ್, ಮೀಮ್ಸ್, ಟ್ರೋಲ್ಸ್, ರೀಲ್ಸ್.. ಫುಲ್ ಟ್ರೆಂಡಿಂಗ್. ಬಟ್ ಇಂಟ್ರೆಸ್ಟಿಂಗ್ ಅಂದ್ರೆ ರಾಥಿ ಇಶ್ಯೂ ಜೊತೆ ರಿಷಭ್ ಪಂತ್ ಕೂಡ ಲಿಂಕ್ ಆಗ್ತಿದ್ದಾರೆ. ಕೆಲ ಮಾಜಿ ಕ್ರಿಕೆಟಿಗರು ರಾಥಿ ಬೆನ್ನಿಗೆ ನಿಂತು ರಿಷಥ್ ಪಂತ್ ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ಈಗ ಇಡೀ ವಿವಾದವನ್ನ ಮತ್ತೊಂದು ಮಜಲಿಗೆ ಕೊಂಡೊಯ್ದಿದೆ.

ಇದನ್ನೂ ಓದಿ :  RCBಯ ಚಿಲ್ ಬಾಯ್ ಸ್ವಸ್ತಿಕ್ ಚಿಕಾರ -1 ಪಂದ್ಯ.. 585 ರನ್.. ಎಂಥಾ ಟ್ಯಾಲೆಂಟ್?

ಆರ್​ಸಿಬಿ ವರ್ಸಸ್ ಎಲ್​ಎಸ್​ಜಿ ನಡುವಿನ ಮ್ಯಾಚಲ್ಲಿ ಏನಾಯ್ತು ಅಂತಾ ನಿಮ್ಗೆಲ್ಲಾ ಗೊತ್ತೇ ಇದೆ. 17ನೇ ಓವರ್ ಥೇಟ್ ಸಿನಿಮಾ ಥರಾನೇ ಇತ್ತು. ಲಕ್ನೋ ನೀಡಿದ್ದ ಬೃಹತ್ ಗುರಿ ಬೆನ್ನಟ್ಟಿದ ಆರ್‌ಸಿಬಿ 16 ಓವರ್‌ಗಳ ಅಂತ್ಯಕ್ಕೆ 189 ರನ್ ಗಳಿಸಿತ್ತು. ಉಳಿದ 4 ಓವರ್‌ಗಳಲ್ಲಿ ಗೆಲುವಿಗೆ 39 ರನ್‌ ಬೇಕಿತ್ತು. ಜಿತೇಶ್ ಹಾಗೇ ಮಯಾಂಕ್ ಕ್ರೀಸ್‌ನಲ್ಲಿದ್ದರು. ಸೋ 17ನೇ ಓವರ್ ಬೌಲಿಂಗ್​ಗೆ ಬಂದ ರಾಥಿ ಫಸ್ಟ್ ಬಾಲಲ್ಲೇ ಜಿತೇಶ್​ರನ್ನ ಔಟ್ ಮಾಡಿದ್ರು. ಬಟ್ ಅದು ನೋ ಬಾಲ್ ಆಗಿತ್ತು. ಇದು ಒಂದು. ಬಟ್ ಅದೇ ಓವರ್​ನಲ್ಲೇ ದಿಗ್ವೇಶ್‌ ಮತ್ತೊಮ್ಮೆ ಶಾಕ್ ನೀಡಿದ್ರು. ನಾನ್‌ಸ್ಟ್ರೈಕರ್‌ ಎಂಡ್‌ನಲ್ಲಿದ್ದ ಜಿತೇಶ್‌ ಅವರು ಕ್ರೀಸ್‌ನಿಂದ ಮುಂದೆ ಬಂದಿದ್ದಾರೆಂದು ಬೆಲ್ಸ್‌ ಎಗರಿಸಿ ಔಟ್‌ಗೆ ಮನವಿ ಮಾಡಿದರು. ಪರಿಶೀಲನೆ ವೇಳೆ, ದಿಗ್ವೇಶ್‌ ಅವರು, ಜಿತೇಶ್‌ಗೂ ಮೊದಲೇ ಕ್ರೀಸ್‌ ದಾಟಿರುವುದು ಕಂಡು ಬಂತು. ಹಾಗಾಗಿ, ಪರದೆ ಮೇಲೆ ನಾಟೌಟ್ ಎಂದು ಪ್ರಕಟವಾಯಿತು. ಅಷ್ಟರಲ್ಲಿ, ರಿಷಭ್‌ ಕೂಡ ‘ನಾನ್‌ಸ್ಟ್ರೈಕರ್ ರನೌಟ್’ ಔಟ್‌ ಅಪೀಲ್​ನ ವಿತ್ ಡ್ರಾ ಮಾಡಿದ್ರು. ರಿಷಭ್‌ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಜಿತೇಶ್‌ ಕೂಡ ಅಪ್ಪಿಕೊಂಡಿದ್ರು. ಕ್ರೀಡಾಸ್ಪೂರ್ಥಿ ಅಂತೆಲ್ಲಾ ಕೊಂಡಾಡಿದ್ರು. ಬಟ್ ರಿಷಭ್​ರ ಇದೇ ನಡೆ ಕೆಲ ಕ್ರಿಕೆಟಿಗರ ಕಣ್ಣು ಕೆಂಪಾಗಿದೆ.

ಪ್ಲೇಆಫ್ಸ್​ಗಂತೂ ಸೆಲೆಕ್ಟ್ ಆಗ್ಲಿಲ್ಲ. ಸೋ ಲೀಗ್ ಹಂತದ ಕೊನೇ ಪಂದ್ಯವನ್ನಾದ್ರೂ ಗೆದ್ದು ಸೀಸನ್​ಗೆ ಗುಡ್ ಬೈ ಹೇಳೋಣ ಅನ್ನೋದು ರಾಥಿ ಇಂಟೆನ್ಷನ್ ಆಗಿತ್ತು. ಬಟ್ ಜಿತೇಶ್ ಮತ್ತು ಮಯಾಂಕ್ ಆಡ್ತಿದ್ದನ್ನ ನೋಡಿ ಮ್ಯಾಚ್ ಆಲ್ರೆಡಿ ಆರ್​ಸಿಬಿ ಪಡೆ ಹೋಗಿದೆ ಅನ್ನೋದು ರಾಥಿಗೆ ಗೊತ್ತಾಗಿತ್ತು. ಹೀಗಾಗೇ ಮ್ಯಾಚ್ ಗೆಲ್ಲಲೇಬೇಕು ಅಂತಾ ಜಿತೇಶ್ ಶರ್ಮಾ ಅವರನ್ನು ಮಂಕಡ್ ರನೌಟ್ ಮಾಡಿದ್ದರು. ಆದ್ರೆ ಇದನ್ನ ಒಪ್ಪದ ಪಂತ್ ಅಪೀಲ್ ವಾಪಸ್ ಪಡೆದಿದ್ರು. ಆದ್ರೆ ರಿಷಭ್ ಪಂತ್ ನಡೆಯನ್ನ ಒಪ್ಪದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಆರ್.ಅಶ್ವಿನ್, ಪಂತ್ ನಿರ್ಧಾರ ಬೌಲರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಎಂದಿದ್ದಾರೆ. ಅಷ್ಟೇ ಅಲ್ದೇ. ಮನವಿಯನ್ನ ಯಾಕೆ ವಾಪಸ್ ತಗೊಂಡ್ರು..? ಕೋಟ್ಯಂತರ ಜನರ ಮುಂದೆ ಅವರನ್ನು ಏಕೆ ಅವಮಾನಿಸಬೇಕು? ದಿಗ್ವೇಶ್ ರಾಥಿ ನಿಯಮಗಳ ಪ್ರಕಾರವೇ ರನೌಟ್​ಗೆ ಮನವಿ ಮಾಡಿದ್ದರು.? ಇದು ಬೌಲರ್​ಗೆ ಮಾಡಿದ ಅವಮಾನ ಅಲ್ವಾ. ನಾಯಕ ಎನಿಸಿಕೊಂಡವನು ಬೌಲರ್​ಗಳಿಗೆ ಬೆಂಬಲ ನೀಡಬೇಕು. ಕ್ರೀಡಾ ಸ್ಫೂರ್ತಿಯ ಹೆಸರಿನಲ್ಲಿ ಎಲ್ಲರ ಮುಂದೆ ಅವಮಾನ ಮಾಡುವುದು ಎಷ್ಟು ಸರಿ ಎಂದು ಅಶ್ವಿನ್ ಪ್ರಶ್ನಿಸಿದ್ದಾರೆ. ಌಕ್ಚುಲಿ ಇಲ್ಲಿ ಅಶ್ವಿನ್ ಮಂಕಡ್ ರನ್ ಪರ ನಿಲ್ಲೋಕೆ ಕಾರಣನೂ ಇದೆ. ಈ ಹಿಂದೆ ಅಶ್ವಿನ್ ಕೂಡ ಮಂಡಕ್ ರನೌಟ್ ಮಾಡಿದ್ರು.

ಇನ್ನು ನೋಟ್​ಬುಕ್ ಸೆಲೆಬ್ರೇಷನ್ ವಿಚಾರವಾಗಿ ಈಗಾಗ್ಲೇ ರಾಥಿ ಸಾಕಷ್ಟು ದಂಡವನ್ನೂ ಕಟ್ಟಿದ್ದಾರೆ. ಹಾಗೇ ಗುಜರಾತ್ ವಿರುದ್ಧದ ಪಂದ್ಯದಿಂದ ನಿಷೇಧ ಕೂಡ ಮಾಡ್ಲಾಗಿತ್ತು. ಆದ್ರೆ ಬಿಸಿಸಿಐನ ಈ ನಡೆಯನ್ನ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಲ್ ಟೀಕಿಸಿದ್ದಾರೆ. ಐಪಿಎಲ್‌ನಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆಟಗಾರರ ವಿಚಾರದಲ್ಲಿ ಬಿಸಿಸಿಐ ತಾರತಮ್ಯ ಮಾಡ್ತಿದೆ ಎಂದು ಕಿಡಿ ಕಾರಿದ್ದಾರೆ. ಎಂಎಸ್ ಧೋನಿ, ವಿರಾಟ್ ಕೊಹ್ಲಿಯಂಥ ದೊಡ್ಡ ದೊಡ್ಡ ಪ್ಲೇಯರ್ಸ್ ಈ ರೀತಿಯ ದಂಡ ಎದುರಿಸಿಲ್ಲ. 2019 ರಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ನೋ-ಬಾಲ್‌ ವಿವಾದದ ವೇಳೆ ಅಂಪೈರ್‌ಗಳ ನಿರ್ಧಾರವನ್ನು ಪ್ರಶ್ನಿಸಲು ಧೋನಿ ಮೈದಾನಕ್ಕೆ ಬಂದಿದ್ರು. ಆ ಟೈಮಲ್ಲಿ ಧೋನಿಯವ್ರಿಗೆ ಪಂದ್ಯ ಶುಲ್ಕದ ಶೇಕಡಾ 50ರಷ್ಟು ದಂಡ ಮಾತ್ರ ಹಾಕಲಾಗಿತ್ತು. ಹಾಗೇ ವಿರಾಟ್ ಕೊಹ್ಲಿ ಆನ್ ಫೀಲ್ಡ್​ನಲ್ಲಿ ಸಾಕಷ್ಟು ಕಾಂಟ್ರವರ್ಸಿಗಳಲ್ಲಿದ್ರೂ ಎಂದಿಗೂ ಅವ್ರನ್ನ ಮ್ಯಾಚ್​ನಿಂದ ಬ್ಯಾನ್ ಮಾಡಿಲ್ಲ. ಬಟ್ ಮೊದಲನೇ ಸೀಸನ್ ಆಡ್ತಿರೋ ದಿಗ್ವೇಶ್ ರಾಥಿಗೆ ಮಾತ್ರ ಯಾಕೆ ಬ್ಯಾನ್ ಶಿಕ್ಷೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿಗ್ವೇಶ್ ರಾಥಿ ಐಪಿಎಲ್​ನ ತಮ್ಮ ಫಸ್ಟ್ ಸೀಸನ್​ನಲ್ಲೇ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಬಟ್ ಕಹಿ ಸತ್ಯ ಅಂದ್ರೆ ಈ ಕಾಂಟ್ರವರ್ಸಿಗಳ ನಡುವೆ ಅವ್ರ ಪರ್ಫಾಮೆನ್ಸ್ ಸೈಡ್​ಲೈನ್ ಆಗ್ತಿದೆ. ನಿಜ ಹೇಳ್ಬೇಕಂದ್ರೆ ರಾಥಿ ಟ್ಯಾಲೆಂಟೆಡ್ ಬೌಲರ್. ಸೋ ಎಲ್ಲಾ ಬೌಲರ್ಸ್​ರಂತೆ ವಿಕೆಟ್ ತೆಗೆದಾಗ ತಾವೂ ಸೆಲೆಬ್ರೇಟ್ ಮಾಡ್ತಾರೆ. ಅದೂ ಕೂಡ ನೋಟ್ ಬುಕ್ ಸೆಲೆಬ್ರೇಷನ್.. ಮೊದ್ಲೆಲ್ಲಾ ತಮ್ಮ ಕೈಮೇಲೆ ಸೈನ್ ಹಾಕಿದ ಥರ ಸೆಲೆಬ್ರೇಟ್ ಮಾಡ್ತಿದ್ರು. ಕಣ್ಸಲ್ಲೆಯಲ್ಲೇ ಬ್ಯಾಟರ್​ನ ಆಚೆ ಹೋಗು ಎನ್ನುವಂತೆ ಸಂಜ್ಞೆ ಮಾಡ್ತಿದ್ರು. ಇದಕ್ಕೆ ಬಿಸಿಸಿಐ ಬ್ರೇಕ್ ಹಾಕಿದ್ಮೇಲೆ ಪಿಚ್ ಮೇಲೆ ಸೈನ್ ಹಾಕೋಕೆ ಶುರು ಮಾಡಿದ್ರು. ಒಬ್ಬ ಬೌಲರ್ ಒಂದು ವಿಕೆಟ್ ತೆಗೆಯೋದು ಎಷ್ಟು ಕಷ್ಟ ಅನ್ನೋದು ಅವ್ರಿಗೆ ಗೊತ್ತೇ ಇರುತ್ತೆ. ಸೋ ಸೆಲೆಬ್ರೇಟ್ ಮಾಡ್ಲಿ. ಅದಕ್ಕೆ ಯಾರ ಆಕ್ಷೇಪವೂ ಇಲ್ಲ. ವಿರೋಧವೂ ಇಲ್ಲ. ಬಟ್ ಅದು ಅತಿಯಾಗಬಾರದು. ಎದುರಾಳಿ ತಂಡದ ಬ್ಯಾಟರ್ಸ್​​ನ ಟ್ರಿಗರ್ ಮಾಡಬಾರದು ಅಷ್ಟೇ.

Shantha Kumari

Leave a Reply

Your email address will not be published. Required fields are marked *