ಉದಯನಿಧಿ ತಲೆ ಕಡಿದುಕೊಟ್ಟವರಿಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಅಯೋಧ್ಯೆಯ ಸಾಧು

ಉದಯನಿಧಿ ತಲೆ ಕಡಿದುಕೊಟ್ಟವರಿಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಅಯೋಧ್ಯೆಯ ಸಾಧು

ಸನಾತನ ಧರ್ಮವನ್ನ ನಿರ್ಮೂಲನೆ ಮಾಡಬೇಕು ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಹಾಗೂ ಹಾಲಿ ಸಚಿವ ಉದಯನಿಧಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಅಯೋಧ್ಯೆಯ ಸಾಧುವೊಬ್ಬರು ಉದಯನಿಧಿ ಅವರ ತಲೆ ಕಡಿದುಕೊಟ್ಟವರಿಗೆ 10 ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ವ್ಯಾಪಾರಿಗಳ ಅಪಹರಣ – ಬರಗೆಟ್ಟ ದೇಶದಲ್ಲಿ ಅಲ್ಪಸಂಖ್ಯಾತರೇ ಟಾರ್ಗೆಟ್‌!

ಅಯೋಧ್ಯೆಯ ತಪಸ್ವಿ ಚಾವ್ನಿಯ ಮಹಾಂತ್ ಪರಮಹಂಸ ದಾಸ್ ಅವರು ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಹಾಗೂ ಹಾಲಿ ಸಚಿವ ಉದಯನಿಧಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸನಾತನ ಧರ್ಮ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಕಳೆದ 2,000 ವರ್ಷಗಳಲ್ಲಿ ಹಲವು ಧರ್ಮಗಳು ಬಂದು ನಶಿಸಿಹೋಗಿವೆ. ಭೂಮಿಯಲ್ಲಿ ನಿರಂತರವಾಗಿರುವುದು ಒಂದೇ ಅದು ಸನಾತನ ಧರ್ಮ ಎಂದು ಮಹಾಂತ್ ಪರಮಹಂಸ ದಾಸ್ ಹೇಳಿದ್ದಾರೆ.

ಸನಾತನ ಧರ್ಮಕ್ಕೆ ಆದಿ ಅಂತ್ಯಗಳಿಲ್ಲ. ಸನಾತನ ಧರ್ಮವನ್ನು ಹಿಂದೆಂದೂ ನಾಶ ಮಾಡಲು ಸಾಧ್ಯವಾಗಿಲ್ಲ, ಮುಂದೆಯೂ ನಾಶ ಮಾಡಲು ಸಾಧ್ಯವಿಲ್ಲ ಎಂದು ನಾಶ ಮಾಡಲು ಯತ್ನಿಸುವವರಿಗೆ ಮಹಾಂತ್ ಪರಮಹಂಸ ದಾಸ್ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಯಾರೂ ಉದಯನಿಧಿ ತಲೆ ತರದೇ ಇದ್ದರೆ, ನಾನೇ ನನ್ನ ಕೈಗಳಿಂದ ಆ ಕೆಲಸ ಮಾಡುತ್ತೇನೆ ಡಿಎಂಕೆ ನಾಯಕನ ತಲೆ ತೆಗೆಯಲು ನಾನು ಖಡ್ಗವನ್ನು ಸಿದ್ಧಪಡಿಸಿದ್ದೇನೆ. ಉದಯನಿಧಿ ಬೇರೆ ಧರ್ಮಗಳ ಬಗ್ಗೆಯೂ ಹೀಗೆಯೇ ಮಾತನಾಡಲಿ ಎಂದು ಮಹಾಂತ್ ಪರಮಹಂಸ ದಾಸ್  ಸವಾಲು ಹಾಕಿದ್ದಾರೆ

suddiyaana