ರೈತರ ಕಣ್ಮಣಿ ಕುಮಾರಸ್ವಾಮಿ – ಮೈತ್ರಿ ಗೆಲುವು ನಿಶ್ಚಿತ ಎಂದ ನಿಖಿಲ್‌ ಕುಮಾರಸ್ವಾಮಿ

ರೈತರ ಕಣ್ಮಣಿ ಕುಮಾರಸ್ವಾಮಿ – ಮೈತ್ರಿ ಗೆಲುವು ನಿಶ್ಚಿತ ಎಂದ ನಿಖಿಲ್‌ ಕುಮಾರಸ್ವಾಮಿ

ರೈತರ ಕಣ್ಮಣಿ, ರೈತರಿಗೆ ಮಿಡಿಯುವ ಹೃದಯ ಕುಮಾರಸ್ವಾಮಿಯವರದ್ದಾಗಿದೆ. ತನ್ನ ರಾಜಕೀಯ ಜೀವನದುದ್ದಕ್ಕೂ ಜನರಿಗಾಗಿ ಹೆಚ್‍ಡಿಕೆಯವರ ಹೃದಯ ಮಿಡಿದಿದೆ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ  ಹೇಳಿದ್ದಾರೆ.

ಇದನ್ನೂ ಓದಿ: ಸಿನಿಮಾ ಶೂಟಿಂಗ್‌ ವೇಳೆ ನಟ ಅಜಿತ್ ಕುಮಾರ್ ಕಾರು ಅಪಘಾತ – ಭಯಾನಕ ದೃಶ್ಯ ವೈರಲ್‌

ಹೆಚ್‌ಡಿ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದ ಬಳಿಕ ಮಂಡ್ಯದ ವಿವಿ ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ನಿಖಿಲ್‌ ಕುಮಾರಸ್ವಾಮಿ ಮಾತನಾಡಿದ್ದಾರೆ. ಕುಮಾರಸ್ವಾಮಿಯವರ 30 ವರ್ಷದ ರಾಜಕೀಯ ಜೀವನದುದ್ದಕ್ಕೂ ಜನರಿಗಾಗಿ ಹೃದಯ ಮಿಡಿದಿದೆ. ಈ ಕಾರಣದಿಂದಲೇ ಜನರು ಹೃದಯವಂತ ಅಂತ ಕರೆಯುತ್ತಾರೆ ಎಂದು ಭಾವುಕರಾಗಿ ಹೇಳಿದ್ದಾರೆ.

ದೇಶವನ್ನ ಕಟ್ಟಿಲಿಕ್ಕೆ ಮೋದಿಯವರು 10 ವರ್ಷ ಕೆಲಸ ಮಾಡುತ್ತಿದ್ದಾರೆ. ವಿಶ್ರಾಂತಿಯನ್ನೇ ಪಡೆಯದೇ ಕೆಲಸ ಮಾಡುತ್ತಿದ್ದಾರೆ. ಅವರನ್ನ ಮತ್ತೊಮ್ಮೆ ಪ್ರಧಾನಿ ಮಾಡಲು ದೇವೆಗೌಡರು ಕೈಜೋಡಿಸಿದ್ದಾರೆ ಎಂದು ನಿಖಿಲ್ ತಿಳಿಸಿದರು.

ಎನ್.ಡಿ.ಎ ಮೈತ್ರಿಗೆ ಮುಖ್ಯ ಕಾರಣ ಪ್ರಮೋದ್ ಸಾವಂತ್. ಮಂಡ್ಯದ ಜನರ ಋಣ ತೀರಿಸುವ ಕೆಲಸ ಮಾಡುತ್ತೇವೆ. ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡುವುದಿಲ್ಲ. ಕಾವೇರಿ ಸಮಸ್ಯೆಯನ್ನ ಕುಮಾರಸ್ವಾಮಿ ಬಗೆಹರಿಸುತ್ತಾರೆ ಅಂತ ತಾವು ಅಂದುಕೊಂಡಿದ್ದೀರಿ. ಅದಕ್ಕಾಗಿ ಕುಮಾರಸ್ವಾಮಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.

Shwetha M