ದಾವೂದ್ ಇಬ್ರಾಹಿಂ ವಿಷಪ್ರಾಶನದ ಅಸಲಿಯತ್ತೇನು? – ಪಾಕಿಸ್ತಾನದಲ್ಲಿ ಇಂಟರ್​ನೆಟ್ ಬಂದ್ ಆಗಿದ್ಯಾಕೆ?

ದಾವೂದ್ ಇಬ್ರಾಹಿಂ ವಿಷಪ್ರಾಶನದ ಅಸಲಿಯತ್ತೇನು? – ಪಾಕಿಸ್ತಾನದಲ್ಲಿ ಇಂಟರ್​ನೆಟ್ ಬಂದ್ ಆಗಿದ್ಯಾಕೆ?

ದಾವೂದ್ ಕಸ್ಕರ್ ಇಬ್ರಾಹಿಂ.. ಭಾರತದ ಮೋಸ್ಟ್ ವಾಂಟೆಡ್ ಟೆರರಿಸ್ಟ್.. 1993ರ ಮುಂಬೈ ಸೀರಿಸ್ ಬಾಂಬ್​ ಬ್ಲಾಸ್ಟ್​ ಮಾಸ್ಟರ್​ಮೈಂಡ್ ದಾವೂದ್ ಈಗ ಮತ್ತೆ ಸುದ್ದಿಯಲ್ಲಿದ್ದಾನೆ. ಭೂಗತ ಪಾತಕಿ ದಾವೂದ್ ಇದ್ದಕ್ಕಿದ್ದಂತೆ ಕರಾಚಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಕೆಲ ಪಾಕಿಸ್ತಾನದ​ ಮಾಧ್ಯಮಗಳಲ್ಲೂ ಬಂದಿರೋ ವರದಿ ಪ್ರಕಾರ ದಾವೂದ್ ಇಬ್ರಾಹಿಂಗೆ ವಿಷ ಪ್ರಾಶನ ಮಾಡಲಾಗಿದೆ. ವಿಷಪ್ರಾಷನಕ್ಕೊಳಗಾಗಿ ಭೂಗತ ಪಾತಕಿ ಆರೋಗ್ಯ ಗಂಭೀರವಾಗಿದ್ದು, ಈಗ ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದಾನೆ. ನಿಜಕ್ಕೂ ದಾವೂದ್ ಕೇಸ್​​ನಲ್ಲಿ ಆಗಿರೋದೇನು? ಅಂಡರ್​​ವರ್ಲ್ಡ್​​ ಡಾನ್​ಗೆ ವಿಷ ಕೊಟ್ಟಿದ್ಯಾರು? ಭಾರತದ ಇಂಟೆಲಿಜೆನ್ಸ್ ಏಜೆನ್ಸಿ ಮತ್ತೊಂದು ಮಹಾ ಬೇಟೆಯಾಡಿದ್ಯಾ? ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ವಿಷ ಪ್ರಾಶನ? – ಆಸ್ಪತ್ರೆಗೆ ದಾಖಲು!

ದಾವೂದ್ ಇಬ್ರಾಹಿಂ ಸದ್ಯ ಕರಾಚಿಯಲ್ಲಿರೋ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್​ನಲ್ಲಿದ್ದಾನೆ. ಆತನ ಆರೋಗ್ಯ ತುಂಬಾ ಸೀರಿಯಸ್​​ ಆಗಿದ್ದು, ಸಾವಿನ ಅಂಚಿಗೆ ತಲುಪಿದ್ದಾನೆ. ಡಿಸೆಂಬರ್ 15ರಂದು ತನ್ನ ಬಂಗಲೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ದಾವೂದ್​ನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾವೂದ್ ಅಡ್ಮಿಟ್ ಆಗಿರೋ ಕರಾಚಿ ಆಸ್ಪತ್ರೆಯ ಇಡೀ ಪ್ಲೋರ್​ನ್ನೇ ಸೀಲ್ ಮಾಡಲಾಗಿದೆ. ಅಂದ್ರೆ ಆ ಫ್ಲೋರ್​​ನಲ್ಲಿ ದಾವುದ್ ಬಿಟ್ರೆ ಇನ್ಯಾವ ಪೇಷೆಂಟ್​​ ಕೂಡ ಇಲ್ಲ. ಕೇವಲ ದಾವೂದ್ ಕುಟುಂಬಸ್ಥರು ಮತ್ತು ಹಾಸ್ಪಿಟಲ್ ಸಿಬ್ಬಂದಿಗೆ ಮಾತ್ರ ಫ್ಲೋರ್​​ಗೆ ಎಂಟ್ರಿಗೆ ಅವಕಾಶ ನೀಡಲಾಗ್ತಿದೆ. ಆಸ್ಪತ್ರೆಗೆ ಹೈ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ. ಪಾಕಿಸ್ತಾನದ ಸೇನೆಯೇ ಆಸ್ಪತ್ರೆಯನ್ನ 24/7  ಗಾರ್ಡ್ ಮಾಡ್ತಿದೆ. ಆದ್ರೆ ಇಲ್ಲಿ ಇಂಟ್ರೆಸ್ಟಿಂಗ್ ಆಗಿರೋದು ದಾವೂದ್ ಆಸ್ಪತ್ರೆಗೆ ದಾಖಲಾಗಿರೋದು ಯಾಕೆ ಅನ್ನೋದು? ಪಾಕಿಸ್ತಾನದ ಮಾಧ್ಯಮಗಳೇ ವರದಿ ಮಾಡಿರೋ ಪ್ರಕಾರ ದಾವೂದ್ ಇಬ್ರಾಹಿಂಗೆ ಯಾರೋ ವಿಷ ಪ್ರಾಶನ ಮಾಡಿದ್ದಾರೆ. ದಾವುದ್ ಸೇವಿಸೋ ಆಹಾರದಲ್ಲೋ ಏನೊ ವಿಷ ಮಿಕ್ಸ್​ ಮಾಡಲಾಗಿದ್ದು, ಇದನ್ನ ತಿಂದು ದಾವೂದ್ ಬಂಗಲೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದನಂತೆ. ಬಳಿಕ ಕುಟುಂಬಸ್ಥರು ದಾವೂದ್​ನನ್ನ ಕರಾಚಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷ ಸೇವಿಸಿದ್ರಿಂದಾಗಿ ದಾವೂದ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ಯಂತೆ. ಇನ್ನೂ ಕೆಲವರು ದಾವೂದ್ ಸತ್ತೇ ಹೋಗಿದ್ದಾನೆ ಅಂತಾನೂ ಸುದ್ದಿ ಹಬ್ಬಿಸ್ತಾ ಇದ್ದಾರೆ. ಡಿಸೆಂಬರ್ 17ರಂದು ರಾತ್ರಿ 8ರಿಂದ 9 ಗಂಟೆ ನಡುವೆ ದಾವೂದ್ ಸತ್ತು ಹೋಗಿದ್ದಾನಂತೆ. ಆದ್ರೆ ಆತ ಸತ್ತಿರೋದಕ್ಕೆ ಇದುವರೆಗೂ ಯಾವುದೇ ಪುರಾವೆ ಸಿಕ್ಕಿಲ್ಲ. ಈ ಬಗ್ಗೆ ಪಾಕ್​ ಸರ್ಕಾರ ಕೂಡ ಬಾಯಿ ಬಿಟ್ಟಿಲ್ಲ. ಬಟ್ ಗಂಭೀರ ಪರಿಸ್ಥಿತಿಯಲ್ಲಿ ದಾವೂದ್ ಹಾಸ್ಪಿಟಲ್​ಗೆ ಅಡ್ಮಿಟ್ ಆಗಿರೋದಂತೂ ನಿಜ.

ಯಾವಾಗ ದಾವೂದ್​ಗೆ ವಿಷಪ್ರಾಶನ ಮಾಡಲಾಗಿದೆ, ಅಂಡರ್​​ವರ್ಲ್ಡ್​ ಡಾನ್ ಆಸ್ಪತ್ರೆ ಸೇರಿದ್ದಾನೆ ಅನ್ನೋ ಮಾಹಿತಿ ಬಯಲಾಯ್ತೋ ಪಾಕಿಸ್ತಾನದಲ್ಲಿ ಅಲ್ಲೋಲಕಲ್ಲೋಲವಾಗ್ತಿದೆ. ದಾವೂದ್​ ಆಸ್ಪತ್ರೆ ಸೇರಿಸೋ ಸುದ್ದಿ ಮೊದಲಿಗೆ ಲೀಕ್ ಆಗಿರೋದು ಸೋಷಿಯಲ್ ಮೀಡಿಯಾ ಮೂಲಕ. ಹೀಗಾಗಿ ಪಾಕಿಸ್ತಾನದಾದ್ಯಂತ ಇಂಟರ್​​ನೆಟ್ ಕನೆಕ್ಷನ್​ನನ್ನ ಕಂಪ್ಲೀಟ್​ ಆಗಿ ಬಂದ್ ಮಾಡಲಾಗಿದೆ. ಫೇಸ್​​ಬುಕ್, ಟ್ವಿಟ್ಟರ್, ಇನ್​ಸ್ಟಾಗ್ರಾಂ, ಯೂಟ್ಯೂಬ್, ಗೂಗಲ್ ಯಾವುದೇ ಸೋಷಿಯಲ್​ ಮೀಡಿಯಾಗಳು, ಸರ್ಚ್ ಎಂಜಿನ್​ಗಳು ವರ್ಕ್ ಆಗ್ತಿಲ್ಲ. ಪಾಕಿಸ್ತಾನದ ಪತ್ರಕರ್ತೆ ಅರ್ಜು ಕಾಸ್ಮಿ ಹೇಳಿರೋ ಪ್ರಕಾರ, ಪಾಕ್ ಸರ್ಕಾರ ದಾವೂದ್ ಕುರಿತ ಸುದ್ದಿಯನ್ನ ಹತ್ತಿಕ್ಕೋಕೆ ಪ್ರಯತ್ನ ಮಾಡ್ತಿದ್ಯಂತೆ. ದಾವುದ್ ಹಾಸ್ಪಿಟಲೈಸೇಶನ್​ ಆಗ್ತಿದಂತೆ ಪಾಕ್ ಸರ್ಕಾರ ಪ್ಯಾನಿಕ್ ಆಗಿದೆ.

Shwetha M