ಡಿಕೆ ಸುರೇಶ್ ಪರ ನಡೆಯಬೇಕಿದ್ದ ದರ್ಶನ್ ರೋಡ್ ಶೋ ಕ್ಯಾನ್ಸಲ್!‌ – ಕಾರಣವೇನು ಗೊತ್ತಾ?

ಡಿಕೆ ಸುರೇಶ್ ಪರ ನಡೆಯಬೇಕಿದ್ದ ದರ್ಶನ್ ರೋಡ್ ಶೋ ಕ್ಯಾನ್ಸಲ್!‌ – ಕಾರಣವೇನು ಗೊತ್ತಾ?

ಎರಡು ದಿನಗಳ ಹಿಂದೆಯಷ್ಟೇ ಚಾಲೆಂಜಿಂಗ್‌ ಸ್ಟಾರ್‌  ದರ್ಶನ್ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತಯಾಚನೆ ಮಾಡಿದ್ದರು.  ಶನಿವಾರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರ ಪ್ರಚಾರಕ್ಕೆ ಮುಂದಾಗಿದ್ದರು. ಆದ್ರೆ ದಿಢೀರ್‌ ಆಗಿ ದರ್ಶನ್‌ ಪ್ರಚಾರ ಕ್ಯಾನ್ಸಲ್‌ ಆಗಿದೆ.

ಇದನ್ನೂ ಓದಿ: ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹತ್ಯೆ ಕೇಸ್‌ – ಎಬಿವಿಪಿಯಿಂದ ಗೃಹಸಚಿವರ ಮನೆ ಮುತ್ತಿಗೆಗೆ ಯತ್ನ 

ಶನಿವಾರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಪರ ಯಶವಂತಪುರ, ಅರ್ ಅರ್ ನಗರದಲ್ಲಿ ದರ್ಶನ್ ರೋಡ್ ಶೋಗೆ ಸಜ್ಜಾಗಿದ್ದರು.. ಆದ್ರೆ ದರ್ಶನ್ ಗೆ ಕೈ ನೋವು ಹೆಚ್ಚಾದ ಕಾರಣ ಇವತ್ತು ನಡೆಯಬೇಕಿದ್ದ ರೋಡ್ ಶೋ ಕ್ಯಾನ್ಸಲ್ ಮಾಡಲಾಗಿದೆ.  ಕಳೆದ ಎರಡು ದಿನಗಳಿಂದ ದರ್ಶನ್ ಮಂಡ್ಯದಲ್ಲಿ ಕೈ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು. ಇತ್ತೀಚೆಗಷ್ಟೇ ದರ್ಶನ್ ಕೈ ಆಪರೇಷನ್ ಆಗಿತ್ತು. ಈಗ ದರ್ಶನ್ ಕೈ ನೋವು ಹೆಚ್ಚಾದ ಕಾರಣ ಇಂದಿನ ಪ್ರಚಾರ ಮುಂದಕ್ಕೆ ಹಾಕಲಾಗಿದೆ.

ಡೆವಿಲ್ ಸಿನಿಮಾ ಶೂಟಿಂಗ್ ವೇಳೆ ದರ್ಶನ್​ ಕೈಗೆ ಪೆಟ್ಟಾಗಿತ್ತು. ಇತ್ತೀಚಿಗಷ್ಟೇ ದರ್ಶನ್ ಕೈಗೆ ಸರ್ಜರಿ ಕೂಡ ಮಾಡಲಾಗಿದೆ. ಕೈ ನೋವಿದ್ದರೂ ಕೂಡಾ ದರ್ಶನ್​ ಪ್ರಚಾರದಲ್ಲಿ ಭಾಗಿಯಾಗಿ ಚಂದ್ರುಗೆ ವೋಟ್ ಮಾಡಿ ಅಂತ ಕ್ಯಾಂಪೇನ್ ಮಾಡಿದ್ದರು.

Shwetha M