RCB ಸೋಲಿಗೆ ಅಶ್ವಿನಿ ಕಾರಣನಾ? – ವಿವಾದದ ಕಿಡಿ ಹಚ್ಚಿದ್ಯಾರು?

RCB ಸೋಲಿಗೆ ಅಶ್ವಿನಿ ಕಾರಣನಾ? – ವಿವಾದದ ಕಿಡಿ ಹಚ್ಚಿದ್ಯಾರು?

ಈಗೇನಿದ್ರೂ ಡಿಜಿಟಲ್ ಪೇಮೆಂಟ್ ಯುಗ. ಕೈಯಲ್ಲಿ ಕಾಸು ಇಲ್ದಿದ್ರೂ ಜೀವನ ಮಾಡ್ಬೋದು. ಇಂತಹ ಅದ್ಭುತ ಮಾನವನ ಸಾಧನೆ ಪಾತಾಳದಿಂದ ಹಿಡಿದು ಚಂದ್ರಲೋಕದವರೆಗೂ ಮುಟ್ಟಿದೆ. ವಿಪರ್ಯಾಸ ಅಂದ್ರೆ ಇಂಥಾ ಕಾಲದಲ್ಲೂ ಕೆಲ ಜನರ ಮನಸ್ಥಿತಿ ಚರಂಡಿ ನೀರಿಗಿಂತ್ಲೂ ಕೊಚ್ಚೆಯಾಗಿದೆ. ಯಪ್ಪಾ ಈ ಕಾಲದಲ್ಲೂ ಇಂಥವ್ರೆಲ್ಲಾ ಇದ್ದಾರಾ ಥೂ ಅನ್ನಿಸಿಬಿಡುತ್ತೆ. ಯಾಕಂದ್ರೆ ಅಷ್ಟು ಕೀಳುಮಟ್ಟದ ಪೋಸ್ಟ್​​​​ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಿದೆ. ಪುನೀತ್ ರಾಜ್​ಕುಮಾರ್ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತವೇ ಮೆಚ್ಚಿದಂತಹ ಮೇರು ನಟ. ಅಂತಹ ಅತ್ಯದ್ಭುತ ನಟನ ಪತ್ನಿಯ ಬಗ್ಗೆ ಕೆಳಮಟ್ಟದ ಪದಗಳನ್ನ ಬಳಸಿ ಟೀಕೆ ಮಾಡಲಾಗಿದೆ. ಅದೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಿಗೆ ಅಶ್ವಿನಿಯವ್ರೇ ಕಾರಣ ಎಂಬಂತೆ ಬಿಂಬಿಸಲಾಗಿದೆ. ಇದು ಫ್ಯಾನ್ಸ್​ ವಾರ್​ಗೂ ಕಾರಣವಾಗಿದೆ.

ಇದನ್ನೂ ಓದಿ: ಹೊಸ ದೋಸ್ತಿ.. ಹಳೇ ಕುಸ್ತಿ! – ಬಿಜೆಪಿಗಾಗಿ ಮಾತ್ರವೇ ಹೊಂದಾಣಿಕೆ?

RCB ಸೋಲಿಗೆ ಅಶ್ವಿನಿ ಕಾರಣನಾ

ಆರ್​ಸಿಬಿ ಅನ್​ಬಾಕ್ಸಿಂಗ್ ಇವೆಂಟ್​ಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ತೆರಳಿದ್ದರು. ಹೀಗಾಗಿ 2024ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಳಪೆ ಪ್ರದರ್ಶನಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಕಾರಣ. ಅವರನ್ನು ಆರ್​ಸಿಬಿ ಈವೆಂಟ್ ಗೆ ಕರೆಸಬಾರದಿತ್ತು ಎನ್ನುವ ಕೀಳುಮಟ್ಟದ ಪೋಸ್ಟ್ ವೊಂದು ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಫ್ಯಾನ್ಸ್ ವಾರ್ ಗೆ ದಾರಿಮಾಡಿಕೊಟ್ಟಿದೆ. ಈ ಬಾರಿ ಆರ್‌ಸಿಬಿ ತಂಡ ನಾಲ್ಕು ಪಂದ್ಯಗಳಲ್ಲಿ ಮೂರು ಸೋತು, ಒಂದು ಮ್ಯಾಚ್​ ಗೆದ್ದಿದೆ. ಇದರ ಬೆನ್ನಲ್ಲೇ ದರ್ಶನ್‌ ಅಭಿಮಾನಿಗಳು ಎನ್ನಲಾದ ಕೆಲ ಕಿಡಿಗೇಡಿಗಳು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರನ್ನು ದೂರುತ್ತಿದ್ದಾರೆ. ‘ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದು ಸರಿ ಅಲ್ಲ, ಇದಕ್ಕಾಗಿಯೇ ಆರ್​ಸಿಬಿ ಸೋಲುತ್ತಿದೆ’ ಎಂದು ‘ಗಜಪಡೆ’ ಹೆಸರಿನ ಟ್ವಿಟರ್ ಅಕೌಂಟ್ ಕೀಳು ಮಟ್ಟದ ಟ್ವೀಟ್ ಮಾಡಿದೆ. ಆರ್​ಸಿಬಿ ಸೋಲುವುದಕ್ಕೂ, ಅಶ್ವಿನಿ ಪುನೀತ್​ ರಾಜ್​ಕುಮಾರ್​ಗೂ ಏನು ಸಂಬಂಧ? ಎಂದು ಅಪ್ಪು ಫ್ಯಾನ್ಸ್‌ ಆಕ್ರೋಶ ಹೊರಹಾಕುತ್ತಿದ್ದು, ಇದೀಗ ಆ ಪೋಸ್ಟ್ ಮಾಡಿದ್ದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಅಪ್ಪು ಫ್ಯಾನ್ಸ್ ಕಮಿಷನರ್​ಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಅಭಿಮಾನಿಗಳ ಈ ಕಿಡಿಗೇಡಿತನಕ್ಕೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಿರುವ ನಟ ದರ್ಶನ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ದರ್ಶನ್ ಅವರ ಅಭಿಮಾನಿಯೊಬ್ಬರು ಮಾಹಿತಿ ನೀಡಿದ್ದು, ಇಂತಹ ಕೀಳುಮಟ್ಟದ ಬೆಳವಣಿಗೆಯನ್ನು ನಟ ದರ್ಶನ್ ಸಹಿಸಲ್ಲ ಎಂದು ಅವರು ಹೇಳಿದ್ದಾರೆ. ಮತ್ತೊಂದೆಡೆ ಈ ಟ್ವೀಟ್ ಅಕೌಂಟ್ ವಿಚಾರವಾಗಿಯೂ ವಿವಾದ ಭುಗಿಲೆದ್ದಿದೆ. ಪೋಸ್ಟ್ ಹಾಕಿದ್ದು ದರ್ಶನ್ ಅಭಿಮಾನಿಗಳಾ ಅಥವಾ ಸುದೀಪ್ ಅಭಿಮಾನಿಗಳ ಎಂಬ ಗೊಂದಲ ಸೃಷ್ಟಿಸಿದ್ದಾರೆ.

Shwetha M