RCB ಸೋಲಿಗೆ ಅಶ್ವಿನಿ ವಿರುದ್ಧ ಪೋಸ್ಟ್.. – ದಚ್ಚು..ಕಿಚ್ಚ.. ಯಾರ ಅಭಿಮಾನಿ ಕೃತ್ಯ ಇದು?

RCB ಸೋಲಿಗೆ ಅಶ್ವಿನಿ ವಿರುದ್ಧ ಪೋಸ್ಟ್.. – ದಚ್ಚು..ಕಿಚ್ಚ.. ಯಾರ ಅಭಿಮಾನಿ ಕೃತ್ಯ ಇದು?

ರಾಯಲ್ ಚಾಲೆಂಜರ್ಸ್ ಬೆಂಗಳೂರು. ಐಪಿಎಲ್​ ಸೀಸಸ್ ಸ್ಟಾರ್ಟ್ ಆಯ್ತು ಅಂದ್ರೆ ಆರ್​ಸಿಬಿ, ಈ ಸಲ ಕಪ್ ನಮ್ದೇ ಅನ್ನೋ ಟ್ರೆಂಡಿಂಗ್ ಶುರುವಾಗುತ್ತೆ. ಈ ಸಲವೂ ಸಹಜವಾಗಿಯೇ ಆರ್​ಸಿಬಿ ಕ್ರೇಜ್​ ಪೀಕ್​ನಲ್ಲಿದೆ. ಆದ್ರೆ ಏನ್ ಮಾಡೋದು ಎಷ್ಟೇ ಸಪೋರ್ಟ್ ಮಾಡಿದ್ರೂ ಆರ್​ಸಿಬಿ ಆಟಗಾರರು ಕಳಪೆ ಫಾರ್ಮ್​ನಿಂದ ಹೊರ ಬರ್ತಿಲ್ಲ. ಬೆಂಗಳೂರು ಟೀಂ ಸೋಲೋದು ತಪ್ಪುತ್ತಿಲ್ಲ. ಆಡಿರೋ ನಾಲ್ಕು ಮ್ಯಾಚ್​ಗಳಲ್ಲಿ ಮೂರು ಪಂದ್ಯಗಳನ್ನ ದೇವರಿಗೇ ಅರ್ಪಿಸಿದ್ದಾರೆ. ಒಂದರಲ್ಲಷ್ಟೇ ಗೆದ್ದಿದ್ದಾರೆ. ಆರ್​ಸಿಬಿಯ ಈ ಆಟದ ವೈಖರಿಯಿಂದ ಕರ್ನಾಟಕದ ಫ್ಯಾನ್ಸ್ ಸಹಜವಾಗಿಯೇ ಬೇಜಾರಾಗಿದ್ದಾರೆ. ಆದ್ರೆ ಬೆಂಗಳೂರು ತಂಡದ ಪ್ರದರ್ಶನ ವಿಚಾರ ಮುಂದಿಟ್ಟುಕೊಂಡು  ನಟ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕುರಿತು ಕೀಳುಮಟ್ಟದ ಪೋಸ್ಟ್ ಮಾಡಲಾಗಿದೆ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: RCB ಸೋಲಿಗೆ ಅಶ್ವಿನಿ ಕಾರಣನಾ? – ವಿವಾದದ ಕಿಡಿ ಹಚ್ಚಿದ್ಯಾರು?

ಆರಂಭದಲ್ಲಿ ಗಜಪಡೆ’ ಅನ್ನುವ ಹೆಸರಿನಲ್ಲಿ ಈ ಟ್ವೀಟ್ ಮಾಡಲಾಗಿತ್ತು. ಅಪ್ಪು ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಆ ಟ್ವಿಟರ್ ಐಡಿಯನ್ನು ಸುದೀಪ್ ಅಭಿಮಾನಿ ಎಂದು ಬದಲಾಯಿಸಲಾಗಿದೆ. ಜೊತೆಗೆ ಕಿಚ್ಚ ಸುದೀಪ್ ಫೋಟೊವನ್ನು ಹಾಕಿ ಡಿಪಿಯನ್ನೂ ಬದಲಾಯಿಸಲಾಗಿತ್ತು. ಗಜಪಡೆ ಅಂತಿದ್ದ ಐಡಿ ಸುದೀಪ್ ಅಭಿಮಾನಿ ಅಂತ ಬದಲಾವಣೆ ಆಗಿತ್ತು. ಇದನ್ನು ಕಂಡ ಕಿಚ್ಚ ಸುದೀಪ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ರೊಚ್ಚಿಗೆದ್ದಿದ್ದಾರೆ. ದರ್ಶನ್ ಅಭಿಮಾನಿ ಎನ್ನಲಾಗುತ್ತಿರುವ ವ್ಯಕ್ತಿಯ ವಿರುದ್ಧ ತಿರುಗಿಬಿದ್ದಿದ್ದಾರೆ.  ಕೂಡಲೇ ಕಿಚ್ಚನ ಅಭಿಮಾನಿಗಳು ಮೊದಲ ಹಾಗೂ ನಂತರದ ಪೋಸ್ಟ್‌ನ ಸ್ಕ್ರೀನ್ ಶಾಟ್ ಅನ್ನು ಶೇರ್ ಮಾಡಿಕೊಂಡಿದ್ದರು. ಇಲ್ಲಿಂದ ಕಿಚ್ಚನ ಅಭಿಮಾನಿಗಳು ದರ್ಶನ್ ಫ್ಯಾನ್ ವಿರುದ್ಧ ಕಿಡಿಕಾರುತ್ತಿದ್ದಾರೆ.

ಅಸಲಿಗೆ ಆರ್​ಸಿಬಿ ಸೋಲಿಗೂ ಅಶ್ವಿನಿ ಪುನೀತ್​ಗೂ ಇಲ್ಲಿ ಯಾವ ಸಂಬಂಧನೂ ಇಲ್ಲ. ಯಾಕಂದ್ರೆ ಆರ್​ಸಿಬಿಗೇನು ಇದೇ ಫಸ್ಟ್ ಮ್ಯಾಚ್ ಅಲ್ಲ. ಈಗಾಗ್ಲೇ 16 ಸೀಸನ್​ಗಳಲ್ಲಿ ಆಡಿದ್ರೂ ಒಂದೇ ಒಂದು ಕಪ್ ಗೆಲ್ಲೋಕೆ ಆಗಿಲ್ಲ. ಇದಕ್ಕೆ ಕಾರಣ ಟೀಂ ಪ್ಲೇಯರ್​ಗಳ ಕಳಪೆ ಪ್ರದರ್ಶನ. ಕಿಂಗ್ ಕೊಹ್ಲಿ, ದಿನೇಶ್ ಕಾರ್ತಿಕ್​ರನ್ನ ಬಿಟ್ರೆ ಉಳಿದವ್ರೆಲ್ಲಾ ಟೀಂನಲ್ಲಿದ್ದಾರಷ್ಟೇ. ಗೆಲ್ಬೇಕು ಅಂತಾ ಯಾರೂ ಆಡ್ತಿಲ್ಲ. ಇಂಥವ್ರನ್ನ ಇಟ್ಕೊಂಡು ಆ ದೇವ್ರೇ ಬಂದು ಆಶೀರ್ವಾದ ಮಾಡಿದ್ರೂ ಗೆಲ್ಲೋಕೆ ಆಗಲ್ಲ. ಅಶ್ವಿನಿಯವ್ರಿಂದ ಟೀಂ ಸೋಲ್ತಿದೆ ಅಂತಾ ಯಾರೆಲ್ಲಾ ಪೋಸ್ಟ್ ಹಾಕಿದ್ದೀರೋ ಮೊದ್ಲು ಅವ್ರು ಮನಸ್ಥಿತಿಯನ್ನ ಬದಲಾಯಿಸಿಕೊಳ್ಳಬೇಕು.

Shwetha M