ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಗೆ ಏನಾಗಿದೆ? – ಆತಂಕದಲ್ಲಿ ಫ್ಯಾನ್ಸ್‌

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಗೆ ಏನಾಗಿದೆ? – ಆತಂಕದಲ್ಲಿ ಫ್ಯಾನ್ಸ್‌

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತಮ್ಮ ಕೈಯನ್ನು ಹ್ಯಾಂಡ್​ ಸ್ಲಿಂಗ್ ಮೇಲೆ ಇಟ್ಟುಕೊಂಡು ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಗಾಬರಿಯಾಗಿದ್ದಾರೆ. ದರ್ಶನ್‌ ಕೈಗೆ ಏನಾಯ್ತು ಅಂತಾ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇದೀಗ ತಮ್ಮ ಕೈಗೆ ಏನಾಗಿದೆ ಅಂತಾ ಸ್ವತಃ ದರ್ಶನ್ ಅವರೇ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: KK ಡುಂ.. RCB ಢಂ! – ಇನ್ನೆಷ್ಟು ಸೋಲ್ಬೇಕು ಫಾಫ್? – ಪ್ಲೇಆಫ್ ಹಾದಿಯೆಷ್ಟು ಕಷ್ಟ?

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಾ? ಬೇಡವಾ ಎಂಬ ನಿರ್ಧಾರ ತಿಳಿಸಲು ಸುಮಲತಾ ಅಂಬರೀಶ್ ಅವರು ಇಂದು ಮಹತ್ವದ ಸಭೆ ಕರೆದಿದ್ದರು. ಈ ಸಭೆಗೆ ದರ್ಶನ್ ಭಾಗಿಯಾಗಿದ್ದಾರೆ. ಈ ವೇಳೆ ದರ್ಶನ್ ತಮ್ಮ ಕೈಯನ್ನು ಹ್ಯಾಂಡ್​ ಸ್ಲಿಂಗ್​ ಮೇಲೆ ಇಟ್ಟುಕೊಂಡಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು ತಳಮಳಗೊಂಡಿದ್ದಾರೆ.

ಈ ಸಭೆಯಲ್ಲಿ ದರ್ಶನ್ ಅವರೇ ಹೇಳಿರುವಂತೆ ನನ್ನ ಕೈಗೆ ಪೆಟ್ಟಾಗಿದೆ. ಇವತ್ತು ಆಪರೇಷನ್ ಇತ್ತು. ಆದರೆ ಅಮ್ಮ ಕರೆದಿರೋದ್ರಿಂದ ಕ್ಯಾನ್ಸಲ್ ಮಾಡಿಕೊಂಡು ಬಂದಿದ್ದೇನೆ. ಬುಧವಾರ ಸಂಜೆ ಆಸ್ಪತ್ರೆಗೆ ಅಡ್ಮಿಟ್ ಆಗಿ, ನಾಳೆ ಆಪರೇಷನ್ ಮಾಡಿಸಿಕೊಳ್ತೇನೆ ಎಂದು ಹೇಳಿದ್ದಾರೆ. ಶೂಟಿಂಗ್ ಸಮಯದಲ್ಲಿ ಅವರ ಕೈಗೆ ಏಟು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಕೈಗೆ ಬೆಲ್ಟ್ ಕಟ್ಟಿಕೊಂಡು ಈವರೆಗೂ ಓಡಾಡುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಈಗ ಆಪರೇಷನ್ ಗೆ ಒಳಗಾಗಲು ಅವರು ಮುಂದಾಗಿದ್ದಾರೆ.

Shwetha M