ಹುಲಿ ಉಗುರು ಪ್ರಕರಣ, ನಾಯಿ ಮಹಿಳೆಗೆ ಕಚ್ಚಿದ ಪ್ರಕರಣದ ಬಗ್ಗೆ ತಲೆಕೆಡಿಸಿಕೊಳ್ಳದ ದರ್ಶನ್ – ನಟಿ ಪವಿತ್ರಗೌಡ ಮಗಳ ಬರ್ತ್‌ಡೇನಲ್ಲಿ ಫುಲ್ ಡ್ಯಾನ್ಸ್

ಹುಲಿ ಉಗುರು ಪ್ರಕರಣ, ನಾಯಿ ಮಹಿಳೆಗೆ ಕಚ್ಚಿದ ಪ್ರಕರಣದ ಬಗ್ಗೆ ತಲೆಕೆಡಿಸಿಕೊಳ್ಳದ ದರ್ಶನ್ – ನಟಿ ಪವಿತ್ರಗೌಡ ಮಗಳ ಬರ್ತ್‌ಡೇನಲ್ಲಿ ಫುಲ್ ಡ್ಯಾನ್ಸ್

ಜಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಸಖತ್ ಸುದ್ದಿಯಲ್ಲಿದ್ದಾರೆ. ಹುಲಿ ಉಗುರು ವಿಚಾರದಲ್ಲೂ ದರ್ಶನ ಹೆಸರು ಕೇಳಿಬಂದಿತ್ತು. ನಂತರ ಮಹಿಳೆಯೊಬ್ಬರಿಗೆ ತಮ್ಮ ಪ್ರೀತಿಯ ನಾಯಿ ಕಚ್ಚಿದ ವಿಚಾರವಾಗಿ ದರ್ಶನ್ ಸುದ್ದಿಯಲ್ಲಿದ್ದರು. ಅದರಲ್ಲೂ ಆ ಮಹಿಳೆಯಂತೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ದರ್ಶನ್, ಈಗ ನಟಿ ಪವಿತ್ರಗೌಡ ಮಗಳ ಬರ್ತ್‌ಡೇ ಸೆಲೆಬ್ರೇಷನ್ ಮಾಡಿ ಖುಷಿಯಲ್ಲೇ ಡಾನ್ಸ್ ಮಾಡಿದ್ದಾರೆ.

ಇದನ್ನೂ ಓದಿ: ರಿಲೀಸ್‌ಗೂ ಮೊದಲೇ ‘ಜವಾನ್’ ಚಿತ್ರದ ದಾಖಲೆ ಪುಡಿಪುಡಿ – ಅನಿಮಲ್ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆ

ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಾಟೇರ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ತನ್ನ ಮೇಲೆ ಬಂದಿರೋ ಆರೋಪಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ತೋಟದ ಮನೆ, ಸುತ್ತಾಟ ಹಾಗೂ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅದರಲ್ಲೂ ಒಂದು ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಟಿ ನಟಿ ಪವಿತ್ರಾ ಗೌಡ ಅವರ ಮಗಳು ಖುಷಿ ಬರ್ತಡೇಯಲ್ಲಿ ದರ್ಶನ್ ಭಾಗಿಯಾಗಿದ್ದರು. ಪವಿತ್ರಾಗೌಡ ಮಗಳಿಗೆ ದರ್ಶನ್ ದೊಡ್ಡ ಹೂ ಗುಚ್ಛ ಕೊಟ್ಟಿದ್ದಾರೆ. ಆನಂತರ ಒಟ್ಟಿಗೆ ಕೇಕ್‌ ಕಟ್ ಮಾಡಿದ್ದಾರೆ. ಅದಾದ ಮೇಲೆ ಇಬ್ಬರು ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಹ್ಯಾಪಿ ಬರ್ತಡೇ ಬ್ಯೂಟಿಫುಲ್ ಎಂದು ಕ್ಯಾಪ್ಶನ್ ಬರೆದು ದರ್ಶನ್‌ಗೆ ಟ್ಯಾಗ್ ಮಾಡಿದ್ದಾರೆ ಪವಿತ್ರಾ.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಲಿ ಉಗುರು ಪ್ರಕರಣದ ಬೆನ್ನಲ್ಲೇ ನಾಯಿ ವಿಚಾರದಲ್ಲೂ ವಿವಾದಕ್ಕೊಳಗಾಗಿದ್ದಾರೆ.  ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯ ಮುಂದೆ ನಾಯಿಗಳು ದಾಳಿ ಮಾಡಿ ತಮಗೆ ತೀವ್ರ ಗಾಯಗಳಾಗಿವೆ ಎಂದು ಮಹಿಳೆಯೊಬ್ಬರು ದರ್ಶನ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ, ಅವರು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮಹಿಳೆ ತೀವ್ರ ಸ್ವರೂಪದ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

Sulekha