ಮತ್ತೆ ಬರ್ತಿದ್ದಾನೆ ಮುಸ್ತಾಫಾ! – ದುನಿಯಾ ವಿಜಿಗೆ ಶಿಶಿರ್‌ ಸಾಥ್!

ಮತ್ತೆ ಬರ್ತಿದ್ದಾನೆ ಮುಸ್ತಾಫಾ! – ದುನಿಯಾ ವಿಜಿಗೆ ಶಿಶಿರ್‌ ಸಾಥ್!

ಶಿಶಿರ್ ಬೈಕಾಡಿ. ಹೀಗೆ ಕರೆದ್ರೆ ಯಾರಿಗ್ ಗೊತ್ತಾಗುತ್ತೋ ಇಲ್ವೋ., ಮುಸ್ತಾಫಾ ಅಂತಾ ಕರೆದ್ರೆ ಇದೇ ಜನ ಮಾರಾಯ್ರೇ ಎಂಬಷ್ಟು ಫೇಮಸ್ ಆಗಿದ್ದಾರೆ ಕರಾವಳಿಯ ಈ ಚಾಕಲೇಟ್ ಬಾಯ್. ಕಳೆದ ವರ್ಷ ರಿಲೀಸ್ ಆಗಿ, ಸಕ್ಸಸ್ ಕಂಡ ಡೇರ್ ಡೆವಿಲ್ ಮುಸ್ತಾಫದ ಹೀರೋ ಈ ಶಿಶಿರ್ ಬೈಕಾಡಿ. ಆದ್ರೆ, ಈ ಸಕ್ಸಸ್ ಸಿನಿಮಾ ನಂತರ ಶಿಶಿರ್ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ ಯಾಕೆ ಎಂಬ ಪ್ರಶ್ನೆ ಫ್ಯಾನ್ಸ್ ಕೇಳ್ತಿದ್ದಾರೆ. ಕೊನೆಗೂ ಶಿಶಿರ್ ಮತ್ತೊಂದು ಸಿನಿಮಾ ಮೂಲಕ ನಿಮ್ಮ ಮುಂದೆ ಬರ್ತಿದ್ದಾರೆ.

ಇದನ್ನೂ ಓದಿ: ಬರುತ್ತಿದೆ ರಜನಿಕಾಂತ್‌ ಬಯೋಪಿಕ್‌! – ಬಂಡವಾಳ ಹೂಡುತ್ತಿರವುದು ಯಾರು ಗೊತ್ತಾ?

ಡೇರ್ ಡೆವಿಲ್ ಮುಸ್ತಾಫಾದ ಹ್ಯಾಂಡ್ಸಮ್ ಹೀರೋ ಶಿಶಿರ್ ಬೈಕಾಡಿ ಸ್ಯಾಂಡಲ್‌ವುಡ್‌ನ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮುಸ್ತಾಫ ಸಿನಿಮಾ ನಂತರ ಕೆಲವು ಸ್ಕ್ರಿಪ್ಟ್‌ಗಳು ಬಂದಿದ್ವು. ಆದ್ರೆ, ನನಗೆ ಒಂದು ಇಷ್ಟವಾಗಿತ್ತು. ಅದು ಸದ್ಯದಲ್ಲೇ ಅನೌನ್ಸ್ ಆಗಲಿದ್ಯಂತೆ. ಇದೇ ಸಮಯದಲ್ಲಿ ದುನಿಯಾ ವಿಜಯ್ ಅವರ ಸಿನಿಮಾದಲ್ಲೂ ನಟಿಸಲು ಚಾನ್ಸ್ ಸಿಕ್ಕಿದೆ.

ಸ್ವತಃ ದುನಿಯಾ ವಿಜಿಯೇ ಕಾಲ್ ಮಾಡಿ ಮನೆ ಕರೆದು ಅವಕಾಶ ಕೊಟ್ರು ಅಂತಾ ಶಿಶಿರ್ ಬೈಕಾಡಿ ಹೇಳಿದ್ದಾರೆ. ಈಗ ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ರೆಡಿಯಾಗಿದ್ದಾರೆ ಬೈಕಾಡಿ. ಅಂದಹಾಗೆ ಹೊಸ ಸಿನಿಮಾದಲ್ಲಿ ಶಿಶಿರ್‌ಗೆ ಸಿಕ್ಕಿರೋದು ದುನಿಯಾ ವಿಜಯ್ ಮಗಳ ಜೊತೆಯಲ್ಲೇ ಇರೋ ಹುಡುಗನ ಪಾತ್ರ. ಚೆನ್ನಾಗಿ ಓದಿಕೊಂಡಿರುವ ಆ ಹುಡುಗ ಊರಿನಲ್ಲಿ ನಡೆಯುವ ಎಲ್ಲಾ ಘಟನೆಗಳ ಬಗ್ಗೆ ಪ್ರಶ್ನೆ ಮಾಡುತ್ತಿರುತ್ತಾನೆ. ಡೇರ್ ಡೆವಿಲ್ ಮುಸ್ತಾಫಾ ಸಿನಿಮಾಕ್ಕಿಂತಲೂ ಈ ಪಾತ್ರ ವಿಭಿನ್ನವಾಗಿದ್ಯಂತೆ.

ಮೊದಲ ಸಿನಿಮಾ ಕಂಟೆಂಟ್ ಇರುವ ಸಿನಿಮಾವಾಗಿತ್ತು. ಈಗ ಸಿಕ್ಕಿರೋ ಹೊಸ ಸಿನಿಮಾದಲ್ಲಿ ಕಂಟೆಂಟ್ ಜೊತೆಗೆ ಮಾಸ್ ಅಫೀಲ್ ಕೊಡುವ ಕಥೆಯಿದೆ. ಹಾಗಾಗಿ ನನ್ನ ಎರಡನೇ ಸಿನಿಮಾ ಸಿಕ್ಕಾಪಟ್ಟೆ ಡಿಪರೆಂಟ್ ಆಗಿದೆ ಎಂದಿದ್ದಾರೆ ಶಿಶಿರ್ ಬೈಕಾಡಿ. ಸಿನಿಮಾ ಅಂದಮೇಲೆ ಎಲ್ಲಾ ರೀತಿಯ ಪಾತ್ರ ಮಾಡಬೇಕು. ಹೀಗಾಗಿ ಈ ಸಿನಿಮಾದಲ್ಲಿ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿರುವ ಶಿಶಿರ್ ಬೈಕಾಡಿ ಸ್ಯಾಂಡಲ್‌ವುಡ್‌ನ ಭರವಸೆಯ ಪ್ರತಿಭೆಯಂತೂ ಹೌದು.

Shwetha M

Leave a Reply

Your email address will not be published. Required fields are marked *