ರಾಜಕೀಯ ಪಕ್ಷಗಳ ದಲಿತ ಪ್ರೀತಿ – ಕಾವೇರಿದ ಕಾಂಗ್ರೆಸ್ & ಬಿಜೆಪಿ ಟ್ವೀಟ್ ವಾರ್

ರಾಜಕೀಯ ಪಕ್ಷಗಳ ದಲಿತ ಪ್ರೀತಿ – ಕಾವೇರಿದ ಕಾಂಗ್ರೆಸ್ &  ಬಿಜೆಪಿ ಟ್ವೀಟ್ ವಾರ್

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ದಲಿತ ಪ್ರೀತಿ ಜೋರಾಗಿದೆ. ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ನಿನ್ನೆ ದೊಡ್ಡ ಹೋರಾಟ ನಡೆದಿತ್ತು. ಆದ್ರೆ ಇಂದು ದಲಿತರ ವಿಷಯ ಮುಂದಿಟ್ಟು ಟ್ವೀಟ್‌ ಮೂಲಕ ಸಿದ್ದರಾಮಯ್ಯ  ಅವರನ್ನು ತಿವಿಯುವ ಕೆಲಸಕ್ಕೆ ಬಿಜೆಪಿ ಮುಂದಾಗಿತ್ತು. ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯನವರು ಸದಾಶಿವ ಆಯೋಗದ ವರದಿ ಜಾರಿಗೆ ತರದಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ದಲಿತ ನಾಯಕರನ್ನು ತುಳಿದಿದ್ದಾರೆ ಎಂದು ಪಟ್ಟಿ ಮಾಡಿದೆ.

ಇದನ್ನೂ ಓದಿ:   ವರುಣ ಕ್ಷೇತ್ರದಲ್ಲೇ ಸಿದ್ದರಾಮಯ್ಯ ಸ್ಪರ್ಧೆ ಫಿಕ್ಸ್?

ಬಿಜೆಪಿಯ ಈ ಟ್ವೀಟಾಸ್ತ್ರಕ್ಕೆ ಕಾಂಗ್ರೆಸ್‌ ಸುಮ್ಮನೆ ಕುಳಿತಿಲ್ಲ.. ಕಾಂಗ್ರೆಸ್‌ ಕೂಡ ಟ್ವೀಟ್‌ ಮಾರ್ಗವನ್ನೇ ಅನುಸರಿಸಿದ್ದು, ಶಾಂತಿಯಿಂದ ಪ್ರತಿಭಟಿಸಿದ ದಲಿತ ಹೋರಾಟಗಾರರ ಮೇಲೆ ಲಾಠಿ ಬೀಸಿದ ಸರ್ಕಾರದ ದೃಷ್ಟಿಯಲ್ಲಿ ದಲಿತರೆಂದರೆ ಕ್ರಿಮಿನಲ್‌ಗಳಾ ಎಂದು ಚುಚ್ಚಿದೆ. ದಲಿತರ ಮೇಲೆ ಯಾಕಿಂತಾ ದ್ವೇಷ ಎಂದೆಲ್ಲಾ ಬಿಜೆಪಿಯ ವಿರುದ್ಧ ಕಿಡಿಕಾರಿದೆ.

suddiyaana