ನಿಮ್ಮ ಪೂಜೆಗೆ ಶ್ರೀಕೃಷ್ಣ ನಿಮಗೆ ಒಲಿಯಬೇಕೇ.? – ಪ್ರತಿದಿನ ಬೆಳಗ್ಗೆ ಈ ಕೆಲಸ ಮಾಡಿ.!

ನಿಮ್ಮ ಪೂಜೆಗೆ ಶ್ರೀಕೃಷ್ಣ ನಿಮಗೆ ಒಲಿಯಬೇಕೇ.? –  ಪ್ರತಿದಿನ  ಬೆಳಗ್ಗೆ  ಈ ಕೆಲಸ ಮಾಡಿ.!

ಯಾವ ವ್ಯಕ್ತಿ ತನ್ನ ಜೀವನದುದ್ದಕ್ಕೂ ಶ್ರೀಕೃಷ್ಣನನ್ನು ಪೂಜಿಸುತ್ತಾನೋ ಅವನು ತನ್ನ ಜೀವನದಲ್ಲಿ ಎಂದಿಗೂ ಸಂತೋಷ ಮತ್ತು ಸಮೃದ್ಧಿಯ ಕೊರತೆಯನ್ನು ಎದುರಿಸುವುದಿಲ್ಲ ಎನ್ನುವ ನಂಬಿಕೆಯಿದೆ. ನಾವು ಪ್ರತಿದಿನ ಬೆಳಗ್ಗೆ ಎದ್ದು ಈ ಕೆಲಸಗಳನ್ನು ಸಂಪೂರ್ಣವಾಗಿ ಮಾಡಿದರೆ, ನಾವು ಸುಲಭವಾಗಿ ಶ್ರೀಕೃಷ್ಣನ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ಇದಲ್ಲದೆ, ಈ ಕೆಲಸಗಳನ್ನು ನಾವು ಮಾಡುವುದರಿಂದ ನಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಗೆ ಯಾವುದೇ ರೀತಿಯಾದ ಕೊರತೆ ಎದುರಾಗುವುದಿಲ್ಲ. ನೀವು ಸಹ ಶ್ರೀಕೃಷ್ಣನ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಪ್ರತಿದಿನ ಮುಂಜಾನೆ ಈ ವಿಶೇಷವಾದ ಕೆಲಸಗಳನ್ನು ನಾವು ಮಾಡಬೇಕು.

ಮುಂಜಾನೆ ಶ್ರೀಕೃಷ್ಣನನ್ನು ಈ ರೀತಿ ಪೂಜಿಸಿ:

ಹಲವರು ತಮ್ಮ ಮನೆಗಳಲ್ಲಿ ಶ್ರೀಕೃಷ್ಣನ ಶಿಶು ರೂಪವಾದ ಲಡ್ಡು ಗೋಪಾಲನನ್ನು ಪೂಜಿಸುತ್ತಾರೆ. ನಿಮ್ಮ ಮನೆಯಲ್ಲಿ ಲಡ್ಡು ಗೋಪಾಲನ ವಿಗ್ರಹ ಅಥವಾ ಫೋಟೋವಿದ್ದರೆ, ಮುಂಜಾನೆ ನೀವು ಸ್ನಾನ ಮಾಡಿ ಶುದ್ಧರಾದ ಬಳಿಕ ಆ ವಿಗ್ರಹಕ್ಕೆ ಅಭಿಷೇಕವನ್ನು ಮಾಡಿಸಿ. ನಂತರ, ಅವನಿಗೆ ಹೊಸ ಬಟ್ಟೆಗಳನ್ನು ತೊಡಿಸಿ ಅಲಂಕಾರ ಮಾಡಿ ಮತ್ತು ಅವನಿಗೆ ಶ್ರೀಗಂಧದ ಪೇಸ್ಟ್‌ನ್ನು ಹಚ್ಚಿ. ಶ್ರೀಕೃಷ್ಣನನ್ನು ಪೂಜಿಸುವಾಗ, ಅವನಿಗೆ ಹಣ್ಣುಗಳು, ಹೂವುಗಳು, ಧೂಪದ್ರವ್ಯ, ದೀಪಗಳು, ಕುಂಕುಮ, ಅಕ್ಕಿ ಧಾನ್ಯಗಳು, ಅರಿಶಿನ ಇತ್ಯಾದಿಗಳನ್ನು ಅರ್ಪಿಸಿ. ಶ್ರೀಕೃಷ್ಣನಿಗೆ ನೀವು ನೈವೇದ್ಯವನ್ನು ಅರ್ಪಿಸುವಂತಹ ಸಂದರ್ಭದಲ್ಲಿ ಕಡ್ಡಾಯವಾಗಿ ಅದರಲ್ಲಿ ತುಳಸಿ ದಳಗಳನ್ನು ಇಟ್ಟು ಅರ್ಪಿಸಬೇಕು. ಅಭಿಷೇಕವನ್ನು ಮಾಡಿ ಬಾಲಗೋಪಾಲನನ್ನು ಸ್ಮರಿಸಿದ ನಂತರ ಅವನನ್ನು ಅಲಂಕರಿಸಿ ಕನ್ನಡಿಯಲ್ಲಿ ಅವನ ಮುಖವನ್ನು ತೋರಿಸಿ. ಹಾಗೆ ಮಾಡುವುದರಿಂದ ಶ್ರೀಕೃಷ್ಣನು ಬೇಗನೆ ಸಂತೋಷಪಡುತ್ತಾನೆ ಎನ್ನುವ ನಂಬಿಕೆಯಿದೆ. ಅಂತಿಮವಾಗಿ, ಆರತಿ ಮಾಡಿ ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆಯನ್ನು ಮಾಡಿ.

ಶ್ರೀಕೃಷ್ಣನನ್ನು ಒಲಿಸಿಕೊಳ್ಳುವುದಕ್ಕಾಗಿ ಈ ಕೆಲಸವನ್ನು ಮಾಡಿ:

ಶ್ರೀಕೃಷ್ಣನ ಆಶೀರ್ವಾದವನ್ನು ಪಡೆಯಲು, ಒಬ್ಬರು ನಿಯಮಿತವಾಗಿ ಶ್ರೀಮದ್ ಭಗವದ್ಗೀತೆಯನ್ನು ಅಧ್ಯಯನ ಮಾಡಬೇಕು. ಇದು ಕೃಷ್ಣನ ಆಶೀರ್ವಾದವನ್ನು ನಿಮಗೆ ನೀಡುವುದಲ್ಲದೆ, ಅವನ ಬೋಧನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿಯು ತನಗಾಗಿ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ನೀತಿ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸುವವರು ಮತ್ತು ಸೇವಾ ಮನೋಭಾವವನ್ನು ಅಳವಡಿಸಿಕೊಳ್ಳುವವರು ಶ್ರೀಕೃಷ್ಣನ ಆಶೀರ್ವಾದವನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ.

– ಓಂ ನಮೋ ಭಗವತೇ ವಾಸುದೇವಾಯ ನಮಃ
– ಓಂ ಕೃಷ್ಣಾಯ ನಮಃ
– ಓಂ ನಮೋ ಭಗವತೇ ಶ್ರೀ ಗೋವಿಂದಾಯ
– ಓಂ ದೇವಕಿನಂದನಾಯ ವಿದ್ಮಹೇ
ವಾಸುದೇವಾಯ ಧೀಮಹಿ
ತನ್ನೋ ಕೃಷ್ಣಃ ಪ್ರಚೋದಯಾತ್
– ಓಂ ಕ್ಲೀಂ ಕೃಷ್ಣಾಯ ನಮಃ
– ಗೋಕುಲ ನಾಥಾಯ ನಮಃ
– ಓಂ ಶ್ರೀ ಕೃಷ್ಣಃ ಶರಣಂ ಮಮಃ
– ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ|
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ||
– ಓಂ ನಮೋ ಭಗವತೇ ತಸ್ಮೈ ಕೃಷ್ಣಾಯ ಕುಂಠಮೇಧಸೇ|
ಸರ್ವವ್ಯಾಧಿ ವಿನಾಶಾಯ ಪ್ರಭೋ ಮಾಮಮೃತಂ ಕೃಧಿ||

ಶ್ರೀಕೃಷ್ಣನ ಈ ಮಂತ್ರಗಳನ್ನು ಪಠಿಸುವುದರಿಂದ ಹಾಗೂ ಮುಂಜಾನೆ ನಾವು ಈ ಕೆಲಸಗಳನ್ನು ಮಾಡುವುದರಿಂದ ಶ್ರೀಕೃಷ್ಣನ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ಹಾಗೂ ಸಮಸ್ಯೆಗಳಿಗೂ ಪರಿಹಾರವನ್ನು ಪಡೆದುಕೊಳ್ಳಬಹುದು. ಶ್ರೀಕೃಷ್ಣನನ್ನು ಒಲಿಸಿಕೊಳ್ಳಲು ಬಯಸುವವರು ಮುಂಜಾನೆ ಸಮಯದಲ್ಲಿ ಈ ಕೆಲಸಗಳನ್ನು ತಪ್ಪದೇ ಮಾಡಬೇಕು

Kishor KV