ಸಾವಯವ ರೆಸ್ಟೋರೆಂಟ್  ಗೆ ಹಸುವೇ ಗೆಸ್ಟ್ – ಅಪರೂಪದ ಅತಿಥಿಯಿಂದ ಉದ್ಘಾಟನೆ!

ಸಾವಯವ ರೆಸ್ಟೋರೆಂಟ್  ಗೆ ಹಸುವೇ ಗೆಸ್ಟ್ – ಅಪರೂಪದ ಅತಿಥಿಯಿಂದ ಉದ್ಘಾಟನೆ!

ರೆಸ್ಟೋರೆಂಟ್ ಉದ್ಘಾಟನೆಗೆ ನಟ ನಟಿಯರನ್ನು, ಗಣ್ಯ ವ್ಯಕ್ತಿಗಳನ್ನು ಅಹ್ವಾನಿಸಲಾಗುತ್ತದೆ. ಹಾಗೇ ಅವರ ಕೈಯಲ್ಲಿ ರೆಸ್ಟೋರೆಂಟ್ ಉದ್ಘಾಟನೆ ಮಾಡಿಸಲಾಗುತ್ತದೆ. ಆದ್ರೆ ಈ ರೆಸ್ಟೋರೆಂಟ್ ನಲ್ಲಿ ಮಾತ್ರ ಕೊಂಚ ಬದಲಾವಣೆ ಮಾಡಲಾಗಿದೆ. ಸ್ಟಾರ್ ನಟ- ನಟಿ, ಗಣ್ಯರ ಮುಖಾಂತರ ಉದ್ಘಾಟನೆ ಮಾಡುವ ಬದಲು ಗೋಮಾತೆಯ ಕೈಯಿಂದ ರೆಸ್ಟೋರೆಂಟ್ ಉದ್ಘಾಟನೆ ಮಾಡಿಸಲಾಗಿದೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಲಕ್ನೋದಲ್ಲಿ ನಗರದ ಮೊದಲ ಸಾವಯವ ರೆಸ್ಟೋರೆಂಟ್  ಉದ್ಘಾಟನೆಗೊಂಡಿದೆ. ಈ ಕಾರ್ಯಕ್ರಮಕ್ಕೆ ಹಸುವನ್ನೇ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಅಷ್ಟೇ ಅಲ್ಲದೇ ಆ ಹಸುವಿನ ಕೈಯಿಂದಲೇ ರೆಸ್ಟೋರೆಂಟ್ ಉದ್ಘಾಟನೆ  ಮಾಡಿಸಲಾಗಿದೆ.  ಮಾಧ್ಯಮಗಳ ಪ್ರಕಾರ, ಮಾಜಿ ಡೆಪ್ಯುಟಿ ಎಸ್ಪಿ ಶೈಲೇಂದ್ರ ಸಿಂಗ್ ಒಡೆತನದ ‘ಆರ್ಗ್ಯಾನಿಕ್ ಓಸಿಯನ್’ ಹೆಸರಿನ ರೆಸ್ಟೋರೆಂಟ್ ಇದಾಗಿದ್ದು, ಇದು ಸಾವಯುವ ಕೃಷಿ ಉತ್ಪನ್ನಗಳಿಂದ ತಯಾರಿಸಿದ ಆಹಾರವನ್ನು ಗ್ರಾಹಕರಿಗೆ ಒದಗಿಸುತ್ತದೆ ಅಂತಾ ವರದಿಯಾಗಿದೆ.

ಇದನ್ನೂ ಓದಿ: ಈ ಮೆಟ್ರೋ ನಿಲ್ದಾಣದಲ್ಲಿ ಬೆಕ್ಕೇ ಸ್ಟೇಷನ್ ಮಾಸ್ಟರ್! – ಮಿಯಾಂವ್ ಮಿಕಾನ್ ಬಗ್ಗೆ ಗೊತ್ತಾ?

ವೈರಲ್ ಆದ ವಿಡಿಯೋದಲ್ಲಿ ಹಸು ಕೆಲವು ಜನರೊಂದಿಗೆ ಸೇರಿ ರೆಸ್ಟೋರೆಂಟ್​​​ನ್ನು ಉದ್ಘಾಟಿಸುತ್ತಿರುವುದನ್ನು ಕಾಣಬಹುದು. ಹಸುವಿಗೆ ಹಳದಿ ವಸ್ತ್ರವೊಂದನ್ನು ಹೊದಿಸಿ ಅಲಂಕರಿಸಲಾಗಿತ್ತು. ಹಸುವಿನ ಸುತ್ತಲೂ ಕೆಲವು ಜನರು ನೆರೆದಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ಸಾವಯವ ರೆಸ್ಟೋರೆಂಟ್ ಲುಲು ಮಾಲ್ ಪಕ್ಕದಲ್ಲಿರುವ ಮಿಲೇನಿಯಮ್​​​ನಲ್ಲಿರುವ ಸುಶಾಂತ್ ಗಾಲ್ಫ್ ಸಿಟಿಯಲ್ಲಿದೆ. ಮತ್ತು ಈ ರೆಸ್ಟೋರೆಂಟ್​​ನಲ್ಲಿ ಸಾವಯವ ಆಹಾರ ಉತ್ಪನ್ನಗಳನ್ನೇ ಗ್ರಾಹಕರಿಗೆ ಉಣಬಡಿಸಲಾಗುತ್ತದೆ.

ಈ ಬಗ್ಗೆ ಮಾಜಿ ಎಸ್ಪಿ ಮತ್ತು ಆರ್ಗ್ಯಾನಿಕ್ ಓಸಿಯನ್ ರೆಸ್ಟೋರೆಂಟ್ ಮ್ಯಾನೇಜರ್ ಶೈಲೇಂದ್ರ ಸಿಂಗ್ ಮಾತನಾಡಿದ್ದು, ಭಾರತದ ಆರ್ಥಿಕತೆ ಮತ್ತು ಕೃಷಿಯು ಹಸುಗಳ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಈ ರೆಸ್ಟೋರೆಂಟ್ ಉದ್ಘಾಟನೆಗೆ ಅತಿಥಿಯನ್ನಾಗಿ ಗೋ ಮಾತೆಯನ್ನು ಆಹ್ವಾನಿಸಲಾಗಿದೆ ಎಂದು ಹೇಳಿದ್ದಾರೆ.

ಆರೋಗ್ಯಕರ ದೇಹವು ತಮ್ಮ ಮೊದಲ ಆದ್ಯತೆಯಾಗಬೇಕೆಂದು ಜನರು ಭಾವಿಸುತ್ತಾರೆ. ದುರದೃಷ್ಟವಶಾತ್, ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಬಳಸಿದ ಆಹಾರ ಉತ್ಪನ್ನಗಳನ್ನು ಸೇವಿಸುತ್ತಿದ್ದೇವೆ. ಹಾಗಾಗಿ ಈ ಆರ್ಗ್ಯಾನಿಕ್ ರೆಸ್ಟೋರೆಂಟ್ ತನ್ನದೇ ಆದ ಸಾವಯವ ಉತ್ಪಾದನೆ, ನಿಯಂತ್ರಣ ಮತ್ತು ಸಂಸ್ಕರಣೆಗಳನ್ನು ಹೊಂದಿರುವ ಮೊದಲ ರೆಸ್ಟೋರೆಂಟ್ ಎಂದು ನಾನು ಭಾವಿಸುತ್ತೇನೆ. ಗ್ರಾಹಕರು ಆಹಾರವನ್ನು ಸೇವಿಸಿದ ನಂತರ, ಅವರು ಇಲ್ಲಿನ ಆಹಾರದ ವ್ಯತ್ಯಾಸ ಮತ್ತು ಬೇಡಿಕೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ ಅಂತಾ ಹೇಳಿದ್ದಾರೆ.

suddiyaana