ಬೇಕರಿಗೆ ನುಗ್ಗಿ ಯುವಕರ ಮೇಲೆ ಹಲ್ಲೆ – ಪುಂಡರ ಹೆಡೆಮುರಿಕಟ್ಟಿದ ಪೊಲೀಸರು

ಬೇಕರಿಗೆ ನುಗ್ಗಿ ಯುವಕರ ಮೇಲೆ ಹಲ್ಲೆ – ಪುಂಡರ ಹೆಡೆಮುರಿಕಟ್ಟಿದ ಪೊಲೀಸರು

ಬೆಂಗಳೂರು : ಬೇಕರಿಗೆ ನುಗ್ಗಿ ಕುಂದಾಪುರ ಮೂಲದ ಯುವಕರ ಮೇಲೆ ಹಲ್ಲೆ ನಡೆಸಿದ ಪುಡಿರೌಡಿಗಳನ್ನು ಹೆಚ್ ಎ ಎಲ್ ಪೊಲೀಸರು ಬಂಧಿಸಿದ್ದಾರೆ. ಅಮಾಯಕ ಯುವಕರ ಮೇಲೆ ಪುಂಡಾಟ ಮೆರೆದ ಕೆಂಗೇರಿಯ ತಾಜ್ ವೆಸ್ಟ್ ಹೋಟೆಲ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ 23 ವರ್ಷದ ಕಾರ್ತಿಕ್ , ಫುಡ್ ಡೆಲಿವರಿ ಬಾಯ್ 20 ವರ್ಷದ ಕಾರ್ತಿಕ್ ಮತ್ತು ಅಲ್ಯೂಮಿನಿಯಂ ಕೆಲಸ ಮಾಡ್ತಿದ್ದ 20 ವರ್ಷದ ಸಲ್ಮಾನ್ ಬಂಧಿತರು.

ಇದನ್ನೂ ಓದಿ :  ಕುಂದಾಪುರದ ಯುವಕರ ಮೇಲೆ ಪುಡಿರೌಡಿಗಳಿಂದ ಹಲ್ಲೆ – ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರಿಗೆ ಗೃಹಸಚಿವರ ಸೂಚನೆ

ಬೇಕರಿಗೆ ನುಗ್ಗಿ ಅಮಾಯಕ ಯುವಕರ ಮೇಲೆ ಹಲ್ಲೆ ನಡೆಸಿದ್ದನ್ನ ಖಂಡಿಸಿ ಗುರುವಾರ ರಾತ್ರಿಯಿಂದಲೇ ಬೇಕರಿ ಮತ್ತು ಉದ್ಯಮಿದಾರರ ಸಂಘದವರು ಪ್ರತಿಭಟನೆ ನಡೆಸಿದ್ದರು. ಹಲ್ಲೆ ನಡೆಸಿದ ಗೂಂಡಾಗಳನ್ನ ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿದ್ದರು. ಈ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಕೂಡಾ ಗುರುವಾರ ಕೂಲಂಕುಷ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದರು. ಘಟನೆಯ ಬಗ್ಗೆ, ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದರು. ಶಾಂತಿಯುತವಾಗಿ ಜೀವನ ನಿರ್ವಹಣೆ ಮಾಡಿಕೊಂಡು, ಬದುಕನ್ನು ಕಟ್ಟಿಕೊಂಡಿರುವ ಶ್ರಮಜೀವಿಗಳಿಗೆ, ಯಾವುದೇ ರೀತಿಯ ಕಿರುಕುಳ ಆಗದಂತೆ ರಕ್ಷಣೆ ನೀಡಬೇಕೆಂದು ಗೃಹಸಚಿವರು ಪೊಲೀಸರಿಗೆ ಸೂಚಿಸಿದ್ದರು. ಅಂತೂ ಪೊಲೀಸರು ಪುಂಡಾಟಿಕೆ ಮೆರೆದ ಗೂಂಡಾಗಳ ಹೆಡೆಮುರಿ ಕಟ್ಟಿದ್ದಾರೆ. ತಮ್ಮೂರು ಬಿಟ್ಟು ದೂರದ ಬೆಂಗಳೂರಿಗೆ ಬಂದು ಹೊಟ್ಟೆಪಾಡಿಗಾಗಿ ಹಗಲು ರಾತ್ರಿ ಕಷ್ಟಪಟ್ಟು ದುಡಿಯುವ ಅಮಾಯಕರ ಮೇಲೆ ಈ ರೀತಿ ಅಟ್ಟಹಾಸ ಮೆರೆದಿರುವುದಕ್ಕೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

 

suddiyaana