ಡ್ರೋನ್ ಪ್ರತಾಪ್ ಮೇಲೆ ಮುಗಿಬಿದ್ದ ಸ್ಪರ್ಧಿಗಳು – ಬಿಗ್‌ಬಾಸ್ ಮನೆಯಲ್ಲಿ ಮತ್ತೆ ವರ್ತೂರು ಸಂತೋಷ್ ಹವಾ?

ಡ್ರೋನ್ ಪ್ರತಾಪ್ ಮೇಲೆ ಮುಗಿಬಿದ್ದ ಸ್ಪರ್ಧಿಗಳು – ಬಿಗ್‌ಬಾಸ್ ಮನೆಯಲ್ಲಿ ಮತ್ತೆ ವರ್ತೂರು ಸಂತೋಷ್ ಹವಾ?

ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಅದರಲ್ಲೂ ಈ ಬಾರಿ ಸ್ಪರ್ಧಿಗಳ ನಡುವೆ ಕದನ, ಕಲಹ, ದ್ವೇಷದ ಉರಿಯೇ ಸ್ವಲ್ಪ ಜಾಸ್ತಿಯೇ ಇದೆ. ಇದರ ಮಧ್ಯೆ ಬಿಗ್‌ಬಾಸ್ ಇತಿಹಾಸದಲ್ಲಿ ಸ್ಪರ್ಧಿಯೊಬ್ಬರು ಮನೆಯಿಂದಲೇ ಜೈಲಿಗೆ ಹೋಗಿರುವ ಘಟನೆ ಸಹ ನಡೆದಿತ್ತು. ಆದರೆ, ಹಾಗೇ ಹೋಗಿದ್ದ ವರ್ತೂರು ಸಂತೋಷ್ ಹೀಗೆ ವಾಪಸ್ ಆಗಿದ್ದಾರೆ. ಡ್ರೋನ್ ಪ್ರತಾಪ್ ಮೇಲೆ ಸ್ಪರ್ಧಿಗಳ ಸಿಟ್ಟು ಮತ್ತಷ್ಟೂ ಜಾಸ್ತಿಯಾಗಿದೆ.

ಇದನ್ನೂ ಓದಿ: ಹುಲಿ ಉಗುರು ಪ್ರಕರಣ – ವರ್ತೂರು ಸಂತೋಷ್‌ ಬಿಗ್‌ಬಾಸ್‌ ಮನೆಗೆ ರೀ ಎಂಟ್ರಿ!

ವಾರದ ಕಥೆ ಕಿಚ್ಚನ ಜೊತೆಯಲ್ಲಿ ಎಪಿಸೋಡ್ ನೋಡಿದವರಿಗೆ ಈ ವಾರ ಹೀಗೆ ಆಗುತ್ತೆ ಅಂತಾ ಅಂದಾಜಿತ್ತು. ನೋಡಿದರೆ ಬಿಗ್‌ಬಾಸ್ ಮನೆಯಲ್ಲಿ ಹಾಗೇ ಆಗಿದೆ. ಈ ವಾರ ಎಲ್ಲರೂ ಡ್ರೋನ್ ಪ್ರತಾಪ್ ಮೇಲೆ ಮುಗಿಬಿದ್ದಿದ್ದಾರೆ. ರಾಜ್ಯದ ಜನತೆ ನಿಮ್ಮೊಂದಿಗೆದೆ ಅನ್ನೋ ಮಾತೇ ಎಲ್ಲರನ್ನೂ ಕೆರಳುವಂತೆ ಮಾಡಿದೆ.

ಬೆಳಿಗ್ಗೆಯ ಸಿಹಿನಿದ್ದೆಯಲ್ಲಿದ್ದ ಸದಸ್ಯರಿಗೆ ಬಿಗ್‌ಬಾಸ್‌ ಧ್ವನಿ ಎಚ್ಚರಿಕೆಯ ಕರೆಗಂಟೆಯ ಹಾಗೆ ಮೊಳಗಿದೆ. ‘ಈ ವಾರ ಎಲ್ಲರಗೂ ನಾಮಿನೇಷನ್ ಮಾಡುವ ಅವಕಾಶ ಇರುವುದಿಲ್ಲ. ಬಲೂನ್‌ಗಳನ್ನು ಒಡೆದು ಅದರಲ್ಲಿರುವ ನಾಮಿನೇಷನ್ ಪಾಸ್‌ಗಳನ್ನು ಹುಡುಕಬೇಕು’ ಎಂದು ಬಿಗ್‌ಬಾಸ್ ಆದೇಶಿಸಿದ್ದಾರೆ. ತಕ್ಷಣವೇ ಮನೆಯ ಸದಸ್ಯರೆಲ್ಲರೂ ಬಲೂನ್‌ಗಳನ್ನು ತುಂಬಿರುವ ಜಾಗಕ್ಕೆ ಹೋಗಿ ಬಲೂನ್‌ಗಳನ್ನು ಒಡೆದೊಡೆದು ನೋಡಲು ಶುರುಮಾಡಿದ್ದಾರೆ. ತನಗೆ ಸಿಕ್ಕಿದ ಪಾಸ್‌ ಅನ್ನು ಕಿಸೆಯಲ್ಲಿಟ್ಟುಕೊಂಡು ಹೋಗುತ್ತಿದ್ದ ಪ್ರತಾಪ್ ಅವರನ್ನು ವಿನಯ್‌, ‘ಹೆಂಗಿರತ್ತೆ ನೋಡೋಣ ತೋರಿಸು’ ಎಂದು ಕೇಳಿದ್ದಾರೆ. ಆದರೆ ಪ್ರತಾಪ್ ಪಾಸ್‌ ಅನ್ನು ವಿನಯ್‌ ಕೈಗೆ ಕೊಟ್ಟಿಲ್ಲ. ಮಾತಿಗೆ ಮಾತು ಬೆಳೆದಿದೆ. ಮುಂದಿನ ದೃಶ್ಯದಲ್ಲಿ ಕಾರ್ತಿಕ್, ಸ್ನೇಹಿತ್ ಎಲ್ಲರೂ ಪ್ರತಾಪ್‌ ಮೈಮೇಲೆ ಮುಗಿಬಿದ್ದುಅವರಿಂದ ಪಾಸ್ ಕಸಿಯಲು ಯತ್ನಿಸುತ್ತಿರುವ ದೃಶ್ಯವಿದೆ. ಎಲ್ಲರ ನಡುವೆ ಸಿಲುಕಿ ಒದ್ದಾಡುತ್ತಿರುವ ಪ್ರತಾಪ್‌ ಕಿರುಚಾಡುತ್ತಿದ್ದಾರೆ. ಪ್ರತಾಪ್ ಅವರು ನಾನು ಇನ್ಮುಂದೆ ಮಾತನಾಡ್ತೀನಿ ಅಂತ ಕಿಚ್ಚ ಸುದೀಪ್ ಮುಂದೆ ಹೇಳಿದ್ದಾರೆ, ಮೊದಲ ವಾರಕ್ಕೆ ಹೋಲಿಕೆ ಮಾಡಿ ನೋಡಿದರೆ ಪ್ರತಾಪ್ ಅವರು ತುಂಬ ಒಪನ್ ಮೈಂಡೆಡ್ ಆಗಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಆಟ ಇನ್ನಷ್ಟು ರೋಚಕ ಆಗಿರಲಿದೆ ಎಂದು ಭಾವಿಸಲಾಗುತ್ತಿದೆ.

ಹುಲಿ ಉಗುರು ಲಾಕೆಟ್ ಕೇಸ್‌ನಿಂದ ವರ್ತೂರು ಸಂತೋಷ್‌ಗೆ ಈಗಾಗಲೇ ಜಾಮೀನು ಸಿಕ್ಕಿದೆ. ಆದರೂ ದೊಡ್ಮನೆಗೆ ಸಂತೋಷ್ ಎಂಟ್ರಿ ಕೊಟ್ಟಿಲ್ಲ. ಅಂದುಕೊಂಡಂತೆ ಆಗಿದ್ದರೆ ನಿನ್ನೆಯೇ ವರ್ತೂರು ಸಂತೋಷ್ ಬಿಗ್ ಬಾಸ್ ಮನೆ ಪ್ರವೇಶ ಮಾಡಬೇಕಿತ್ತು. ಜೈಲಿನಿಂದ ಬಿಡುಗಡೆಯಾಗಿ 24 ಗಂಟೆ ಕಳೆದರೂ ಇನ್ನೂ ಸಂತೋಷ್ ದೊಡ್ಮನೆಗೆ ಎಂಟ್ರಿಕೊಟ್ಟಿಲ್ಲ. ಮಾದ್ಯಮದವರಿಂದ ತಪ್ಪಿಸಿಕೊಂಡು ರಾತ್ರೋರಾತ್ರಿ ಹೋದವರು ಯಾಕೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿಲ್ಲ ಎನ್ನುವ ಪ್ರಶ್ನೆ ಎಲ್ಲರದ್ದು. ಅಕ್ಟೋಬರ್ 27ರ ರಾತ್ರಿಯೇ ಬಿಗ್ ಬಾಸ್ ಟೀಮ್ ಸಂತೋಷ್ ಅವರನ್ನ ತಮ್ಮ ವಶಕ್ಕೆ ಪಡೆದಿದ್ದಾರೆ. ಮೆಡಿಕಲ್ ಟೆಸ್ಟ್ ಕೂಡ ಮಾಡಿಸಲಾಗಿದೆ. ಮತ್ತೆ ಬಿಗ್ ಬಾಸ್ ಮನೆಗೆ ಕಳುಹಿಸುತ್ತಿರುವ ಕುರಿತು ಅವರ ಕುಟುಂಬಕ್ಕೂ ಮಾಹಿತಿ ನೀಡಿದೆ. ಆದರೆ, ಜಾಮೀನಿನಲ್ಲಿರುವ ಅಂಶಗಳ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಜಾಮೀನು ಮೇಲೆ ಸಂತೋಷ್ ಜೈಲಿನಿಂದ ಹೊರ ಬಂದಿರುವ ಕಾರಣದಿಂದಾಗಿ ಕಾನೂನು ತಜ್ಞರ ಸಲಹೆ ಪಡೆದುಕೊಳ್ಳಲಾಗುತ್ತಿದೆ. ಸಿಕ್ಕಿರುವ ಮಾಹಿತಿ ಪ್ರಕಾರ, ಇಂದು ಸಂತೋಷ್ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಲಿದ್ದಾರೆ. ಇಂದು ಸಂಜೆ ಅವರನ್ನು ಅಧಿಕೃತವಾಗಿ ಎಂಟ್ರಿ ಕೊಡಿಸಲು ಟೀಮ್ ಸಿದ್ಧತೆ ಮಾಡಿಕೊಂಡಿದೆ. ಮತ್ತೆ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಳ್ಳಿಕಾರ್ ದುನಿಯಾ ಇಂದಿನಿಂದ ದೊಡ್ಮನೆಯಲ್ಲಿ ಶುರುವಾಗಲಿದೆ.

Sulekha