ಸಿದ್ದರಾಮಯ್ಯ ಸೋಲಿಸಲು ಸ್ವಪಕ್ಷದಲ್ಲೇ ಷಡ್ಯಂತ್ರ – ಮತದಾನದ ಹೊತ್ತಲ್ಲೇ ಬಿಜೆಪಿ ನಾಯಕರ ಬಾಂಬ್!

ಸಿದ್ದರಾಮಯ್ಯ ಸೋಲಿಸಲು ಸ್ವಪಕ್ಷದಲ್ಲೇ ಷಡ್ಯಂತ್ರ – ಮತದಾನದ ಹೊತ್ತಲ್ಲೇ ಬಿಜೆಪಿ ನಾಯಕರ ಬಾಂಬ್!

ರಾಜ್ಯ ರಾಜಕೀಯದಲ್ಲಿ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿರುವ ವರುಣಾ ಕ್ಷೇತ್ರದಲ್ಲಿ ಸಾಕಷ್ಟು ಲೆಕ್ಕಾಚಾರಗಳು ನಡೆಯುತ್ತಿವೆ. ವಿಪಕ್ಷನಾಯಕ ಸಿದ್ದರಾಮಯ್ಯ ಇದೇ ನನ್ನ ಕೊನೇ ಚುನಾವಣೆ ಅಂತಾ ತವರು ಕ್ಷೇತ್ರದಲ್ಲಿ ಮತ ಯಾಚಿಸುತ್ತಿದ್ದಾರೆ.. ಮತ್ತೊಂದೆಡೆ ಸಚಿವ ವಿ.ಸೋಮಣ್ಣನನ್ನ ವರುಣಾ ಅಖಾಡಕ್ಕಿಳಿಸಿರುವ ಬಿಜೆಪಿ ಸಿದ್ದರಾಯ್ಯರನ್ನ ಸೋಲಿಸೋಕೆ ನಾನಾ ಕಸರತ್ತು ನಡೆಸುತ್ತಿದೆ. ಇದರ ನಡುವೆ ಇವತ್ತು ಬಿಜೆಪಿ ನಾಯಕರು ಹೊಸ ಬಾಂಬ್ ಸಿಡಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ವಿರುದ್ಧ ‘ಕೈ’ ಹೋಮಹವನ – ‘ಜೈ ಹನುಮಾನ್ ಕಾಂಗ್ರೆಸ್ ನಿರ್ನಾಮ್’ ಎಂದು ಕೇಸರಿ ಅಭಿಯಾನ!

ವರುಣಾ ಕ್ಷೇತ್ರ ಸೋಮಣ್ಣ ಸ್ಪರ್ಧೆ ಬಳಿಕ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿಯ ರಾಷ್ಟ್ರಮಟ್ಟದ ನಾಯಕರು ಕೂಡ ಸಿದ್ದು ಸೋಲಿಸೋಕೆ ನಾನಾ ತಂತ್ರ ಮಾಡುತ್ತಿದ್ದಾರೆ. ಇದರ ನಡುವೆ ಸಿದ್ದರಾಮಯ್ಯರನ್ನ ಸೋಲಿಸೋಕೆ ಸ್ವಪಕ್ಷದವರೇ ಪ್ಲ್ಯಾನ್ ಮಾಡಿದ್ದಾರೆಂದು ಬಿಜೆಪಿ ನಾಯಕರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅಶ್ವತ್ಥ್, ಸಿದ್ದರಾಮಯ್ಯ ಅವರನ್ನು ಸೋಲಿಸಲು ಅವರ ಪಕ್ಷದಲ್ಲೇ ಹುನ್ನಾರ ನಡೆದಿದೆ. ಯಾರು ಕುತಂತ್ರ ನಡೆಸಿದ್ದಾರೆಂಬುದು ಸಿದ್ದರಾಮಯ್ಯಗೆ ಗೊತ್ತಿದೆ. ಇದೇ ಆತಂಕದಿಂದಲೇ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬೀಡು ಬಿಟ್ಟಿದ್ದಾರೆ. ಸೂಕ್ಷ್ಮ ವಿಚಾರಗಳನ್ನು ನಾನು ಹೇಳೋದಿಕ್ಕೆ ಆಗಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡ ಸಿದ್ದರಾಮಯ್ಯರನ್ನ ಸೋಲಿಸಲು ಒಂದು ಗುಂಪು ಷಡ್ಯಂತ್ರ ಮಾಡುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಇದೇ ಟೀಂ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕೆಲಸ ಮಾಡಿತ್ತು ಎಂದಿದ್ದಾರೆ. ಇನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡ, ವರುಣಾ ಕ್ಷೇತ್ರದಲ್ಲಿ ವಿ.ಸೋಮಣ್ಣ ಗೆಲ್ಲುತ್ತಾರೆ, ಸಿದ್ದರಾಮಯ್ಯ ಸೋಲುತ್ತಾರೆ ಎಂದು ಭವಿಷ್ಯ ನುಡಿಸಿದ್ದಾರೆ.

suddiyaana