ಬಿಜೆಪಿ ವಿರುದ್ಧ ‘ಕೈ’ ಹೋಮಹವನ – ‘ಜೈ ಹನುಮಾನ್ ಕಾಂಗ್ರೆಸ್ ನಿರ್ನಾಮ್’ ಎಂದು ಕೇಸರಿ ಅಭಿಯಾನ!

ಬಿಜೆಪಿ ವಿರುದ್ಧ ‘ಕೈ’ ಹೋಮಹವನ – ‘ಜೈ ಹನುಮಾನ್ ಕಾಂಗ್ರೆಸ್ ನಿರ್ನಾಮ್’ ಎಂದು ಕೇಸರಿ ಅಭಿಯಾನ!

ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ಇವತ್ತು ಹೋಮಹವನ ನಡೆಸಲಾಯ್ತು. ಹಾಗಂತ ವಿಶೇಷ ಕಾರ್ಯಕ್ರಮವೇನೂ ಇರಲಿಲ್ಲ. ಹೋಮ ಹವನ ನಡೆದಿದ್ದೇ ಬಿಜೆಪಿ ಸರ್ಕಾರದ ವಿರುದ್ಧ. ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ವಿಭಿನ್ನವಾಗಿ ಆಕ್ರೋಶ ಹೊರ ಹಾಕಿದ್ರು. ಬಿಜೆಪಿ ಸರ್ಕಾರ ತೊಲಗಲಿ ಅಂತಾ ಸಿಲಿಂಡರ್, ಸ್ಕೂಟರ್, ಪೇಸಿಎಂ ಸ್ಕ್ಯಾನರ್ ಇಟ್ಟು ಅರ್ಚಕರ ನೇತೃತ್ವದಲ್ಲಿ ಪೂಜೆ, ಹೋಮ ಹವನ ನಡೆಸಲಾಯ್ತು. ಇದೇ ವೇಳೆ ಭ್ರಷ್ಟ ಬಿಜೆಪಿ ಸರ್ಕಾರ ತೊಲಗಲಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿ, ಬೆಲೆ ಏರಿಕೆ ಇಳಿಯಲಿ ಎಂದು ಮಂತ್ರಪಠಣ ಮಾಡಲಾಯ್ತು.

ಮತ್ತೊಂದೆಡೆ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಕೂಡ ವಿಭಿನ್ನವಾಗಿ ಕ್ಯಾಂಪೇನ್ ಮಾಡಿದ್ರು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಬಗೆಗಿನ ಘೋಷಣೆ ವಿರುದ್ಧ ಅಭಿಯಾನ ನಡೆಸಿದ್ರು. ಜೈ ಹನುಮಾನ್, ಕಾಂಗ್ರೆಸ್ ನಿರ್ನಾಮ್ ಎನ್ನುವ ಘೋಷವಾಕ್ಯದೊಂದಿಗೆ ಕ್ಯಾಂಪೇನ್ ಮಾಡಿದ್ರು.

suddiyaana