ಹೆಚ್‌ಡಿಕೆಯ ಹೃದಯ ಶಸ್ತ್ರಚಿಕಿತ್ಸೆಯನ್ನು ಅನುಮಾನಿಸಿದ ‘ಕೈ’ ಶಾಸಕ – ತಂದೆ ಆಪರೇಷನ್ ವಿಚಾರ ಮಾತನಾಡುತ್ತ ನಿಖಿಲ್ ಭಾವುಕ

ಹೆಚ್‌ಡಿಕೆಯ ಹೃದಯ ಶಸ್ತ್ರಚಿಕಿತ್ಸೆಯನ್ನು ಅನುಮಾನಿಸಿದ ‘ಕೈ’ ಶಾಸಕ – ತಂದೆ ಆಪರೇಷನ್ ವಿಚಾರ ಮಾತನಾಡುತ್ತ ನಿಖಿಲ್ ಭಾವುಕ

ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಅವರು ಹಾರ್ಟ್‌ ಆಪರೇಷನ್‌ ಮಾಡಿಸಿಕೊಂಡು ಬಂದಿರೋದನ್ನು ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಂಡಿಸಿದ್ದೇಗೌಡ ವ್ಯಂಗ್ಯವಾಡಿದ್ದಾರೆ. ಚುನಾವಣೆ ಬಂದರೆ ಸಾಕು ಆಸ್ಪತ್ರೆ ಸೇರಿ 3 ದಿನದಲ್ಲಿ ಹಾರ್ಟ್​ ಆಪರೇಷನ್ ಮಾಡಿಕೊಂಡು 4ನೇ ದಿನಕ್ಕೆ ಇಡೀ ರಾಜ್ಯ ಸುತ್ತುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಸ್ವಾಭಿಮಾನ ಉಳಿಸೊ ಕೆಲಸ ಮಾಡಿ! – ಸುಮಲತಾ ಅಂಬರೀಶ್ ಗೆ ಖಡಕ್ ಎಚ್ಚರಿಕೆ ಕೊಟ್ಟ ಶಾಸಕ ನರೇಂದ್ರ ಸ್ವಾಮಿ

ಈ ಬಗ್ಗೆ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಸಚಿವ ಚಲುವರಾಯಸ್ವಾಮಿ ಅವರಿಗೆ ಇದ್ದಂತಹದ್ದೇ ಹಾರ್ಟ್​ ಸಮಸ್ಯೆ ಇದೆ. ಅವರು ಆಸ್ಪತ್ರೆಗೆ ಹೋದರೆ 1 ತಿಂಗಳು ರೆಸ್ಟ್ ತೆಗೆದುಕೊಳ್ತಾರೆ. ಹಾರ್ಟ್​ ಆಪರೇಷನ್ ಆದವರು ತಿಂಗಳಾದ್ರೂ ಹೊರಗೆ ಬರಲ್ಲ. ಆದ್ರೆ ಅದ್ಹೆಂಗೆ ಕೇವಲ 2 ದಿನಕ್ಕೆ ಕುಮಾರಸ್ವಾಮಿ ಹೊರಗೆ ಬಂದರು ಎನ್ನುವುದು ಗೊತ್ತಾಗುತ್ತಿಲ್ಲ. ದಯಮಾಡಿ ಅಂತಹದ್ದೇನಾದರು ಹೊಸ ಟೆಕ್ನಿಕ್​ ಇದ್ದರೆ ನನಗೆ ಹೇಳಿಕೊಡಿ ಎಂದು ಕಿಚಾಯಿಸಿದ್ದಾರೆ.

ಇನ್ನು ಹೆಚ್.ಡಿ.ಕುಮಾರಸ್ವಾಮಿ ಅವರ ಹೃದಯ ಶಸ್ತ್ರಚಿಕಿತ್ಸೆಯನ್ನು ಅನುಮಾನಿಸಿ ಕಾಂಗ್ರೆಸ್ ಶಾಸಕ ರಮೇಶ ಬಂಡೀಸಿದ್ದೇಗೌಡ ನೀಡಿದ್ದ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮ ಕುಟುಂಬ ಮೊಸಳೆ ಕಣ್ಣೀರು ಹಾಕಲ್ಲ ಎಂದು ‘ಕೈ’ ಶಾಸಕನಿಗೆ ತಿರುಗೇಟು ನೀಡಿದ್ದಾರೆ.

ಮಂಡ್ಯದ ನಾಗಮಂಗಲದಲ್ಲಿ ಮಾತನಾಡಿದ ನಿಖಿಲ್, ರಮೇಶ್ ಬಾಬು ಅವರ ಹಿರಿತನಕ್ಕೆ ಈ ಮಾತು ಕ್ಷೋಭೆ ತರಲ್ಲ. ನಮ್ಮ ತಂದೆಯವರಿಗೆ ಆಗಿರುವ ಆಪರೇಶನ್‌ನ್ನು ಇವರ ಮುಂದೆ ಸಾಬೀತುಪಡಿಸುವ ಅಗತ್ಯವಿಲ್ಲ. ಆಪರೇಶನ್ ಆಗಿದೆ ಎಂಬ ಅನುಕಂಪದಲ್ಲಿ ಮತ ಕೇಳುವ ಪ್ರಮೇಯ ನಮಗೆ ಇಲ್ಲ. ನಮ್ಮ ತಂದೆಗೆ ಆಪರೇಶನ್ ಆಗಿರೋದು ನಿಜ. ಮೂರನೇ ಬಾರಿಗೆ ಅವರಿಗೆ ಹೃದಯದ ಶಸ್ತ್ರಚಿಕಿತ್ಸೆ ಆಗಿದೆ. ಇದನ್ನು ಪ್ರೂ ಮಾಡುವ ಅವಶ್ಯಕತೆ ನಮಗೆ ಇಲ್ಲ. 6 ವರ್ಷದಲ್ಲಿ ಮೂರನೇ ಬಾರಿ ಹೃದಯದ ಆಪರೇಶನ್ ಆಗಿರೋದು ನಮಗೆ ನೋವು ಆಗಿದೆ ಎಂದು ಭಾವುಕರಾಗಿದ್ದಾರೆ.

Shwetha M