ಬಹುಮತ ಬರದಿದ್ರೂ ಕಪ್ ನಮ್ದೇ, ಪ್ಲ್ಯಾನ್ ಬಿ ರೆಡಿ ಎಂದ ಅಶೋಕ್ ಗೆ ಕಾಂಗ್ರೆಸ್ ನಾಯಕರ ಕೌಂಟರ್!

ಬಹುಮತ ಬರದಿದ್ರೂ ಕಪ್ ನಮ್ದೇ, ಪ್ಲ್ಯಾನ್ ಬಿ ರೆಡಿ ಎಂದ ಅಶೋಕ್ ಗೆ ಕಾಂಗ್ರೆಸ್ ನಾಯಕರ ಕೌಂಟರ್!

ಮತದಾನೋತ್ತರ ಸಮೀಕ್ಷೆ ಹೊರಬಿದ್ದ ಬಳಿಕ ನಾಯಕರ ರಣತಂತ್ರ ಜೋರಾಗುತ್ತಿವೆ. ಕಾಂಗ್ರೆಸ್ ನಾಯಕರಂತೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರೋದು ಅಂತಾ ಜೋಶ್​ನಲ್ಲಿದ್ದಾರೆ. ಆದ್ರೆ ಬಿಜೆಪಿ ನಾಯಕರು ಮಾತ್ರ ಈ ಸಲ ಕಪ್ ನಮ್ದೇ ಅಂತಿದ್ದಾರೆ. ಹಾಗೇನಾದ್ರೂ ಬಹುಮತ ಸಿಗದೇ ಇದ್ರೂ ಅಧಿಕಾರಕ್ಕಾಗಿ ಎಲ್ಲದಕ್ಕೂ ಸಿದ್ಧ ಅನ್ನೋದನ್ನ ಓಪನ್ ಆಗೇ ಹೇಳಿದ್ದಾರೆ. ಅದ್ರಲ್ಲೂ ಸಾಮ್ರಾಟ ಆರ್.ಅಶೋಕ್ ಈ ಸಲ ನಮಗೇ ಬಹುಮತ ಬರುತ್ತೆ. ಬರದಿದ್ರೂ ಪ್ಲ್ಯಾನ್ ಬಿ ರೆಡಿ ಇದೆ. ನಾವು ರಾಜಕಾರಣಿಗಳು ಸನ್ಯಾಸಿಗಳಲ್ಲ. ಕಪ್ ನಮ್ದೇ. ಟ್ರೋಫಿನೂ ನಮ್ಮದೇ ಎಂದಿದ್ದಾರೆ. ಅಶೋಕ್​ರ ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು ಕೂಡ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ : ಆಪರೇಷನ್ ಕಮಲದ ಭೀತಿ – ಗೆದ್ದ ತಕ್ಷಣವೇ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬರುವಂತೆ ಸೂಚನೆ

ಕಪ್ ಅವರೇ ಇಟ್ಟುಕೊಳ್ಳಲಿ ಜೊತೆಗೆ ಟೋಪಿನೂ ಅವರೇ ಇಟ್ಟುಕೊಳ್ಳಲಿ. ಆದರೆ ಸರ್ಕಾರ ಮಾತ್ರ ನಮ್ಮದು ಅಂದಿದ್ದಾರೆ ಎಂದು ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಡಿಕೆ ಸುರೇಶ್ ಕೂಡ ಮಾತನಾಡಿ ಕಪ್ ಈಗ್ಲೂ ಅವರದ್ದೇ ಮುಂದಕ್ಕೆ ನಮ್ಮದು ಎಂದಿದ್ದಾರೆ. ಡಾಕ್ಟರ್ ಜಿ ಪರಮೇಶ್ವರ್ ಮಾತನಾಡಿ ಕಪ್ ಎಲ್ಲವೂ ಅವರದ್ದೇ. ಆದರೆ ಸರ್ಕಾರ ನಮ್ಮದು ಎಂದಿದ್ದಾರೆ.

suddiyaana