ಕಾಂಗ್ರೆಸ್ ನ 135 ಅಭ್ಯರ್ಥಿಗಳ ಫಸ್ಟ್ ಲಿಸ್ಟ್ ಲೀಕ್ – ಯಾರಿಗೆಲ್ಲಾ ಅವಕಾಶ ಸಿಕ್ಕಿದೆ ಗೊತ್ತಾ..?

ಕಾಂಗ್ರೆಸ್ ನ 135 ಅಭ್ಯರ್ಥಿಗಳ ಫಸ್ಟ್ ಲಿಸ್ಟ್ ಲೀಕ್ – ಯಾರಿಗೆಲ್ಲಾ ಅವಕಾಶ ಸಿಕ್ಕಿದೆ ಗೊತ್ತಾ..?

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗ್ಲೇ ಮೂರೂ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಜೋರಾಗಿದೆ. ಇದೀಗ ಕಾಂಗ್ರೆಸ್ ಕೂಡ ಮೊದಲ ಪಟ್ಟಿ ರೆಡಿ ಮಾಡಿದ್ದು ಬಿಡುಗಡೆಗೂ ಮುನ್ನವೇ ಸೋರಿಕೆಯಾಗಿದೆ ಎನ್ನಲಾಗಿದೆ.

ಮಾರ್ಚ್ 17ರಂದು ದೆಹಲಿಯಲ್ಲಿ ಕಾಂಗ್ರೆಸ್​ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಟಿಕೆಟ್​ ಆಕಾಂಕ್ಷಿಗಳ ಚಿತ್ತ ಸಭೆ ಮೇಲೆ ನೆಟ್ಟಿದೆ. ಆದ್ರೆ ಸ್ಕ್ರೀನಿಂಗ್ ಕಮಿಟಿಯಿಂದ ಹೈಕಮಾಂಡ್‌ಗೆ ಕಳುಹಿಸಲಾಗಿರುವ ಅಭ್ಯರ್ಥಿಗಳ ಪಟ್ಟಿ ಸೋರಿಕೆಯಾಗಿದ್ದು, 66 ಕ್ಷೇತ್ರಗಳಿಗೆ ಸಿಂಗಲ್ ಹೆಸರು ಹಾಕಿ ಲಿಸ್ಟ್ ಕಳುಹಿಸಲಾಗಿದೆ. ಹಲವು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಲಭ್ಯವಾಗಿದೆ. ಕಾಂಗ್ರೆಸ್‌ನ 135 ಅಭ್ಯರ್ಥಿಗಳ ಮೊದಲ ಪಟ್ಟಿ (Congress Candidates First Lift) ನಾಳೆಯೇ(ಮಾ.17) ಹೊರಬೀಳುವ ಸಾಧ್ಯತ ಇದೆ.

ಇದನ್ನೂ ಓದಿ : ‘2024ರ ಚುನಾವಣೆ ಬಳಿಕ ಭಾರತದಲ್ಲಿ ಸರ್ವಾಧಿಕಾರ’ – ಮಾಜಿ ಮುಖ್ಯಮಂತ್ರಿ ಕೊಟ್ಟ ಎಚ್ಚರಿಕೆ ಏನು..?

ಕಾಂಗ್ರೆಸ್ ಪಟ್ಟಿಯಲ್ಲಿ 66 ಕ್ಷೇತ್ರಗಳಿಗೆ ಸಿಂಗಲ್ ಹೆಸರು ಹಾಕಿ ಲಿಸ್ಟ್ ಕಳುಹಿಸಲಾಗಿದೆ. ಬಹುತೇಕ 66 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ತಲೆ ಬಿಸಿ ಇಲ್ಲ. ಈ ಪಟ್ಟಿಗೆ ಕಾಂಗ್ರೆಸ್​ ಕೇಂದ್ರ ಚುನಾವಣಾ ಸಮಿತಿ (Congress’s Central Election Committee (CEC) ಗ್ರೀನ್​ ಸಿಗ್ನಲ್​ ನೀಡಿದರೆ ಮೊದಲ ಹಂತದಲ್ಲಿ 135 ಕ್ಷೇತ್ರಗಳಿಗೆ  ಅಭ್ಯರ್ಥಿಗಳ ಘೋಷಣೆ ಸಾಧ್ಯತೆ ಇದೆ. ಇನ್ನುಳಿದ 89 ಕ್ಷೇತ್ರಗಳಲ್ಲಿ ಎರಡೆರಡು ಹೆಸರು ಶಿಫಾರಸು ಮಾಡಲಾಗಿದೆ. ಈ ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ ಕಾಂಗ್ರೆಸ್ ಪಾಲಿಗೆ ಚಾಲೆಂಜಿಂಗ್​ ಕೆಲಸವಾಗಿದೆ. ಹೆಚ್ಚು ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ಈಗಾಗಲೇ ಸಂಧಾನ ನಡೆಸುತ್ತಿದ್ದಾರೆ. ಸುಮಾರು 10ರಿಂದ 12 ಕ್ಷೇತ್ರಗಳಲ್ಲಿ ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದ ಕೆಲ ಕ್ಷೇತ್ರಗಳ ಟಿಕೆಟ್ ಹಂಚಿಕೆ ಕಾಂಗ್ರೆಸ್​ಗೆ ದೊಡ್ಡ ಸವಾಲ್​ ಆಗಿ ಪರಿಣಮಿಸಿದ್ದು, ಅದಕ್ಕಾಗಿ ಹೈಕಮಾಂಡ್ ಮೊರೆ ಹೋಗಿದ್ದಾರೆ.

ನಾಳೆ ದೆಹಲಿಯಲ್ಲಿ ಕಾಂಗ್ರೆಸ್​ ಚುನಾವಣಾ ಸಮಿತಿ ಸಭೆ ಬಳಿಕ ಕೆಲ ಅಭ್ಯರ್ಥಿ ಬದಲಾಗುವ ಸಾಧ್ಯತೆಯೂ ಇದೆ.ಹಾಗಾದ್ರೆ ಸ್ಕ್ರೀನಿಂಗ್ ಕಮಿಟಿ ಯಾವ್ಯಾವ ಕ್ಷೇತ್ರಕ್ಕೆ ಸಿಂಗಲ್ ಹೆಸರು ಶಿಫಾರಸು ಮಾಡಿದೆ? ಯಾವ್ಯಾವ ಕ್ಷೇತ್ರದಲ್ಲಿ ಡಬಲ್ ಹೆಸರು ಶಿಫಾರಸು ಮಾಡಲಾಗಿದೆ? ಎನ್ನುವ ಪಟ್ಟಿ ಈ ಕೆಳಗಿನಂತಿದೆ.

ಸಿಂಗಲ್ ಹೆಸರಿರುವ ಕ್ಷೇತ್ರಗಳು

ಹಿರೇಕೆರೂರು – ಯುಬಿ ಬಣಕಾರ್, ವಿರಾಜಪೇಟೆ – ಪೊನ್ನಣ್ಣ, ಬಸವನಗುಡಿ – ಯುಬಿ ವೆಂಕಟೇಶ್, ರಾಜಾಜಿನಗರ- ಪುಟ್ಟಣ್ಣ, ಸೊರಬ – ಮಧು ಬಂಗಾರಪ್ಪ, ಚಿತ್ರದುರ್ಗ – ವೀರೇಂದ್ರ ಪಪ್ಪಿ, ಹಿರಿಯೂರು -ಸುಧಾಕರ್, ರಾಮನಗರ – ಇಕ್ಬಾಲ್ ಹುಸೇನ್, ಮಾಗಡಿ – ಬಾಲಕೃಷ್ಣ, ಹೊಸಕೋಟೆ- ಶರತ್ ಬಚ್ಚೇಗೌಡ, ಚಿಂತಾಮಣಿ – ಎಂಸಿ ಸುಧಾಕರ್, ಚಿಕ್ಕಬಳ್ಳಾಪುರ – ಕೊತ್ತೂರ್ ಮಂಜುನಾಥ್, ಟಿ. ನರಸಿಪುರ – ಸುನಿಲ್ ಬೋಸ್, ನಿಪ್ಪಾಣಿ – ಕಾಕಾಸಾಹೇಬ್ ಪಾಟೀಲ್, ಹುಕ್ಕೇರಿ – ಎ.ಬಿ ಪಾಟೀಲ್ , ಗೋಕಾಕ್ – ಅಶೋಕ್ ಪೂಜಾರಿ, ಹುನಗುಂದ – ವಿಜಯಾನಂದ ಕಾಶಪ್ಪನವರ್, ಮುದ್ದೇಬಿಹಾಳ – ಸಿ.ಎಸ್ ನಾಡಗೌಡ, ರಾಯಚೂರು – ಎನ್.ಎಸ್ ಬೋಸರಾಜ್, ಕನಕಗಿರಿ – ಶಿವರಾಜ್ ತಂಗಡಗಿ , ಯಲಬುರ್ಗಾ – ಬಸವರಾಜ್ ರಾಯರೆಡ್ಡಿ, ಕಾರವಾರ – ಸತೀಶ್ ಸೈಲ್, ಭಟ್ಕಳ – ಮಂಕಾಳ ವೈದ್ಯ, ಹಾನಗಲ್ – ಶ್ರೀನಿವಾಸ್ ಮಾನೆ, ಬೈಂದೂರು – ಗೋಪಾಲ್ ಪೂಜಾರಿ, ಕೋಲಾರ – ಸಿದ್ದರಾಮಯ್ಯ, ಕಾಪು – ವಿನಯ್ ಕುಮಾರ್ ಸೊರಕೆ, ಕಡೂರು – ವೈಎಸ್‌ವಿ ದತ್ತಾ.

ಎರಡು ಹೆಸರುಗಳಿರುವ ಕ್ಷೇತ್ರ

ಶಿಗ್ಗಾಂವಿ – ಅಜಂಪೀರ್ ಖಾದ್ರಿ/ ಸೋಮಣ್ಣ ಬೇವಿನಮರದ, ‌‌ಹೊಳಲ್ಕೆರೆ – ಸವಿತಾ ರಘು/ ಆಂಜನೇಯ, ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್/ ಮಂಜುನಾಥ್ ಗೌಡ, ಬಳ್ಳಾರಿ ಸಿಟಿ – ಅಲ್ಲಂ ಪ್ರಶಾಂತ್/ ಅನಿಲ್ ಲಾಡ್, ಗಂಗಾವತಿ – ಇಕ್ಬಾಲ್ ಅನ್ಸಾರಿ/ ಎಚ್.ಆರ್ ಶ್ರೀನಾಥ್, ಕಲಬುರಗಿ ಗ್ರಾಮೀಣ – ರೇವುನಾಯಕ ಬೆಳಮಗಿ/ ವಿಜಯಕುಮಾರ್, ತೇರದಾಳ್ – ಉಮಾಶ್ರೀ/ ಮಲ್ಲೇಶಪ್ಪ, ಬಾಗಲಕೋಟ – ಹೆಚ್ ವೈ ಮೇಟಿ/ ದೇವರಾಜ್ ಪಾಟೀಲ್, ಬೆಳಗಾವಿ ಉತ್ತರ – ಫೀರೋಜ್ ಸೇಠ್/ ಆಸೀಫ್ ಸೇಠ್, ಕುಡಚಿ – ಶ್ಯಾಮ್ ಭೀಮ್ ಘಾಟ್ಗೆ/ ಮಹೇಂದ್ರ ತಮ್ಮಣ್ಣ, ಕಾಗವಾಡ – ರಾಜೂ ಕಾಗೆ/ ದಿಗ್ವಿಜಯ್ ದೇಸಾಯಿ, ಅಥಣಿ – ಗಜಾನನ್ ಮಂಗಸೂಳಿ/ ಶ್ರೀಕಾಂತ್ ಪೂಜಾರಿ, ನಂಜನಗೂಡು – ಮಹದೇವಪ್ಪ/ ದರ್ಶಮನ್ , ಚಾಮುಂಡೇಶ್ವರಿ – ಮರಿಗೌಡ/ ಚಂದ್ರಶೇಖರ್, ಮಂಗಳೂರು ದಕ್ಷಿಣ – ಐವಾನ್ ಡಿಸೋಜಾ/ ಜೆ ಆರ್ ಲೋಬೋ, ಬೆಳ್ತಂಗಡಿ- ರಕ್ಷಿತ್ / ಶಿವರಾಂ, ಬೆಂಗಳೂರು ದಕ್ಷಿಣ-ಆರ್.ಕೆ ರಮೇಶ್/ ಸುಷ್ಮಾ ರಾಜಗೋಪಾಲ್, ದಾಸರಹಳ್ಳಿ- ಕೃಷ್ಣಮೂರ್ತಿ/ ಸಿ.ಎಂ ಧನಂಜಯ, ಕಲಘಟಗಿ – ಸಂತೋಷ್ ಲಾಡ್/ ನಾಗರಾಜ್ ಚಬ್ಬಿ‘‘‘

ಹಾಲಿ ಶಾಸಕರ ಕ್ಷೇತ್ರಗಳಲ್ಲೂ ಇಬ್ಬರ ಹೆಸರು

ಇದರ ನಡುವೆ ಹಾಲಿ ಶಾಸಕರಿರುವ ಕ್ಷೇತ್ರಗಳಲ್ಲೂ ಎರಡೆರಡು ಹೆಸರು ಕೇಳಿಬಂದಿವೆ. ಕುಂದಗೋಳ – ಕುಸುಮಾ ಶಿವಳ್ಳಿ, ಶಾಸಕಿ/ ಚಂದ್ರಶೇಖರ್ ಜತ್ತಲ್, ದೊಡ್ಡಬಳ್ಳಾಪುರ – ವೆಂಕಟರಮಣಯ್ಯ, ಶಾಸಕ/ ಬಿಸಿ ಆನಂದ್, ಪಾವಗಡ – ವೆಂಕಟರಮಣಪ್ಪ, ಶಾಸಕ/ಹೆಚ್.ವಿ ವೆಂಕಟೇಶ್, ಲಿಂಗಸುಗೂರು – ಡಿ‌ಎಸ್ ಹೂಲಗೇರಿ/ರುದ್ರಯ್ಯ.

suddiyaana