‘ನಿರಂತರ ರಾಜಕೀಯ ವಾಗ್ದಾಳಿ, ರಾಹುಲ್‌ಗೆ ತಟ್ಟುತ್ತಿಲ್ಲ ಚಳಿ’ -ಕನ್ಹಯ್ಯ ಕುಮಾರ್

‘ನಿರಂತರ ರಾಜಕೀಯ ವಾಗ್ದಾಳಿ, ರಾಹುಲ್‌ಗೆ ತಟ್ಟುತ್ತಿಲ್ಲ ಚಳಿ’ -ಕನ್ಹಯ್ಯ ಕುಮಾರ್

ನಿರಂತರ ಮಳೆ ಸುರಿಯುತ್ತಿದ್ರೂ ರಾಹುಲ್​ ಕ್ಯಾರೇ ಅಂದಿರಲಿಲ್ಲ. ಮೈಸುಡುವ ಬಿರು ಬಿಸಿಲು ಇದ್ರೂ ರಾಹುಲ್ ಎಲ್ಲೂ ಯಾತ್ರೆ ಸ್ಥಗಿತಗೊಳಿಸಿಲ್ಲ. ಇದೀಗ ಮೈನಡುಗುವಂಥಾ ಚಳಿ.. ದೆಹಲಿಯಲ್ಲಂತೂ ಕೇಳೋದೆ ಬೇಡ. ಆದ್ರೂ ಕೂಡ ರಾಹುಲ್ ಗಾಂಧಿ ಮಾತ್ರ ಬರೀ ಟೀಶರ್ಟ್​​ನಲ್ಲೇ ಪಾದಯಾತ್ರೆ ಮಾಡ್ತಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇಷ್ಟೊಂದು ಚಳಿ ಇದ್ರೂ ರಾಹುಲ್ ಕೇವಲ ಟೀಶರ್ಟ್​ನಲ್ಲೇ ಸಂಚರಿಸ್ತಿರೋದು ಹೇಗೆ ಅಂತಾ ಎಲ್ಲರೂ ಮಾತನಾಡಿಕೊಳ್ತಿದ್ದಾರೆ. ಈ ಬಗ್ಗೆ ಮಾತನಾಡಿರೋ ಕಾಂಗ್ರೆಸ್ ಯುವ ನಾಯಕ ಕನ್ಹಯ್ಯ ಕುಮಾರ್, ಈಗಾಗ್ಲೇ ಮೂರು ಸಾವಿರಕ್ಕೂ ಅಧಿಕ ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದಾರೆ. ಈ ವೇಳೆ ರಾಜಕೀಯವಾಗಿ ರಾಹುಲ್​ ಮೇಲೆ ಸಾಕಷ್ಟು ದಾಳಿಗಳಾಗಿವೆ. ಅವರ ಮೇಲೆ ಎಷ್ಟರ ಮಟ್ಟಿಗೆ ಅಟ್ಯಾಕ್ ಆಗಿವೆ ಅನ್ನೋದಕ್ಕೆ ಅವರ ದೇಹವೇ ಸಾಕ್ಷಿ ಅಂತಾ ಕನ್ಹಯ್ಯ ಕುಮಾರ್ ಹೇಳಿದ್ದಾರೆ. ಈ ಹಿಂದೆ ಮಂಡ್ಯದಲ್ಲಿ ಭಾರಿ ಮಳೆ ಮಧ್ಯೆಯೂ ಭಾರತ್ ಜೋಡೋ ಕಾರ್ಯಕ್ರಮವನ್ನುದ್ದೇಶಿಸಿ ರಾಹುಲ್ ಮಾತನಾಡಿದ್ರು. ಈ ವಿಡಿಯೋ ಫುಲ್ ವೈರಲ್ ಕೂಡ ಆಗಿತ್ತು.

suddiyaana