ಉತ್ತರ ಪ್ರದೇಶದಲ್ಲಿ 6 ತಿಂಗಳ ಕಾಲ ಪ್ರತಿಭಟನೆ, ಮುಷ್ಕರ ನಿಷೇಧ! – ಕಾರಣವೇನು ಗೊತ್ತಾ?

ಉತ್ತರ ಪ್ರದೇಶದಲ್ಲಿ 6 ತಿಂಗಳ ಕಾಲ ಪ್ರತಿಭಟನೆ, ಮುಷ್ಕರ ನಿಷೇಧ! – ಕಾರಣವೇನು ಗೊತ್ತಾ?

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪಂಜಾಬ್‌ ಮತ್ತು ಹರಿಯಾಣದಲ್ಲೂ ರೈತರು ಹೋರಾಟಕ್ಕಿಳಿದಿದ್ದಾರೆ. ಈ ಬೆನ್ನಲ್ಲೇ  ಸಿಎಂ ಯೋಗಿ ಆದಿತ್ಯನಾಥ್  ಸರ್ಕಾರ, ಉತ್ತರ ಪ್ರದೇಶದಲ್ಲಿ 6 ತಿಂಗಳ ಕಾಲ ಯಾವುದೇ ರೀತಿಯ ಮುಷ್ಕರ, ಪ್ರತಿಭಟನೆ, ಧರಣಿ ನಡೆಸದಂತೆ ನಿಷೇಧ ಹೇರಿದೆ.

ಇದನ್ನೂ ಓದಿ: ಟೀಮ್ ಇಂಡಿಯಾ ಬೋನಸ್ ರನ್ ಆಂಗ್ಲರಿಗೆ ಬಿಟ್ಟು ಕೊಟ್ಟಿದ್ದು ಹೇಗೆ? – ನಿಯಮದ ಪಾಠ ಮಾಡುವವರೇ ನಿಯಮ ಮರೆತರಾ?

ಈ ಸಂಬಂಧ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಿಬ್ಬಂದಿ ಡಾ.ದೇವೇಶ್ ಚತುರ್ವೇದ್​ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ 6 ತಿಂಗಳ ಕಾಲ ಯಾವುದೇ ರೀತಿಯ ಮುಷ್ಕರ, ಪ್ರತಿಭಟನೆ, ಧರಣಿ ನಡೆಸುವಂತಿಲ್ಲ. ಈ ನಿಯಮವು ಸರ್ಕಾರದ ಅಡಿಯಲ್ಲಿರುವ ಸರ್ಕಾರಿ ಇಲಾಖೆಗಳು, ನಿಗಮಗಳು ಮತ್ತು ಪ್ರಾಧಿಕಾರಗಳಿಗೆ ಅನ್ವಯಿಸಲಿದೆ. ಒಂದು ವೇಳೆ ಮುಷ್ಕರ ಅಥವಾ ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂದರೆ, ವಾರಂಟ್ ಇಲ್ಲದೆ ಬಂಧಿಸಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ.

ಆರು ತಿಂಗಳ ಕಾಲ ಮುಷ್ಕರಕ್ಕೆ ನಿಷೇಧ ಏಕೆ?

ಎಸ್ಮಾ ಕಾಯ್ದೆ ಜಾರಿಯಾದ ನಂತರ ಯಾವುದೇ ನೌಕರರು ಮುಷ್ಕರ ಅಥವಾ ಪ್ರತಿಭಟನೆ ಮಾಡುವ ಮೂಲಕ ಕಾಯ್ದೆ ಉಲ್ಲಂಘಿಸಿದಲ್ಲಿ ವಾರಂಟ್ ಇಲ್ಲದೇ ಬಂಧಿಸಲಾಗುವುದು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದಕ್ಕೂ ಮೊದಲು, ಯೋಗಿ ಸರ್ಕಾರವು 2023 ರಲ್ಲಿ ಆರು ತಿಂಗಳ ಕಾಲ ಮುಷ್ಕರವನ್ನು ನಿಷೇಧಿಸಿತ್ತು. ಆಗ ವಿದ್ಯುತ್ ಇಲಾಖೆ ನೌಕರರು ಮುಷ್ಕರ ನಡೆಸಿದ್ದರಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು.

ಎಸ್ಮಾ ಕಾಯ್ದೆ ಎಂದರೇನು ಮತ್ತು ಅದು ಯಾರಿಗೆ ಅನ್ವಯಿಸುತ್ತದೆ?

ಉತ್ತರ ಪ್ರದೇಶ ಸರ್ಕಾರವು ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆ 1966 ರ ಅಡಿಯಲ್ಲಿ ಜಾರಿಗೊಳಿಸಿದ ಎಸ್ಮಾ ಕಾಯ್ದೆಯನ್ನು ರಾಜ್ಯಪಾಲರಿಂದ ಅನುಮೋದನೆ ಪಡೆದ ನಂತರ ಜಾರಿಗೆ ತರಲಾಯಿದೆ. ಪ್ರತಿಭಟನೆ ಮತ್ತು ಮುಷ್ಕರ ಮಾಡುವವರಿಗಾಗಿ AMSA ಕಾಯ್ದೆಯನ್ನು ಮಾಡಲಾಗಿದೆ. ಅದರ ಅನುಷ್ಠಾನದ ನಂತರ, ರಾಜ್ಯದಲ್ಲಿ ಪ್ರತಿಭಟನೆ, ಮುಷ್ಕರಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಈ ಕಾಯ್ದೆಯನ್ನು ಉತ್ತರ ಪ್ರದೇಶ ಸರ್ಕಾರವು ಕಳೆದ ವರ್ಷ ಜಾರಿಗೆ ತಂದಿತು. ಇದನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಆರು ತಿಂಗಳವರೆಗೆ ವಿಸ್ತರಿಸಲಾಗಿತ್ತು. ಎಸ್ಮಾ ಕಾಯ್ದೆ ಜಾರಿಯಾದ ನಂತರವು ಯಾವುದೇ ನೌಕರರು ಮುಷ್ಕರ ಅಥವಾ ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂದಲ್ಲಿ, ಕಾಯಿದೆ ಉಲ್ಲಂಘಿಸಿದ ಆರೋಪದ ಮೇಲೆ ವಾರಂಟ್ ಇಲ್ಲದೆ ಮುಷ್ಕರ ನಿರತರನ್ನು ಬಂಧಿಸುವ ಮೂಲಕ ಸರ್ಕಾರದಿಂದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

Shwetha M