ಶಾಲೆಯ ಆವರಣದಲ್ಲಿ 27 ಆನೆಗಳು ಹಾಜರ್!‌ – ಹೊಸ ಸ್ಟೂಡೆಂಟ್ಸ್‌ ಎಂಟ್ರಿಗೆ ಶಾಲೆಗೆ ರಜೆ ಘೋಷಣೆ!

ಶಾಲೆಯ ಆವರಣದಲ್ಲಿ 27 ಆನೆಗಳು ಹಾಜರ್!‌ – ಹೊಸ ಸ್ಟೂಡೆಂಟ್ಸ್‌ ಎಂಟ್ರಿಗೆ ಶಾಲೆಗೆ ರಜೆ ಘೋಷಣೆ!

ಕಾಡಾನೆಗಳು ಜನವಸತಿ ಪ್ರದೇಶಕ್ಕೆ ಬರುತ್ತಲೇ ಇವೆ. ಸರ್ಕಾರ ಎಷ್ಟು ಕ್ರಮ ಕೈಗೊಂಡ್ರು ಕೂಡ ಆನೆಗಳು ನಾಡಿಗೆ ಬಂದು ಜನರಲ್ಲಿ ಭಯ ಹುಟ್ಟಿಸುತ್ತಿದೆ. ಇದೀಗ ಶಾಲಾ ಆವರಣದಲ್ಲಿ 27 ಆನೆಗಳು ಹಾಜರ್ ಸರ್ ಅಂತಾ ಹೇಳಿದ್ದು, ಹೊಸ ಸ್ಟೂಡೆಂಟ್ಸ್ ಎಂಟ್ರಿಗೆ ಶಾಲೆಗೆ ರಜೆ ಘೋಷಿಸಲಾಗಿದೆ.

ಇದನ್ನೂ ಓದಿ: ವೇಣೂರಿನಲ್ಲಿ ಪಟಾಕಿ ಸ್ಫೋಟ ಪ್ರಕರಣ – ಗೋಡಾನ್​ನಲ್ಲಿ ತಯಾರಾಗಿದ್ದು ಗ್ರೆನೇಡ್?

ಹೌದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಪೌಂಡ್ ಮುರಿದು ವಸತಿ ಶಾಲಾ ಆವರಣಕ್ಕೆ ಆನೆಗಳ ಹಿಂಡು ಬಂದಿವೆ. ಹೀಗಾಗಿ ಚಿಕ್ಕಮಗಳೂರು ತಾಲೂಕಿನ ಕೆ.ಆರ್.ಪೇಟೆ ಗ್ರಾಮದ ಆ್ಯಂಬರ್ ವ್ಯಾಲಿ ವಸತಿ ಶಾಲೆಗೆ ರಜೆ ಘೋಷಿಸಲಾಗಿದೆ. ಜೊತೆಗೆ ವಸತಿ ಶಾಲೆಯಿಂದ ಹೊರ ಬರದಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮುಗ್ತಿಹಳ್ಳಿ ಬಳಿಯ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ವಸತಿ ಶಾಲೆಗೆ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಚಿಕ್ಕಮಗಳೂರು ತಾಲೂಕಿನ ಮುಗ್ತಿಹಳ್ಳಿ ಬಳಿ 25 ಎಕರೆಗೂ ಹೆಚ್ಚು ಪ್ರದೇಶದಲ್ಲಿರುವ ಆ್ಯಂಬರ್ ವ್ಯಾಲಿ ವಸತಿ ಶಾಲೆ ಆವರಣದಲ್ಲಿ 25 ಕಾಡಾನೆಗಳ ತಂಡ ಬೀಡುಬಿಟ್ಟಿದೆ. ಕಾಡಾನೆ ಹಿಂಡು ಕಾಂಪೌಂಡ್ ಮುರಿದು ವಸತಿ ಶಾಲಾ ಆವರಣಕ್ಕೆ ‌ಬಂದಿವೆ. ಹೀಗಾಗಿ ವಸತಿ ಶಾಲೆಯೊಳಗಿರುವ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಗೆ ವಸತಿ ಶಾಲೆಯಿಂದ ಹೊರ ಬರದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.

ಬೇಲೂರು ಮಾರ್ಗವಾಗಿ ಚಿಕ್ಕಮಗಳೂರಿಗೆ ಬಂದಿರುವ 30ಕ್ಕೂ ಅಧಿಕ ಕಾಡಾನೆಗಳು. 8ಕ್ಕೂ ಅಧಿಕ‌ ಕಾಡಾನೆಗಳು ಬೀಟಮ್ಮ ಗ್ಯಾಂಗ್ ನಿಂದ ಬೇರ್ಪಟ್ಟಿವೆ. ಹಂತಕ ಸಲಗ ಭೀಮ ಕೂಡ ಬೀಟಮ್ಮ ಗ್ಯಾಂಗ್​ನಲ್ಲಿದ್ದಾನೆ. ಎರಡು ದಿನದಿಂದ ಚಿಕ್ಕಮಗಳೂರು ಹೊರ ವಲಯದ ಗ್ರಾಮದಲ್ಲಿ ಕಾಡಾನೆಗಳು ಸಂಚಾರ ಮಾಡುತ್ತಿವೆ.

ಈ ಹಿಂದೆ ಹಲವರ ಸಾವಿಗೆ ಕಾರಣವಾಗಿರುವ ಭೀಮ ಎಂಬ ಪುಂಡನೆ ಕೂಡ ಈ 30 ಆನೆಗಳ ಗ್ಯಾಂಗ್ ಸೇರಿದ್ದು ಇನ್ನಷ್ಟು ಭೀತಿ ಹೆಚ್ಚಿಸಿದೆ. ಚಿಕ್ಕಮಗಳೂರು ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಇಷ್ಟು ದಿನ ಹಾಸನ ಜಿಲ್ಲೆಯ ಬೇಲೂರು-ಸಕಲೇಶಪುರ ಭಾಗದಲ್ಲಿ ಬೀಡುಬಿಟ್ಟಿದ್ದ ಈ ಕಾಡಾನೆಗಳ ಹಿಂಡು ಇದೀಗ ಚಿಕ್ಕಮಗಳೂರು ಜಿಲ್ಲೆಗೆ ಹಿಂಡು-ಹಿಂಡಾಗಿ ಬಂದಿರುವುದು ಕಾಫಿ ಹಾಗೂ ಅಡಿಕೆ ಬೆಳೆಗಾರರಲ್ಲಿ ಇನ್ನಿಲ್ಲದ ಆತಂಕ ತಂದಿದೆ. 30 ಆನೆಗಳ ತಂಡ ಬಂದಿರುವುದರಿಂದ ಅರಣ್ಯ ಇಲಾಖೆ ಕೂಡ ಹೈ ಅಲರ್ಟ್ ಘೋಷಿಸಿದೆ.

Shwetha M