12 ಕಿಲೋಮೀಟರ್ ಯುವಕನನ್ನು ಎಳೆದೊಯ್ದ ಕಾರು – ರಸ್ತೆಯಲ್ಲೇ ಜೀವಬಿಟ್ಟ ಅಮಾಯಕ
![12 ಕಿಲೋಮೀಟರ್ ಯುವಕನನ್ನು ಎಳೆದೊಯ್ದ ಕಾರು – ರಸ್ತೆಯಲ್ಲೇ ಜೀವಬಿಟ್ಟ ಅಮಾಯಕ](https://suddiyaana.com/wp-content/uploads/2023/01/car-accident.jpg)
ಸೂರತ್ : ಹೊಸವರ್ಷಾಚರಣೆ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ಹಿಟ್ ಆಂಡ್ ರನ್ ಕೇಸ್ ಬೆಚ್ಚಿಬೀಳಿಸಿತ್ತು. ಇದರ ಬೆನ್ನಲ್ಲೇ ಸೂರತ್ನಲ್ಲೂ ಇದೇ ಮಾದರಿಯ ಪ್ರಕರಣವೊಂದು ನಡೆದಿದೆ. ಇಲ್ಲೂ ಕೂಡಾ Hit And Run ಪ್ರಕರಣದಲ್ಲಿ ಯುವಕನೊಬ್ಬ ಬಲಿಯಾಗಿದ್ದಾನೆ. ಜನವರಿ 18ರಂದು ಈ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯ ವೀಡಿಯೋವನ್ನು ವಾಹನದ ಹಿಂದೆಯೇ ಚಲಿಸುತ್ತಿದ್ದ ಇನ್ನೊಬ್ಬ ವ್ಯಕ್ತಿ ಚಿತ್ರೀಕರಿಸಿದ್ದು, ಸೂರತ್ ಪೊಲೀಸರಿಗೆ ವೀಡಿಯೋವನ್ನು ಹಸ್ತಾಂತರಿಸಿದ್ದಾನೆ.
ಇದನ್ನೂ ಓದಿ: ಕುರ್ಚಿ ತರಲು ಲೇಟ್ ಆಗಿದ್ದಕ್ಕೆ ರೊಚ್ಚಿಗೆದ್ದ ಸಚಿವ – ಕಾರ್ಯಕರ್ತರ ಮೇಲೆ ಕಲ್ಲೆಸೆದು ದರ್ಪ!
ಜನವರಿ 18ರಂದು ಸಾಗರ್ ಪಾಟೀಲ್ ಎಂಬ 24 ವರ್ಷದ ಯುವಕ ಬೈಕ್ನಲ್ಲಿ ಕಡೋದರಾ-ಬಾರ್ಡೋಲಿ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಕಾರು ಡಿಕ್ಕಿಹೊಡೆದಿದೆ. ಚಾಲಕ ಕಾರು ನಿಲ್ಲಿಸದೇ ದ್ವಿಚಕ್ರವಾಹನ ಸವಾರನನ್ನು 12 ಕಿಲೋಮೀಟರ್ ಎಳೆದುಕೊಂಡು ಹೋಗಿದ್ದಾನೆ. ಕಾಮ್ರೇಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪಘಾತದ ಸ್ಥಳದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಸೂರತ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಹಿತೇಶ್ ಜೋಯ್ಸರ್ ತಿಳಿಸಿದ್ದಾರೆ. ನಾಗರಿಕರೊಬ್ಬರು ಈ ದೃಶ್ಯವನ್ನು ವೀಡಿಯೋ ಮಾಡಿ ಕ್ಲಿಪ್ ಅನ್ನು ಕಳುಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ವೀಡಿಯೋ ಸಹಾಯದಿಂದ ಕಾರಿನ ವಿವರ ಮತ್ತು ಅಪರಾಧವನ್ನು ಪತ್ತೆಹಚ್ಚಲು ಸಹಾಯವಾಯ್ತು ಅಂತಾ ಪೊಲೀಸ್ ಅಧಿಕಾರಿ ಹೇಳಿದ್ದಾರೆ.