ಯಂಗ್ ಕ್ರಿಕೆಟರ್ಸ್‌ಗೆ ಕ್ಯಾಪ್ಟನ್ ಪ್ರೋತ್ಸಾಹ – ಯುವ ಪಡೆ ಜೊತೆ ಗೆಲುವಿನ ಕೇಕೆ ಹಾಕಿದ ರೋಹಿತ್ ಶರ್ಮಾ

ಯಂಗ್ ಕ್ರಿಕೆಟರ್ಸ್‌ಗೆ ಕ್ಯಾಪ್ಟನ್ ಪ್ರೋತ್ಸಾಹ – ಯುವ ಪಡೆ ಜೊತೆ ಗೆಲುವಿನ ಕೇಕೆ ಹಾಕಿದ ರೋಹಿತ್ ಶರ್ಮಾ

ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಬಗ್ಗೆ ಒಂದಷ್ಟು ಹೇಳಲೇಬೇಕು. ವಿರಾಟ್ ಕೊಹ್ಲಿ, ಕೆಎಲ್.ರಾಹುಲ್. ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಇಂಥಾ ಪ್ಲೇಯರ್ಸ್​ಗಳು ಆಡಿದಿದ್ರೂ, 4ನೇ ಟೆಸ್ಟ್​ನಲ್ಲಿ ಮಾತ್ರ ಬುಮ್ರಾ ಆಡಿರಲಿಲ್ಲ. ಆದ್ರೂ ಟೀಮ್​​ನಲ್ಲಿ​ ಯಂಗ್​ಸ್ಟರ್ಸ್​​ಗಳೇ ಮ್ಯಾಕ್ಸಿಮಮ್​ ಇದ್ದಾರೆ. ಕೆಲವರ ಪಾಲಿಗಂತೂ ಇದು ಡೆಬ್ಯೂ ಸೀರಿಸ್ ಬೇರೆ. ಆದ್ರೂ ಯಂಗ್​ ಪ್ಲೇಯರ್ಸ್​ಗಳನ್ನ ಕಟ್ಟಿಕೊಂಡು ಟೀಂ ಇಂಡಿಯಾ ಮ್ಯಾಚ್​ಗಳನ್ನ ಗೆದ್ದಿದೆ ಅಂದರೆ ಕ್ಯಾಪ್ಟನ್ ರೋಹಿತ್​ಗೂ ದೊಡ್ಡ ಮಟ್ಟದಲ್ಲಿ ಕ್ರೆಡಿಟ್ ಸಿಗಲೇಬೇಕು.

ಇದನ್ನೂ ಓದಿ: ಇಂಗ್ಲೆಂಡ್ ಮೋಸದಾಟ ಕಂಟಿನ್ಯೂ! – ಕುಲ್ ದೀಪ್ ಬ್ಲಾಕ್..RO ಶಾಕ್?

ಯಂಗ್​ಸ್ಟರ್ಸ್​ಗಳಿಗೆ ರೋಹಿತ್​ ನೀಡ್ತಾ ಇರೋ ಪ್ರೋತ್ಸಾಹವೇ ಟೀಮ್ ಇಂಡಿಯಾ ಗೆಲುವಿಗೆ ಕಾರಣ. ಹಾಗೆಯೇ ಎಲ್ಲರಿಗೂ ಫ್ರೀಡಂ ಕೊಡ್ತಾರೆ. ಎಷ್ಟರ ಮಟ್ಟಿಗೆ ಅಂದ್ರೆ ಕುಲ್​ದೀಪ್​ ಯಾದವ್ ಅಂತಾ ಸೆಕೆಂಡ್ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್​​ಗೆ ಬೌಲಿಂಗ್ ಮಾಡೋವಾಗ 29ನೇ ಓವರ್ ವೇಳೆ ರೋಹಿತ್ ಶರ್ಮಾ ಮತ್ತು ಕುಲ್​ದೀಪ್ ಮಧ್ಯೆ ಗಂಭೀರ ಚರ್ಚೆ ನಡೆಯುತ್ತೆ. ಈ ವೇಳೆ ಬೌಂಡರಿ ಲೈನ್ ಬಳಿ ಇದ್ದ ಫೀಲ್ಡರ್ಸ್​ಗಳನ್ನ ರಿಮೂವ್ ಮಾಡಿ 30 ಯಾರ್ಡ್ ಸರ್ಕಲ್ ಒಳಗೆ ತರೋಕೆ ರೋಹಿತ್ ಶರ್ಮಾ ಮುಂದಾಗ್ತಾರೆ. ಆದ್ರೆ ಕ್ಯಾಪ್ಟನ್ ಪ್ಲ್ಯಾನ್​ಗೆ ಕುಲ್​ದೀಪ್ ಯಾದವ್ ಒಪ್ಪೋದೆ ಇಲ್ಲ. ಫೀಲ್ಡರ್ಸ್​​ಗಳು ಬೌಂಡರಿ ಲೈನ್ ಬಳಿಯೇ ಇರಲಿ ಅಂತಾ ಫೋರ್ಸ್​ ಮಾಡ್ತಾರೆ. ಕೊನೆಗೆ ಕುಲ್​​ದೀಪ್​ ಮಾತನ್ನ ರೋಹಿತ್ ಒಪ್ಪಿಕೊಳ್ತಾರೆ. ಕುಲ್​​ದೀಪ್​​ಗೆ ಬೇಕಾದಂತೆ ಫೀಲ್ಟರ್ಸ್​ಗಳನ್ನ ನಿಲ್ಲಿಸ್ತಾರೆ. ಈ ಕಾನ್ವರ್ಸೇಷನ್ ಆದ NEXT ಬಾಲ್ ಕುಲ್​ದೀಪ್ ಬೌಲಿಂಗ್​ನಲ್ಲಿ ಜ್ಯಾಕ್ ಕ್ರೌಲಿ ಕ್ಲೀನ್ ಬೌಲ್ಡ್ ಆಗ್ತಾರೆ. ಅಂದ್ರೆ ಇಲ್ಲಿ ಫೀಲ್ಡರ್ಸ್​​ಗಳನ್ನ ಬೌಂಡರಿ ಲೈನ್ ಬಳಿ ನಿಲ್ಲಿಸಿ ಜ್ಯಾಕ್ ಕ್ರೌಲಿ ಡಿಫೆನ್ಸ್ ಆಡದೆ ಸ್ಕೋರ್ ಗಳಿಸುವಂತೆ ಆಡಲಿ ಅಂತಾ ಪುಶ್ ಮಾಡಿದ್ರು. ಕುಲ್​ದೀಪ್ ಬಾಲ್​ಗೆ ಗ್ಯಾಪ್​​ನಲ್ಲಿ ಹೊಡಿಯೋಕೆ ಬ್ಯಾಕ್​​ಫುಟ್ ಬಂದು ಆಡೋಕೆ ಹೋಗಿ ಜ್ಯಾಕ್​ಕ್ರೌಲಿ ಬೌಲ್ಡ್ ಆಗಿದ್ರು. ಹೀಗೆ ರೋಹಿತ್​ ಬೌಲರ್ಸ್​ಗಳ ಒಪೀನಿಯನ್​​ಗೆ ರೆಸ್ಪೆಕ್ಟ್ ಕೊಡೋದ್ರಿಂದಲೇ ಪ್ಲ್ಯಾನ್ ಸಕ್ಸಸ್​​ಫುಲ್ ಆಗಿ ಎಕ್ಸಿಕ್ಯೂಟ್ ಆಗ್ತಿದೆ.

ಈ ನಡುವೆ ಜೇಮ್ಸ್ ಆಂಡರ್ಸನ್ ಬಾಲ್​ನಲ್ಲಿ ಒಂದು ಸಿಂಗಲ್​ ತೆಗೆಯುತ್ತಲೇ ಆ್ಯಂಡರ್ಸನ್ ರೋಹಿತ್​ರನ್ನ ಕೆಣಕೋಕೆ ನೋಡ್ತಾರೆ. ಏನೋ ಹೇಳಿ ಸ್ಲೆಡ್ಜ್ ಮಾಡ್ತಾರೆ. ಇತ್ತ ರೋಹಿತ್ ಏನು ಸುಮ್ನಿರೋದಿಲ್ಲ. ಆ್ಯಂಡರ್ಸನ್ ಸ್ಟೈಲ್​ನಲ್ಲೇ ರಿಪ್ಲೈ ಮಾಡ್ತಾರೆ. ಆಮೇಲೆ ಇಂಗ್ಲೆಂಡ್ ಬೌಲರ್ ಕೂಡ ಸುಮ್ನಾಗಿ ಬಿಡ್ತಾರೆ. ಹಾಗೆಯೇ ಸಿಲ್ಲಿ ಪಾಯಿಂಟ್​ನಲ್ಲಿ ಸರ್ಫರಾಜ್​ ಖಾನ್ ಫೀಲ್ಡಿಂಗ್ ಮಾಡೋಕೆ ಮುಂದಾದಾಗ ಹೆಲ್ಮೆಟ್ ಹಾಕಿರಲಿಲ್ಲ. ನಿಮಗೆ ಗೊತ್ತಿರೋ ಹಾಗೆ ಸಿಲ್ಲಿ ಪಾಯಿಂಟ್​​ ಅತ್ಯಂತ ಡೇಂಜರಸ್ ಫೀಲ್ಡಿಂಗ್ ಪೊಸೀಶನ್. ಎಲ್ಲರೂ ಹೆಲ್ಮೆಟ್ ಹಾಕ್ಕೊಂಡೇ ಫೀಲ್ಡಿಂಗ್​ಗೆ ನಿಲ್ಲೋದು. ಆದ್ರೆ ಸರ್ಫರಾಜ್ ಹೆಲ್ಮೆಟ್ ಹಾಕದೆ ಸಿಲ್ಲಿ ಪಾಯಿಂಟ್​ನಲ್ಲಿ ಫೀಲ್ಡಿಂಗ್​​ಗೆ ನಿಲ್ತಾರೆ. ಈ ವೇಳೆ ರೋಹಿತ್ ಶರ್ಮಾ, ಹೇ ಭಾಯ್..ಹೀರೋ ನಹೀ ಬನ್​ನೇಕಾ..ಅಂದ್ರೆ ಅಣ್ಣಾ ಇಲ್ಲಿ ಹೀರೋ ಆಗೋಕೆ ನೋಡ್ಬೇಡಾ, ಹೀರೋಯಿಸಂ ತೋರಿಸ್ಬೇಡಾ..ಮೊದಲು ಹೆಲ್ಮೆಟ್ ಹಾಕು ಅಂತಾರೆ. ಅತ್ತ ಕಾಮಂಟ್ರೇಟರ್ಸ್​ ಕೂಡ ನಗ್ತಾರೆ. ರೋಹಿತ್ ಶರ್ಮಾ ಸ್ಟೈಲ್ ಆಫ್ ಕಾಮೆಂಟ್ ಅಂತಾ.

ಇನ್ನು ಕಾಮೆಂಟ್ರೇಟರ್ ರವಿಶಾಸ್ತ್ರಿ ಅಂತೂ ಇಂಗ್ಲೆಂಡ್ ಕ್ಯಾಪ್ಟನ್ ಬೆನ್​ ಸ್ಟೋಕ್ಸ್​ಗೆ ಚೆನ್ನಾಗಿಯೇ ಟಾಂಗ್ ಕೊಟ್ಟಿದ್ದಾರೆ. ಪಿಚ್ ಬಗ್ಗೆ ಉದ್ದುದ್ದ ಮಾತನಾಡಿದವರ ಬ್ಯಾಟ್​​ನಿಂದ ರನ್ನೇ ಬಂದಿಲ್ಲ ಅಂತಾ ರವಿಶಾಸ್ತ್ರಿ ಹೇಳಿದ್ದಾರೆ. ನಾಲ್ಕನೇ ಟೆಸ್ಟ್​ಗೂ ಮುನ್ನ ರಾಂಚಿ ಪಿಚ್​ನ್ನ ನೋಡಿ ಬೆನ್​ಸ್ಟೋಕ್ಸ್, ಇಂಥಾ ಪಿಚ್​​ನ್ನ ನಾನು ನೋಡಿಯೇ ಇಲ್ಲ. ಇದು ಯಾವ ರೀತಿಯ ಪಿಚ್ ಅನ್ನೋದೆ ಅರ್ಥವಾಗ್ತಿಲ್ಲ ಅಂತೆಲ್ಲಾ ಸ್ಟೇಟ್​ಮೆಂಟ್ ಕೊಟ್ಟಿದ್ರು. ಆದ್ರೆ ಫಸ್ಟ್​ ಇನ್ನಿಂಗ್ಸ್​ನಲ್ಲಿ ಮೂರು ರನ್​ಗೆ ಔಟಾಗಿದ್ರು. ಸೆಕೆಂಡ್​ ಇನ್ನಿಂಗ್ಸ್​ನಲ್ಲಿ 17 ರನ್​ಗೆ ವಿಕೆಟ್ ಒಪ್ಪಿಸಿದ್ರು. ಬೆನ್​​ಸ್ಟೋಕ್ಸ್​​ಗೆ ರಾಂಚಿ ಪಿಚ್ ಮಾತ್ರವಲ್ಲ ಇಡೀ ಸೀರಿಸ್​​ನಲ್ಲಿ ಹೇಗೆ ಆಡಬೇಕು ಅನ್ನೋದೆ ಗೊತ್ತಾಗ್ತಾ ಇಲ್ಲ. ಬಟ್ ಬ್ಯಾಸ್​​ಬಾಲ್ ಆಟ ಮಾತ್ರ ಇಲ್ಲಿ ನಡೆಯೋದಿಲ್ಲ ಅನ್ನೋದಂತೂ ಅರ್ಥವಾಗಿರುವಂತೆ ಕಾಣ್ತಿದೆ. ಎನಿವೇ..ಸೀರಿಸ್​​ನಲ್ಲಿ ಇನ್ನೊಂದೇ ಮ್ಯಾಚ್ ಬಾಕಿ ಉಳಿದಿರೋದು. ಧರ್ಮಶಾಲಾದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಟೆಸ್ಟ್ ನಡೆಯುತ್ತೆ. ಧರ್ಮಶಾಲಾದಲ್ಲಿ ನಡೆಯೋದ್ರಿಂದ ನೋಡೋಕೆ ಚೆನ್ನಾಗಿರುತ್ತೆ. ಈ ಟೆಸ್ಟ್​ನಲ್ಲಿ ನಮ್ಮ ದೇವದತ್ ಪಡಿಕ್ಕಲ್​ಗೆ ಚಾನ್ಸ್ ಸಿಗಬಹುದೋ ಏನೊ?.

 

Sulekha