ಖಾಸಗಿ ಬಸ್ ಪ್ರಯಾಣಿಕರಿಗೆ ಬಂಪರ್ ಆಫರ್! – ಈ ಬಸ್ನಲ್ಲಿ ಪ್ರಯಾಣಿಸಿದ್ರೆ ಟಿಕೆಟ್ ದರ ಕೇವಲ 1 ರೂಪಾಯಿ!
ಬೆಂಗಳೂರು: ದೇಶದಾದ್ಯಂತ ನವರಾತ್ರಿ ಹಬ್ಬ ಆರಂಭವಾಗಿದೆ. ನವರಾತ್ರಿ ಹಬ್ಬದ ಹಿನ್ನೆಲೆ ಕಂಪನಿಗಳಿಗೆ, ಶಾಲಾ ಕಾಲೇಜುಗಳಿಗೆ ರಜೆ ಇದೆ. ಹೀಗಾಗಿ ಪ್ರವಾಸಿ ತಾಣಗಳಿಗೆ ಹೋಗಬೇಕು ಅಂತಾ ಅನೇಕರು ಪ್ಲಾನ್ ಮಾಡಿದ್ದಾರೆ. ಆದರೆ ಪ್ರಯಾಣಿಸಲು ಸರ್ಕಾರಿ ಬಸ್ಗಳಲ್ಲಿ ಸೀಟ್ ಸಿಗಲ್ಲ. ಇನ್ನೂ ಖಾಸಗಿ ಬಸ್ಗಳಲ್ಲಿ ಪ್ರಯಾಣಿಸೋವೆಂದರೆ ಟಿಕೆಟ್ ದುಬಾರಿ. ಈ ಹಿನ್ನೆಲೆ ಪ್ರವಾಸಕ್ಕೆ ಹೋಗಲು ಹಿಂದೇಟು ಹಾಕುತ್ತಾರೆ. ಆದ್ರೆ ಇಲ್ಲೊಂದು ಖಾಸಗಿ ಬಸ್ ಪ್ರಯಾಣಿಕರಿಗೆ ಬಂಪರ್ ಆಫರ್ ಒಂದನ್ನು ಘೋಷಣೆ ಮಾಡಿದೆ. ಈ ಬಸ್ನಲ್ಲಿ ಪ್ರಯಾಣಿಸುವವರಿಗೆ ಬಸ್ಟಿಕೆಟ್ ದರ ಕೇವಲ 1 ರೂಪಾಯಿ.
ಸಾಮಾನ್ಯವಾಗಿ ಹಬ್ಬ ಹರಿದಿನಗಳು ಬಂತಂದ್ರೆ ಖಾಸಗಿ ಸಾರಿಗೆ ಸಂಸ್ಥೆಗಳು ಸಿಕ್ಕಿದ್ದೇ ಚಾನ್ಸ್ ಅಂತಾ ಹಗಲು ದರೋಡೆಗಿಳಿಯುತ್ತವೆ. 500 ರೂಪಾಯಿ ಟಿಕೆಟ್ ದರ ಇದ್ರೆ 1,000 ರೂಪಾಯಿ ಚಾರ್ಜ್ ಮಾಡುತ್ತವೆ. ಆದರೆ ಇದೇ ವೇಳೆ ಪ್ರಯಾಣಿಕರಿಗೆ ಖಾಸಗಿ ಸಂಸ್ಥೆಯೊಂದು ಭರ್ಜರಿ ಆಫರ್ ನೀಡಿದೆ. ಖಾಸಗಿ ಸಂಸ್ಥೆ Abhi Bus ಕೇವಲ 1 ರೂ.ಗೆ ಬಸ್ ಟಿಕೆಟ್ ಬುಕ್ಕಿಂಗ್ಗೆ ಅವಕಾಶ ನೀಡಿದೆ. ಈ ಆಫರ್ ಕೇವಲ ಎಂಟು ದಿನ ಮಾತ್ರ. ಈ ವೇಳೆ ಪ್ರಯಾಣಿಕರು ಈ ಬಸ್ನಲ್ಲಿ ಒಂದು ರೂಪಾಯಿ ಪಾವತಿ ಪ್ರಯಾಣಿಸಬಹುದು ಎಂದು ವರದಿಯಾಗಿದೆ.
ಇದನ್ನೂ ಓದಿ: ಐದು ವರ್ಷಗಳ ಬಳಿಕ ನಡೆಯಲಿದೆ ಮೈಸೂರು ದಸರಾ ಏರ್ ಶೋ – ಈ ಸಮಯಕ್ಕೆ ಬಂದವರಿಗೆ ಉಚಿತ ಪ್ರವೇಶ!
ಅಂದ ಹಾಗೆ ಈ ಆಫರ್ನ ನಿಮಗೆ ಸಿಗಬೇಕೆಂದರೆ ಬಸ್ ಬುಕಿಂಗ್ ಅಪ್ಲಿಕೇಶನ್ AbhiBus ಅಕ್ಟೋಬರ್ 19 ರಿಂದ ಅಕ್ಟೋಬರ್ 25ರ ವರೆಗಿನ ನಡುವಿನ ಪ್ರಯಾಣಕ್ಕೆ ಮಾತ್ರ ಈ ಆಫರ್ ನೀಡಿದೆ. ಈ ಆಫರ್ ಪಡೆಯಲು ಪ್ರಯಾಣಿಕರು “LUCKY1” ರಿಯಾಯಿತಿ ಕೋಡ್ಅನ್ನು ಬಳಸಬೇಕು ಎಂದು ಹೇಳಿದೆ. ಮತ್ತೆ ದೀಪಾವಳಿಯಲ್ಲಿ ಈ ಆಫರ್ ನೀಡಲಿದೆ.
ಹೊಸದಾಗಿ 30 ವಿಶೇಷ ರೈಲುಗಳನ್ನು ಬಿಟ್ಟ ಇಲಾಖೆ
ಅಕ್ಟೋಬರ್ 15 ರಂದಿ ದಸರಾ ರಜಾದಿನ ಆರಂಭವಾಗಿದೆ. ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನವರಾತ್ರಿ ಅಥವಾ ದಸರಾ, ದೀಪಾವಳಿ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ಹಬ್ಬಗಳನ್ನು ಆಚರಿಸಲು ಹೆಚ್ಚಿನ ಸಂಖ್ಯೆ ಜನರು ತಮ್ಮ ಊರುಗಳಿಗೆ ಹೋಗುತ್ತಾರೆ. ಈ ವೇಳೆ ರೈಲು ಟಿಕೆಟ್ ಖರೀದಿಸುವುದು ತುಂಬಾ ಕಷ್ಟಕರವಾಗುತ್ತಿದೆ. ಮತ್ತು ರೈಲುಗಳು ರಶ್ ಆಗಿರುತ್ತವೆ.
ಹಬ್ಬದ ಸಮಯದಲ್ಲಿ ಅಧಿಕ ಸಂಖ್ಯೆ ಪ್ರಯಾಣಿಕರು ಪ್ರಯಾಣಿಸುವುದರಿಂದ ಸೆಂಟ್ರಲ್ ರೈಲ್ವೆ ಇಲಾಖೆ 30 ವಿಶೇಷ ರೈಲುಗಳನ್ನು ಬಿಟ್ಟಿದೆ. ರೈಲುಗಳು ಸಿಎಸ್ಎಮ್ಟಿ – ನಾಗ್ಪುರ ದ್ವಿ-ವಾರದ ಸೂಪರ್ಫಾಸ್ಟ್ ವಿಶೇಷ (20) ಮತ್ತು ನಾಗ್ಪುರ-ಪುಣೆ ಸಾಪ್ತಾಹಿಕ ಸೂಪರ್ಫಾಸ್ಟ್ ವಿಶೇಷ (10) ರೈಲುಗಳು ಕಾರ್ಯನಿರ್ವಹಿಸಲಿವೆ.