ಮುಂಡಾ ಮೋಚ್ತು.. ಎನ್ನುತ್ತಲೇ ಬಿಗ್‌ ಬಾಸ್‌ ಮನೆಗೆ ಎಂಟ್ರಿಕೊಟ್ಟ ಬ್ರಹ್ಮಾಂಡ ಗುರೂಜಿ!

ಮುಂಡಾ ಮೋಚ್ತು.. ಎನ್ನುತ್ತಲೇ ಬಿಗ್‌ ಬಾಸ್‌ ಮನೆಗೆ ಎಂಟ್ರಿಕೊಟ್ಟ ಬ್ರಹ್ಮಾಂಡ ಗುರೂಜಿ!

ಬಿಗ್‌ಬಾಸ್‌ ರಿಯಾಲಿಟಿ ಶೋ ದಿನದಿಂದ ದಿನಕ್ಕೆ ರಂಗೇರಿತ್ತಿದೆ. ಮನೆಯ ಸದಸ್ಯರಿಗೆ ಬಿಗ್‌ ಬಾಸ್‌ ಒಂದಲ್ಲ ಒಂದು ಸರ್ಪ್ರೈಸ್ ನೀಡುತ್ತಲೇ ಇದೆ. ಕಳೆದ ವೀಕೆಂಡ್‌ನಲ್ಲಿ ಡಬಲ್ ಎಲಿಮಿನೇಷನ್, ಫೇಕ್ ಮತ್ತು ಜೆನ್ಯೂನ್‌ಗಳ ಚರ್ಚೆ ನಡೆದು ಸ್ಪರ್ಧಿಗಳ ಮೂಡ್ ಬದಲಾಗಿದೆ. ಹೀಗಾಗಿ ಸೋಮವಾರ ಸ್ಪರ್ಧಿಗಳ ಮೂಡ್‌ ಕೂಲ್ ಮಾಡಲು ಬಿಗ್ ಬಾಸ್ ಬಿಗ್ ಸರ್ಪ್ರೈಸ್ ಕೊಟ್ಟಿದೆ.

ಹೌದು, ಕಳೆದ ವೀಕೆಂಡ್‌ನಲ್ಲಿ ಇಬ್ಬರು ಸ್ಪರ್ಧಿಗಳು ದೊಡ್ಮನೆಯಿಂದ ಹೊರ ಹೋಗಿದ್ದರು. ಇಶಾನಿ, ಭಾಗ್ಯಶ್ರೀ ಎಲಿಮಿನೇಟ್‌ ಆಗಿದ್ದರು. ಡಬಲ್ ಎಲಿಮಿನೇಷನ್ ಬಳಿಕ ಬೇಸರದಲ್ಲಿರುವ ಮನೆ ಮಂದಿಯಲ್ಲಿ ಉತ್ಸಾಹ ತುಂಬಲು ಬ್ರಹ್ಮಾಂಡ ಗುರೂಜಿ ಎಂಟ್ರಿ ಕೊಟ್ಟಿದ್ದಾರೆ. ಎಂದಿನಂತೆ ತಮ್ಮ ಟಿಪಿಕಲ್‌ ಮಾತಿನ ಧಾಟಿಯ ಮೂಲಕವೇ ಗಮನ ಸೆಳೆದಿರುವ ಬ್ರಹ್ಮಾಂಡ ಗುರೂಜಿ, ಇದೀಗ 10ನೇ ಸೀಸನ್‌ಗೆ ಖಡಕ್ಕಾಗಿ ಎಂಟ್ರಿಯನ್ನು ಕೊಟ್ಟಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್‌ ಸ್ಪರ್ಧಿ ನಟಿ ತನಿಷಾ ಕುಪ್ಪಂಡ ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪ – ಒರಿಜಿನಲ್ ವಿಡಿಯೋ ಕೇಳಿದ ಪೊಲೀಸರು

ಬಿಗ್​ಬಾಸ್ ಮನೆ ಮುಖ್ಯ ದ್ವಾರದ ಮೂಲಕ​​ ಬ್ರಹ್ಮಾಂಡ ಗುರೂಜಿ ಅವರು ಆಗಮನವಾಗಿದೆ. ಅವರನ್ನು ನೋಡಿದ ಮನೆ ಮಂದಿ, ಓಹ್…‌ ಓಹೋ ಎಂದು ಕೂಗಿ ಅವರನ್ನು ಸ್ವಾಗತಿಸಿದ್ದಾರೆ. ಹಲೋ ಬಂದಿದಿನಿ ಶುರು ಹಚ್ಕೋಳಿ.. ಎಂಬ ಡೈಲಾಗ್‌ ಮೂಲಕ ಕನ್‌ಫೆಷನ್‌ ರೂಮ್‌ನಲ್ಲೂ ಬ್ರಹ್ಮಾಂಡ ಗುರೂಜಿ ಕಾಣಿಸಿಕೊಂಡಿದ್ದಾರೆ. ಇತ್ತ ಅವ್ರು ಬಯ್ಯೋಕೆ ಶುರು ಮಾಡಿದ್ರೆ ಅದರ ಮಜಾನೇ ಬೇರೆ ಎಂದು ವಿನಯ್‌ ಗೌಡ ಅವರ ಹಾಸ್ಯದ ಬಗ್ಗೆ ಮಾತನಾಡಿದ್ದಾರೆ. ಮುಂಡಾ ಮೋಚ್ತು, ಹಾಳಾಗೋಗ್ಲಿ, ಪುಟಗೋಸಿ, ಪಿಂಡ ಎಂಬೆಲ್ಲ ಮಾತುಗಳು ಗುರೂಜಿ ಬಾಯಿಂದ ಹೊರಬಂದಿವೆ. ಮನೆ ಮಂದಿಯೂ ನಗೆಗಡಲಲ್ಲಿ ತೇಲಿದ್ದಾರೆ. ಮನೆಯಲ್ಲಿನ ಕ್ಯಾಮರಾಗಳು ಎಲ್ಲೆಲ್ಲಿವೆ ಎಂದು ಹುಡುಕಾಡಿ ಅವುಗಳ ಜತೆ ಮಾತನಾಡಲು ಆರಂಭಿಸಿದ್ದಾರೆ ಬ್ರಹ್ಮಾಂಡ ಗುರೂಜಿ. ಎಲ್ಲರನ್ನೂ ಒಂದು ಕಡೆ ಸ್ಟ್ಯಾಚು ಅಂತ ಹೇಳಿ ನಿಲ್ಲಿಸಿ, ನನಗೆ ಓಡಾಡೋಕೆ ಆಗಲ್ಲ. ಇಲ್ಲಾಂದ್ರೆ ಮನೆ ಬಿಟ್ಟು ಹೋಗ್ತಿನಿ ಎಂದು ಹೇಳಿದ್ದಾರೆ. ಈ ವಾರ ಬ್ರಹ್ಮಾಂಡ ಗುರೂಜಿ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿರುವುದು ಎಲ್ಲರಿಗೂ ಅಚ್ಚರಿ ಆಗಿದೆ. ಬ್ರಹ್ಮಾಂಡ ಗುರೂಜಿ ಯಾಕೆ ಬಂದಿರಬಹುದು? ಇವರು ಸ್ಪರ್ಧಿನಾ? ಎಂದು ಬಿಗ್​ಬಾಸ್​ ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.

ನರೇಂದ್ರ ಬಾಬು ಶರ್ಮಾ ನೋಡಿದ ಮನೆಯ ಸದಸ್ಯರು ಯಾಕೆ ಬಂದ್ರಪ್ಪ ಎಂದು ತಮ್ಮೊಳಗೆ ಪ್ರಶ್ನೆಯನ್ನ ಮಾಡಿಕೊಳ್ಳುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ತನಿಷಾ ಬಿಗ್ ಬಾಸ್‌ಗೆ ಗುರೂಜಿ ಯಾಕೆ ಬಂದಿದ್ದಾರೆ ಎಂಬ ಪ್ರಶ್ನೆಸಹ ಕೇಳಿದ್ದಾರೆ. ಸದ್ಯಕ್ಕೆ ಬಿಗ್ ಬಾಸ್ ಮನೆಯ ಸದಸ್ಯರು ನಗೆ ಕಡಲಲ್ಲಿ ತೇಲುವಂತೆ ನರೇಂದ್ರ ಬಾಬು ಶರ್ಮಾ ಮಾಡುತ್ತಿದ್ದಾರೆ. ಈ ಕುರಿತಾದ ಪ್ರೋ ಮೊವನ್ನು ಖಾಸಗಿ ವಾಹಿನಿ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಬಿಗ್‌ಬಾಸ್‌ನ ಮೊದಲ ಸೀಸನ್‌ನ ಸ್ಪರ್ಧಿಗಳ ಪೈಕಿ ಬ್ರಹ್ಮಾಂಡ ಗುರೂಜಿ ಸಹ ಭಾಗವಹಿಸಿದ್ದರು. ವಿಜಯ್ ರಾಘವೇಂದ್ರ ವಿಜೇತರಾದರೆ, ಅರುಣ್‌ ಸಾಗರ್‌ ರನ್ನರ್‌ ಅಪ್‌ ಸ್ಥಾನ ಪಡೆದಿದ್ದರು, ನಿಖಿತಾ ಮೂರನೇ ಸ್ಥಾನ ಪಡೆದರೆ, ನರೇಂದ್ರ ಬಾಬು ಶರ್ಮಾ (ಬ್ರಹ್ಮಾಂಡ ಗುರೂಜಿ) ನಾಲ್ಕನೇ ಸ್ಥಾನದಲ್ಲಿದ್ದರು.

Shwetha M