ದುರಂತಕ್ಕೀಡಾದ ವಿಮಾನದಲ್ಲಿ ಪ್ರಯಾಣಿಕರ ಕೊನೇ ಮಾತು – ಹೃದಯ ಹಿಂಡುವಂತಿದೆ ಆ ಉದ್ಘಾರ..!

ದುರಂತಕ್ಕೀಡಾದ ವಿಮಾನದಲ್ಲಿ ಪ್ರಯಾಣಿಕರ ಕೊನೇ ಮಾತು – ಹೃದಯ ಹಿಂಡುವಂತಿದೆ ಆ ಉದ್ಘಾರ..!

ನೇಪಾಳ: ನೇಪಾಳದಲ್ಲಿ ನಡೆದ ವಿಮಾನದ ದುರಂತದಲ್ಲಿ ಎಲ್ಲಾ 72 ಮಂದಿ ಪ್ರಯಾಣಿಕರು ಕೂಡ ಅಸುನೀಗಿರೋ ಸಾಧ್ಯತೆ ಇದೆ. ಯೇತಿ ಹೆಸರಿನ ವಿಮಾನ ನೇಪಾಳದ ಪೋಖ್ರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪತನಗೊಂಡಿತ್ತು. ಇದೀಗ 66 ಮಂದಿಯ ಶವ ಪತ್ತೆಯಾಗಿದ್ದು, ಇನ್ನೂ ನಾಲ್ವರಿಗಾಗಿ ಕಾರ್ಯಾಚರಣೆ ಮುಂದುವರಿದಿದೆ. ದುರಂತದಲ್ಲಿ ಐವರು ಭಾರತೀಯರು ಮೃತಪಟ್ಟಿದ್ದಾರೆ. ಈ ಪೈಕಿ ಉತ್ತರಪ್ರದೇಶದ ಸೋನು ಜೈಸ್ವಾಲ್ ಎಂಬುವವರು ತಮಗೆ ಮಗ ಹುಟ್ಟಿದ್ದಕ್ಕಾಗಿ ಪಶುಪತಿನಾಥ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲು ತಮ್ಮ ಮೂವರು ಸ್ನೇಹಿತರ ಜೊತೆ ಹೊರಟಿದ್ರು. ಆದ್ರೆ, ವಿಧಿಯ ಆಟಕ್ಕೆ ಜೈಸ್ವಾಲ್ ಮತ್ತು ಅವರ ಮೂವರು ಸ್ನೇಹಿತರು ಬಲಿಯಾಗಿದ್ದಾರೆ. ಜೈಸ್ವಾಲ್​ಗೆ ಇಬ್ಬರು ಹೆಣ್ಣು ಮಕ್ಕಳಿದ್ರು. ಆದ್ರೆ, ಗಂಡು ಮಗುವಾದಲ್ಲಿ ಪಶುಪತಿನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸೋದಾಗಿ ಹರಕೆ ಹೊತ್ತುಕೊಂಡಿದ್ರು. ಇದೀಗ ಗಂಡು ಮಗು ಜನಿಸಿದ ಹಿನ್ನೆಲೆಯಲ್ಲಿ ಹರಕೆ ತೀರಿಸಲು ನೇಪಾಳದತ್ತ ಪ್ರಯಾಣ ಬೆಳೆಸಿದ್ರು. ಇನ್ನು ವಿಮಾನ ಪತನವಾಗೋ ವೇಳೆ ಜೈಸ್ವಾಲ್ ಫೇಸ್​​ಬುಕ್ ಲೈವ್ ಮಾಡಿದ್ರು. ವಿಮಾನ ಪತನವಾಗಿ ಹೊತ್ತಿ ಉರಿಯೋ ದೃಶ್ಯ ಜೈಸ್ವಾಲ್ ಮೊಬೈಲ್​​ನಲ್ಲಿ ಸೆರೆಯಾಗಿತ್ತು. ಅಲ್ದೆ, ತಮ್ಮ ಕೊನೆಯ ಕ್ಷಣದಲ್ಲಿ ವಿಮಾನದಲ್ಲಿ ಭಾರತೀಯರು ಮಾರಾ ಮಾರಾ ಅಂದ್ರೆ ಸತ್ತೆವು.. ಸತ್ತೆವು ಅಂತಾ ಉದ್ಘರಿಸಿದ್ದಾರೆ.

ಈ ನಡುವೆ ವಿಮಾನ ಪತನಕ್ಕೆ ಸಂಬಂಧಿ ತನಿಖೆ ತೀವ್ರಗೊಂಡಿದೆ. ಪತನಕ್ಕೊಳಗಾದ ಯೇತಿ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಕಾಕ್​​ಪಿಟ್ ವಾಯ್ಸ್ ರೆಕಾರ್ಡರ್, ವಿಮಾನದ ಡಾಟಾ ರೆಕಾರ್ಡರ್​​ನ್ನ ಕೂಡ ತನಿಖಾಧಿಕಾರಿಗಳು ಸಂಗ್ರಹಿಸಿದ್ದಾರೆ.

suddiyaana