ಪೂಜೆ ನೆಪದಲ್ಲಿ ಸೀರೆ ಹಂಚಿದ ಬಿಜೆಪಿ ಮುಖಂಡ – ನಾ ಮುಂದು ತಾ ಮುಂದು ಅಂತಾ ಮುಗಿಬಿದ್ದ ಮಹಿಳೆಯರು!  

ಪೂಜೆ ನೆಪದಲ್ಲಿ ಸೀರೆ ಹಂಚಿದ ಬಿಜೆಪಿ ಮುಖಂಡ – ನಾ ಮುಂದು ತಾ ಮುಂದು ಅಂತಾ ಮುಗಿಬಿದ್ದ ಮಹಿಳೆಯರು!  

ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದು ಈಗಾಗ್ಲೇ ರಾಜಕೀಯ ಪಕ್ಷಗಳಲ್ಲಿ ನಾನಾ ಕಸರತ್ತು ಶುರುವಾಗಿದೆ. ಜೊತೆಗೆ ಮತದಾರರನನ್ನ ಓಲೈಸಲು ಹತ್ತಾರು ಆಮಿಷಗಳನ್ನ ಒಡ್ಡುತ್ತಿದ್ದಾರೆ. ಈ ನಡುವೆ ರಾಜಕೀಯ ನಾಯಕರ ಬೆಂಬಲಿಗರು ಸಹ ತಮ್ಮ ನಾಯಕರ ಮನಗೆಲ್ಲೋಕೆ ಸಾವಿರಾರು ಜನರನ್ನ ಸೇರಿಸಿ ಶಕ್ತಿ ಪ್ರದರ್ಶನ ಮಾಡ್ತಿದ್ದಾರೆ. ಶಕ್ತಿ ಪ್ರದರ್ಶನದ ವೇಳೆ ಉಚಿತ ಸೀರೆ ಉಡಗೊರೆಯಾಗಿ ಕೊಟ್ಟಿದ್ದು, ಸೀರೆಗಾಗಿ ನಾರಿಯರು ಮುಗಿಬಿದ್ದಿದ್ದಾರೆ.

ಇದನ್ನೂ ಓದಿ : ಕಾಲಡಿಯಲ್ಲಿ ರಾಶಿ ರಾಶಿ ಮೊಸಳೆಗಳು – ಏಣಿ ಏರಿ ನಿಂತವನ ಕಥೆ ಏನಾಯ್ತು..!?

ಚಿಕ್ಕಬಳ್ಳಾಪುರ ತಾಲೂಕಿನ ಗೆಂಟಿಗನಾಹಳ್ಳಿ ಗ್ರಾಮದ ಬಿಜೆಪಿ ಮುಖಂಡ ಶಿವಕುಮಾರ್ ಈ ಕಾರ್ಯಕ್ರಮ ಏರ್ಪಡಿಸಿದ್ದರು. ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಬೆಂಬಲಿಗ ಆಗಿರುವ ಶಿವಕುಮಾರ್ ಸುಧಾಕರ್‌ಗೆ ಅಭಿನಂದನಾ ಸಮಾರಂಭ ಹಾಗೂ ಔತಣಕೂಟದ ಹೆಸರಲ್ಲಿ ಸಾವಿರಾರು ಮಹಿಳೆಯರನ್ನ ಸೇರಿಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಗೆಂಟಿಗಾನಹಳ್ಳಿ ಗ್ರಾಮದ ಬಳಿ ಸಮಾರಂಭ ಆಯೋಜಿಸಿ ಭರ್ಜರಿ ಬಾಡೂಟ ಹಾಕಿಸಿ, ಸಾವಿರಾರು ಮಹಿಳೆಯರಿಗೆ ಸೀರೆ ಕೊಟ್ಟು ಮಹಿಳೆಯರ ಮನವೊಲಿಸುವ ಕೆಲಸ ಮಾಡಿದ್ದಾರೆ.

ಸಾವಿರಾರು ಮಹಿಳೆಯರು ಸೀರೆ ಪಡೆಯೋಕೆ ಒಂದೇ ಬಾರಿಗೆ ನಾನಾ ನೀನಾ ಅಂತಾ ಮುಗಿಬಿದ್ದಿದ್ದು ನೂಕು ನುಗ್ಗಲು ಉಂಟಾಗಿತ್ತು. ಗ್ರಾಮದೇವತೆಗೆ ಪೂಜೆ ಹೆಸರಲ್ಲಿ ಶಿವಕುಮಾರ್ ಸಭೆಯಲ್ಲಿ ನೆರೆದಿದ್ದ ಸಾವಿರಾರು ಮಹಿಳೆಯರಿಗೆ ಟೋಕನ್ ಕೊಟ್ಟು ಅರಿಶಿನ ಕುಂಕುಮದ ಹೆಸರಲ್ಲಿ ಉಚಿತ ಸೀರೆಯನ್ನ ಉಡುಗೊರೆಯಾಗಿ ಕೊಟ್ಟಿದ್ದಾರೆ.

ಸೀರೆ ಕೊಡ್ತಾರೆ ಅಂತಾ ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಚಿಕ್ಕ-ಚಿಕ್ಕ ಮಕ್ಕಳನ್ನ ಕಂಕುಳಲ್ಲಿ ಎತ್ತಿಕೊಂಡು ಗಂಟೆಗಟ್ಟಲೆ ಕಾಯ್ದು ಸೀರೆಯನ್ನ ಪಡೆದಿದ್ದಾರೆ.

suddiyaana