ಒಂದೇ ಕಾರ್ಯಕ್ರಮದಲ್ಲಿ ಕೆ. ಎಸ್‌ ಈಶ್ವರಪ್ಪ, ಬಿವೈ ರಾಘವೇಂದ್ರ ಮುಖಾಮುಖಿ – ಆಮೇಲೆ ಏನಾಯ್ತು ಗೊತ್ತಾ?   

ಒಂದೇ ಕಾರ್ಯಕ್ರಮದಲ್ಲಿ ಕೆ. ಎಸ್‌ ಈಶ್ವರಪ್ಪ, ಬಿವೈ ರಾಘವೇಂದ್ರ ಮುಖಾಮುಖಿ – ಆಮೇಲೆ ಏನಾಯ್ತು ಗೊತ್ತಾ?   

ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಇಬ್ಬರೂ ಆರೆಸ್ಸೆಸ್ ಕಾರ್ಯಕರ್ತರು ಆದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಎದುರಾಳಿಗಳು. ಆದ್ರೆ ಇವತ್ತು ಕೆ ಎಸ್‌ ಈಶ್ವರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ ವ್ಯಕ್ತಿ –  ಪ್ರಚಾರದ ವೇಳೆ ಭದ್ರತಾ ವೈಫಲ್ಯ

ಶಿವಮೊಗ್ಗದ ಆರ್ ಎಸ್ ಎಸ್ ಮುಖಂಡರು ಆದಿಚುಂಚನಗಿರಿ ಶಾಲಾ ಮೈದಾನದಲ್ಲಿ ಯುಗಾದಿ ಪ್ರಯುಕ್ತ ನಡೆಸಿದ ಕಾರ್ಯಕ್ರಮದಲ್ಲಿ ರಾಘವೇಂದ್ರ ಮತ್ತು ಈಶ್ವರಪ್ಪ ಇಬ್ಬರೂ ಸಂಘದ ಗಣವೇಷ ಧರಿಸಿ ಭಾಗಿಯಾಗಿ ಗಮನ ಸೆಳೆದರು. ವೇದಿಕೆಯ ಮುಂಭಾಗದಲ್ಲಿ ಗಣ್ಯರಿಗಾಗಿ ಹಾಕಲಾಗಿದ್ದ ಕುರ್ಚಿಗಳಲ್ಲಿ ಇಬ್ಬರು ದೂರ ದೂರವೇ ಕುಳಿತಿದ್ದರು.

ರಾಘವೇಂದ್ರ ಮುಂಭಾಗದ ಸಾಲಿನಲ್ಲಿ ನಗು ನಗುತ್ತಾ ಕುಳಿತಿದ್ದರೆ, ಈಶ್ವರಪ್ಪ ಅವರು ಹಿಂಭಾಗದ ಸಾಲಿನಲ್ಲಿ ಗಂಭೀರವಾಗಿ ಆಸೀನರಾಗಿದ್ದರು. ಇಬ್ಬರು ಮುಖಕ್ಕೆ ಮುಖ ಕೊಟ್ಟು ಮಾತನಾಡಿಲ್ಲ, ಪರಸ್ಪರ ನಗೆಯನ್ನೂ ಬೀರಲಿಲ್ಲ. ಇಬ್ಬರೂ ಬೇರೆ ನಾಯಕರೊಂದಿಗೆ ಪರಸ್ಪರ ಮಾತನಾಡಿದ್ದಾರೆ. ಬಿಎಸ್‌ವೈ ಕುಟುಂಬದ ವಿರುದ್ಧ ಸಮರ ಸಾರಿರುವ ಈಶ್ವರಪ್ಪ ಮುನಿಸು ತಣಿಸುವುದು ಸದ್ಯದ ಮಟ್ಟಿಗೆ ಸಂಘಕ್ಕೂ ದೊಡ್ಡ ಸವಾಲಾಗಿ ಪರಿಣಮಿಸಿದೆ.

Shwetha M