ಸಿಎಂ, ಡಿಸಿಎಂ ಭೇಟಿ ಮಾಡಿದ ಬಿಗ್‌ಬಾಸ್ ವಿನ್ನರ್– ಕಪ್ ಸಮೇತ ಫೋಟೋಗೆ ಪೋಸ್ ಕೊಟ್ಟ ಕಾರ್ತಿಕ್

ಸಿಎಂ, ಡಿಸಿಎಂ ಭೇಟಿ ಮಾಡಿದ ಬಿಗ್‌ಬಾಸ್ ವಿನ್ನರ್– ಕಪ್ ಸಮೇತ ಫೋಟೋಗೆ ಪೋಸ್ ಕೊಟ್ಟ ಕಾರ್ತಿಕ್

ಬಿಗ್ ಬಾಸ್ ರಿಯಾಲಿಟಿ ಶೋ ಗೆದ್ದ ಬಳಿಕ ಕಾರ್ತಿಕ್ ಮಹೇಶ್ ಸ್ಟಾರ್ ಆಗಿಬಿಟ್ಟಿದ್ದಾರೆ. ಕಾರ್ತಿಕ್ ಮಹೇಶ್ ಜನಪ್ರಿಯತೆ ಕೂಡಾ ದಿನೇ ದಿನೇ ಹೆಚ್ಚಾಗುತ್ತಿದೆ. ಮಾಧ್ಯಮಗಳಲ್ಲಿ ಮಿಂಚುತ್ತಿರುವ ಕಾರ್ತಿಕ್ ಮಹೇಶ್ ಕೆಲ ರಿಯಾಲಿಟಿ ಶೋ ಸ್ಟೇಜ್ ಮೇಲೂ ತನ್ನ ಖದರ್ ತೋರಿಸುತ್ತಿದ್ದಾರೆ. ಇದೀಗ ಬಿಗ್‌ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.

ಇದನ್ನೂ ಓದಿ: ಮೀನಾಕ್ಷಿ ಮೀನಾಕ್ಷಿ ಎಂಥಾ ಮಗನನ್ನು ಹೆತ್ಬಿಟ್ರಿ ಮೀನಾಕ್ಷಿ! –  ಕಾರ್ತಿಕ್‌ ತಾಯಿಯನ್ನು ಡೈಲಾಗ್‌ ಮೂಲಕ ಹೊಗಳಿದ ನಿರೂಪಕಿ ಸುಶ್ಮಾ!

ಬಿಗ್ ಬಾಸ್ ಕನ್ನಡ ಸೀಸನ್ 10 ವಿನ್ನರ್ ಕಾರ್ತಿಕ್ ಮಹೇಶ್ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಕಾರ್ತಿಕ್ ಮಹೇಶ್ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಕಾರ್ತಿಕ್ ಅವರಿಗೆ ಶುಭ ಹಾರೈಸಿದ್ದಾರೆ.  ‘ಒಳ್ಳೆದಾಗಲಿ ಕಣಯ್ಯ. ಸಿನಿಮಾ ರಂಗದಲ್ಲಿ ಒಳ್ಳೆಯ ಹೆಸರು ಮಾಡು’ ಎಂದು ಸಿಎಂ ಹಾರೈಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಂದ ಆಶೀರ್ವಾದ ಪಡೆದ ಕಾರ್ತಿಕ್ ಮಹೇಶ್ ಖುಷಿಯಾಗಿದ್ದಾರೆ.

ಇನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಕೂಡಾ ಕಾರ್ತಿಕ್‌ಗೆ ಶುಭಹಾರೈಸಿದ್ದಾರೆ. ಈ ವೇಳೆ ಬಿಗ್​ ಬಾಸ್​ ಟ್ರೋಫಿಯನ್ನು ಹಿಡಿದುಕೊಂಡು ಡಿಕೆ ಶಿವಕುಮಾರ್​ ಜೊತೆ ಕಾರ್ತಿಕ್​ ಮಹೇಶ್​ ಪೋಸ್​ ನೀಡಿದ್ದಾರೆ.

ಹಲವು ಸಿನಿಮಾಗಳಲ್ಲಿ ಕಾರ್ತಿಕ್​ ಮಹೇಶ್​ ನಟಿಸುತ್ತಿದ್ದಾರೆ. ಅವರು ಅತಿಥಿ ಪಾತ್ರ ಮಾಡಿರುವ ಒಂದು ಸರಳ ಪ್ರೇಮಕಥೆ ಸಿನಿಮಾ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿದೆ. ನನ್ನಮ್ಮ ಸೂಪರ್​ಸ್ಟಾರ್​ ಸೀಸನ್​ 3 ಶೋನಲ್ಲೂ ಅವರು ಗೆಸ್ಟ್​ ಆಗಿ ಭಾಗಿಯಾಗಿದ್ದಾರೆ. ಕೆಲವೇ ದಿನಗಳ ಹಿಂದೆ ವಿಪಕ್ಷ ನಾಯಕ ಆರ್​. ಅಶೋಕ್​ ಅವರನ್ನು ಕಾರ್ತಿಕ್​ ಮಹೇಶ್​ ಭೇಟಿ ಆಗಿದ್ದರು.

Sulekha