BBK 12ಕ್ಕೆ ಸುದೀಪ್ ಹೋಸ್ಟ್.. ಶೋ ನಡೆಸಲು ಕಿಚ್ಚನ 5 ಕಂಡೀಷನ್? – ಇಂಥವರಿಗೆ ಶೋಗೆ ನೋ ಎಂಟ್ರಿ!?

ಬಿಗ್ ಬಾಸ್.. ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ.. ಕಳೆದ 11 ವರ್ಷದಿಂದ ಕನ್ನಡದಲ್ಲಿ ಬಿಗ್ ಬಾಸ್ ಶೋ ವೀಕ್ಷಕರನ್ನ ಮನರಂಜಿಸಿದೆ. ಬಿಗ್ ಬಾಸ್ ಕನ್ನಡ ಅಂದಾಗ ನಮಗೆ ನೆನಪಾಗೋದೇ ಕಿಚ್ಚ ಸುದೀಪ್. 11 ಸೀಸನ್ ಗಳನ್ನ ಅಚ್ಚುಕಟ್ಟಾಗಿ ಹೋಸ್ಟ್ ಮಾಡ್ತಾ ಬಂದಿದ್ರು.. ಆದ್ರೆ ಸುದೀಪ್ ಬಿಗ್ಬಾಸ್ ನಿರೂಪಣೆಗೆ ವಿದಾಯ ಹೇಳಿದ್ದಾರೆ. ಮುಂದಿನ ಸೀಸನ್ ನಿಂದ ಶೋನ ಹೋಸ್ಟ್ ಮಾಡಲ್ಲ ಅಂತಾ ಈಗಾಗ್ಲೇ ಹೇಳಿದ್ದಾರೆ. ಇನ್ನುಮುಂದೆ ಬಿಗ್ ಬಾಸ್ ಶೋನಲ್ಲಿ ಕಿಚ್ಚನನ್ನ ಮಿಸ್ ಮಾಡಿಕೊಳ್ತೇವೆ ಅಂತಾ ಅದೆಷ್ಟೋ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. ಆದ್ರೀಗ ಬಿಗ್ ಬಾಸ್ ವೀಕ್ಷಕರಿಗೆ ಗುಡ್ನ್ಯೂಸ್ ವೊಂದಿದೆ. ಬಿಗ್ಬಾಸ್ ಸೀಸನ್ 12 ಕ್ಕೂ ಸುದೀಪ್ ನಿರೂಪಣೆ ಮಾಡಲಿದ್ದಾರಂತೆ.. ಆದ್ರೆ ಶೋ ಒಪ್ಪಿಕೊಳ್ಳೋಕೂ ಮುನ್ನ ಬಾದ್ಷಾ ಕಂಡೀಷನ್ಸ್ ಅಪೈ ಅಂತಾ ಹೇಳಿದ್ದಾರಂತೆ.
ಇದನ್ನೂ ಓದಿ: ಬುಮ್ರಾಗೆ ಆಡಿದ್ರೂ ಕಷ್ಟ.. ಆಡದಿದ್ರೂ ಕಷ್ಟ – ವಾರ್ನಿಂಗ್ ಕೊಟ್ಟಿದ್ದೇಕೆ ಫಿಸಿಯೋ ತಜ್ಞ?
100 ದಿನ.. ಪ್ರತಿ ದಿನ ಜಗಳ.. ಕಿತ್ತಾಟ.. ಇದು ಬಿಗ್ಬಾಸ್ ಮನೆಯಲ್ಲಿ ಕಂಡು ಬರೋ ದೃಶ್ಯ.. ಬಿಗ್ಬಾಸ್ ರಿಯಾಲಿಟಿ ಶೋ ಬಗ್ಗೆ ವಿಶೇಷವಾಗಿ ಏನೂ ಹೇಳ್ಬೇಕಿಲ್ಲ.. ಯಾವುದೇ ಭಾಷೆ ಇರಲಿ, ಬಿಗ್ ಬಾಸ್ ರಿಯಾಲಿಟಿ ಶೋ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಪ್ರತಿ ಬಾರಿಯ ಸೀಸನ್ಗೂ ಏನಾದರೂ ವಿವಾದವಾಗಿ ದೇಶಾದ್ಯಂತ ಭಾರೀ ಸುದ್ದಿಯಲ್ಲಿರುವುದು ಈ ರಿಯಾಲಿಟಿ ಶೋ ವಿಶೇಷ. ಬಿಗ್ಬಾಸ್ ಕನ್ನಡ ಸೀಸನ್ 10 ಹಾಗೇ 11 ಭಾರಿ ವಿವಾದಗಳಿಂದಲೇ ಸುದ್ದಿಯಾಗಿತ್ತು.. ಇದೀಗ ಬಿಗ್ಬಾಸ್ ಕನ್ನಡ ಸೀಸನ್ 12 ಶ್ರೀಘ್ರದಲ್ಲೇ ಆರಂಭವಾಗಲಿದೆ.. ಇದಕ್ಕಾಗಿ ವಾಹಿನಿ ಸಕಲ ಸಿದ್ದತೆಗಳನ್ನ ಮಾಡಿಕೊಳ್ತಿದೆ.. ಆದ್ರೆ ಈ ಬಾರಿ ಕಿಚ್ಚ ಸುದೀಪ್ ಶೋನ ಹೋಸ್ಟ್ ಮಾಡಲ್ಲ ಅನ್ನೋದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಕಳೆದ ಸೀಸನ್ ನಲ್ಲಿ ತಮ್ಮದು ಇದೇ ಕೊನೆಯ ಬಿಗ್ಬಾಸ್ ನಿರೂಪಣೆ. ಮುಂದಿನ ಸೀಸನ್ ನಲ್ಲಿ ತಾನು ಹೋಸ್ಟ್ ಮಾಡಲ್ಲ ಅಂತಾ ಹೇಳಿದ್ರು ಸುದೀಪ್. ಆದ್ರೆ ಸುದೀಪ್ ಇಲ್ಲದ ಬಿಗ್ಬಾಸ್ ಊಹಿಸಿಕೊಳ್ಳುವುದೂ ಕಷ್ಟ ಅಂತಾ ಫ್ಯಾನ್ಸ್ ಹೇಳಿಕೊಂಡು ಬಂದಿದ್ರು.. ಆದ್ರೀಗ ಬಿಗ್ಬಾಸ್ ಸೀಸನ್ 12ಕ್ಕೂ ಕಿಚ್ಚನೇ ಬಾಸ್ ಅನ್ನೋ ಅಪ್ಡೇಟ್ ಸಿಕ್ಕಿದೆ.
ಹೌದು, ಕಳೆದ 11 ವರ್ಷಗಳಿಂದ ಬಿಗ್ ಬಾಸ್ ಕನ್ನಡ ವನ್ನ ಕಿಚ್ಚ ಸುದೀಪ್ ಮುನ್ನಡೆಸಿಕೊಂಡು ಬಂದಿದ್ರು.. ‘ಬಿಗ್ ಬಾಸ್’ ಎಂದರೆ ಎಲ್ಲರಿಗೂ ಥಟ್ ಅಂತ ನೆನಪಾಗೋದೇ ಕಿಚ್ಚ ಸುದೀಪ್. ಈ ಶೋನ ಕಿಂಗ್ ಕಿಚ್ಚ ಅಂತಾನೇ ಹೇಳ್ಬೋದು.. ಈ ಶೋ ಅಷ್ಟು ಹಿಟ್ ಆಗಲು ಸುದೀಪ್ ಕಾರಣ.. ಶೋ ನೋಡದವರು ಕೂಡ ವೀಕೆಂಡ್ ಬರೋದನ್ನೇ ಕಾಯ್ತಾ ಇರ್ತಾರೆ. ಯಾಕಂದ್ರೆ ಕಿಚ್ಚನ ಖದರ್ ನೋಡೋದಿಕ್ಕೆ ವೀಕ್ಷಕರಿಗೂ ಇಷ್ಟ.. ಸ್ಪರ್ಧಿಗಳಿಗೆ ಸುದೀಪ್ ತಮ್ಮದೇ ಶೈಲಿಯಲ್ಲಿ ತೆಗೆದುಕೊಳ್ಳುವ ಕ್ಲಾಸ್, ಕಿಚಾಯಿಸುವ ರೀತಿ, ಆಡುವ ಪ್ರತಿಯೊಂದು ಮಾತುಗಳು ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ. ಸುದೀಪ್ ಎಂಟ್ರಿಯಾಗ್ತಿದೆ ಅಂದ್ರೆ ಸ್ಪರ್ಧಿಗಳು ಕೂಡ ಅಲರ್ಟ್ ಆಗ್ತಿದ್ರು.. ಸುದೀಪ್ ಸರ್ ಅಂತಾ ಗೌರವ ಕೊಟ್ಟು ಮಾತಾಡ್ತಿದ್ರು.. ಸುದೀಪ್ ಶೋಗೆ ಗುಡ್ಬೈ ಹೇಳಿದಾಗ ಅದೇಷ್ಟೋ ವೀಕ್ಷಕರು ಕಿಚ್ಚನಿಲ್ಲದ ಶೋನ ನಾವು ನೋಡಲ್ಲ.. ಅಂತಾ ಹೇಳಿದ್ರು.. ಇದೀಗ ವಾಹಿನಿ ಸುದೀಪ್ ಬಳಿ ಶೋ ನಡೆಸಬೇಕೆಂದು ಕೇಳಿಕೊಂಡಿದ್ದಾರೆ.. ಅದಕ್ಕೆ ಬಾದ್ಷಾ ಕೂಡ ಒಪ್ಪಿಕೊಂಡಿದ್ದಾರಂತೆ.. ಇದಕ್ಕಾಗಿ ಕಿಚ್ಚ ಸುದೀಪ್ ಐದು ಕಂಡೀಷನ್ಗಳನ್ನ ಹಾಕಿದ್ದಾರೆ. ಅವೆಲ್ಲದಕ್ಕೂ ಬಿಗ್ ಬಾಸ್ ಆಯೋಜಕರು ಒಪ್ಪಿಕೊಂಡಿದ್ದಾರಂತೆ ಎಂಬ ಹೇಳಲಾಗ್ತಿದೆ. ಅಷ್ಟಕ್ಕೂ ಸುದೀಪ್ ಹಾಕಿದ ಕಂಡೀಷನ್ ಏನು ಅನ್ನೋ ಮಾಹಿತಿ ಇಲ್ಲಿದೆ.
ಕಂಡೀಷನ್ ನಂ.1 : ಮನೆ ಕಲರ್ ಫುಲ್ ಆಗಿರ್ಬೇಕು!
ಬಿಗ್ ಬಾಸ್ ಮನೆ ಅಂದ್ರೇನೆ ಹಾಗೆ.. ಮನೆ ಕಲರ್ಫುಲ್ ಆಗಿರುತ್ತೆ.. ಅದ್ರೊಳಗೆ ಹೋದ್ರೆ ಬೇರೆ ಲೋಕಕ್ಕೆ ಹೋದಂತೆ ಅನ್ನಿಸುತ್ತೆ.. ಆದ್ರೆ ಕಳೆದ ಸೀಸನ್ ನಲ್ಲಿ ಸ್ವರ್ಗ ನರಕ ಕಾನ್ಸೆಪ್ಟ್ ಮೇಲೆ ಶೋ ನಡೆಸಲಾಗಿತ್ತು. ಈ ಕಾನ್ಸೆಪ್ಟ್ ಗೆ ಭಾರಿ ವಿರೋಧ ವ್ಯಕ್ತವಾಗಿತ್ತು.. ಲೀಗಲ್ ನೋಟಿಸ್ ಕೂಡ ಬಂದಿತ್ತು. ಹೀಗಾಗಿ ಬಿಗ್ ಬಾಸ್ ಮನೆ ತುಂಬಾ ಕಲರ್ ಫುಲ್ ಆಗಿರಬೇಕು. ಯಾವುದೇ ವಿವಾದಕ್ಕೆ ಗುರಿಯಾಗ್ಬಾರ್ದು ಅಂತಾ ಸುದೀಪ್ ಕಂಡೀಷನ್ ಹಾಕಿದ್ದಾರೆ ಎಂದು ಹೇಳಲಾಗ್ತಿದೆ.
ಕಂಡೀಷನ್ ನಂ.2 : ಕನ್ನಡಕ್ಕೆ ಮೊದಲ ಆದ್ಯತೆ!
ಬಿಗ್ ಬಾಸ್ ಕನ್ನಡದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡ್ಬೇಕು ಅಂತಾ ಕಿಚ್ಚ ಸುದೀಪ್ ಕಂಡೀಷನ್ ಹಾಕಿದ್ದಾರೆ ಎಂದು ಹೇಳಲಾಗ್ತಿದೆ. ಆರಂಭದ ಸೀಸನ್ ನಲ್ಲಿ ಸ್ಪರ್ಧಿಗಳು ಆದಷ್ಟು ಕನ್ನಡದಲ್ಲೇ ಮಾತನಾಡ್ಬೇಕು ಅನ್ನೋ ರೂಲ್ಸ್ ಇತ್ತು.. ರೂಲ್ಸ್ ಬ್ರೇಕ್ ಮಾಡಿದ್ರೆ ಶಿಕ್ಷೆ ಕೂಡ ವಿಧಿಸಲಾಗ್ತಿತ್ತು. ಆದ್ರೆ ಕಳೆದ ಸೀಸನ್ ಗಳಲ್ಲಿ ಸ್ಪರ್ಧಿಗಳು ಬೇರೆ ಭಾಷೆಯಲ್ಲಿ ಮಾತನಾಡಿದ್ರು ಯಾವುದೇ ಎಚ್ಚರಿಕೆ ನೀಡ್ತಿರ್ಲಿಲ್ಲ.. ಇದು ಕೂಡ ಸುದೀಪ್ ಅಸಮಧಾನಕ್ಕೆ ಕಾರಣವಾಗಿತ್ತು.
ಕಂಡೀಷನ್ ನಂ. 3 : ಕನ್ನಡವೇ ವೇದಘೋಷ ಆಗ್ಬೇಕು
ಇನ್ನು ಕಿಚ್ಚ ಸುದೀಪ್ ಬಿಗ್ ಬಾಸ್ ನಲ್ಲಿ ಕನ್ನಡವೇ ವೇದಘೋಷ ಆಗಬೇಕು. ಸ್ಪರ್ಧಿಗಳಿಗೆ ಟಾಸ್ಕ್ ರೂಲ್ಸ್ ಎಲ್ಲವನ್ನೂ ಅಚ್ಚ ಕನ್ನಡದಲ್ಲಿ ತಿಳಿಸ್ಬೇಕು.. ಬಿಗ್ ಬಾಸ್ ಟೈಟಲ್ ಅನ್ನು ಸಹ ಕನ್ನಡ ಅಕ್ಷರಗಳಲ್ಲಿ ದೊಡ್ಡದಾಗಿ ಹಾಕಬೇಕು ಅನ್ನೋ ಅರ್ಥದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಕಂಡೀಷನ್ ನಂ. 4 : ಒಳ್ಳೆಯ ಲೀಗಲ್ ಟೀಮ್ ಇರ್ಬೇಕು
ಬಿಗ್ ಬಾಸ್ ಶೋ ಅಂದ್ರೆ ಅಲ್ಲಿ ವಿವಾದ ಇದ್ದೇ ಇರುತ್ತೆ. ಕಳೆದ ಕೆಲ ಸೀಸನ್ ಗಳಲ್ಲಿ ಶೋ ಟೀಮ್ ನಿಯಮ ಉಲ್ಲಂಘಿಸಿತ್ತು. ಹೀಗಾಗಿ ʼಶೋ ವಿರುದ್ಧ ಕೂಡ ಲೀಗಲ್ ನೋಟಿಸ್ ಬಂದಿತ್ತು.. ಅಷ್ಟೇ ಅಲ್ಲ ಕೆಲ ಸ್ಪರ್ಧಿಗಳು ಜೈಲಿಗೆ ಕೂಡ ಹೋಗಿ ಬಂದಿದ್ರು. ಇದು ಶೋ ಮೇಲೆ ಜನರಿಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿತ್ತು. ಹೀಗಾಗಿ ಸುದೀಪ್ ಶೋ ನಲ್ಲಿ ಒಳ್ಳೆಯ ಲೀಗಲ್ ಟೀಮ್ ಇರ್ಬೇಕು ಅಂತಾ ಕಂಡೀಷನ್ ಹಾಕಿದ್ದಾರೆ ಎಂದು ಹೇಳಲಾಗ್ತಿದೆ.
ಕಂಡೀಷನ್ ನಂ. 5 : ವಿವಾದಿತ ಸ್ಪರ್ಧಿಗಳಿಗೆ ನೋ ಎಂಟ್ರಿ!
ಅಂದ್ಹಾಗೆ ಬಿಗ್ಬಾಸ್ ಎಂದರೇನೇ ಅಲ್ಲಿ ವಿವಾದಿತರಿಗೇ ಮೊದಲ ಆದ್ಯತೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಹೆಚ್ಚೆಚ್ಚು ಕಾಂಟ್ರವರ್ಸಿ ಮಾಡಿಕೊಂಡವರಿಗೆ ಹೆಚ್ಚೆಚ್ಚು ಆದ್ಯತೆ. ರೀಲ್ಸ್ ಮೂಲಕ ಫೇಮಸ್ ಆದವರು.. ಹೊರಗಡೆ ಸಿಕ್ಕಾಪಟ್ಟೆ ವಿವಾದ ಸೃಷ್ಟಿಸಿ, ಒಂದೆರಡು ಬಾರಿ ಜೈಲಿಗೆ ಹೋಗಿ ಬಂದವರು.. ಹೀಗೆ ವಿವಾದ ಸೃಷ್ಟಿಸಿಕೊಂಡವರಿಗೆ ಆದ್ಯತೆ ನೀಡಲಾಗುತ್ತೆ. ಇವ್ರೆಲ್ಲಾ ಸಮಾಜದ ಕಣ್ಣಿಗೆ ಹೀರೋಗಳಾಗಿ ಮಿಂಚುತ್ತಿದ್ದಾರೆ. ಇಂಥವರನ್ನು ತಂದರೆ ಮಾತ್ರ ಬಿಗ್ಬಾಸ್ಗೆ ವೀಕ್ಷಕರು ಹೆಚ್ಚುವುದು ಎಂದು ಎಲ್ಲರಿಗೂ ತಿಳಿದದ್ದೇ. ಆದರೆ ಸುದೀಪ್ ಅವರು ಈ ಬಾರಿ ವಿವಾದಿತರು ಬೇಡ ಎಂದಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ ಈ ಬಗ್ಗೆ ಸುದೀಪ್ ಆಗಲೀ, ವಾಹಿನಿಯಾಗಲೀ ಯಾವುದೇ ಹೇಳಿಕೆ ನೀಡಲಿಲ್ಲ. ಬಿಗ್ಬಾಸ್ 12 ಯಾವಾಗ ಆರಂಭ ಆಗಲಿದೆ ಎನ್ನುವ ಬಗ್ಗೆಯೂ ಇದುವರೆಗೆ ಮಾಹಿತಿ ಇಲ್ಲ.
ಅಂದ್ಹಾಗೆ ಕನ್ನಡದಲ್ಲಿ ಕಿಚ್ಚ ಸುದೀಪ್ ಅವರನ್ನ ಬಿಟ್ಟು ಬೇರೆ ಯಾರೇ ಬಿಗ್ ಬಾಸ್ ಶೋ ನಿರೂಪಣೆ ಮಾಡಿದರು, ಅದು ಚೆನ್ನಾಗಿ ಬರುವುದಿಲ್ಲ, ಜನರು ನೋಡುವುದು ಇಲ್ಲ ಅನ್ನೋದು ವಾಹಿನಿಯವರಿಗೂ ಗೊತ್ತಿರುವ ವಿಷಯ. ಹಾಗಾಗಿ ಕಿಚ್ಚ ಸುದೀಪ್ ಅವರು ಹಾಕಿರುವ ಎಲ್ಲಾ ಕಂಡೀಶನ್ ಗಳನ್ನು ಒಪ್ಪಿ, ಅವರನ್ನು ಮತ್ತೆ ಒಪ್ಪಿಸಿದ್ದಾರೆ ಎಂದು ಹೇಳಲಾಗ್ತಿದೆ. ಇದೀಗ ಸುದೀಪ್ ಮತ್ತೆ ಬಿಗ್ ಬಾಸ್ ಗೆ ಬರುತ್ತಾರೆ ಅನ್ನೋದು ಫ್ಯಾನ್ಸ್ ಗೆ ಖುಷಿಯಾಗಿದೆ. ಆದ್ರೆ ನಿಜಕ್ಕೂ ಸುದೀಪ್ ಈ ಕಂಡೀಷನ್ ಹಾಕಿದ್ದಾರಾ? ಮುಂದಿನ ಸೀಸನ್ ಹೋಸ್ಟ್ ಮಾಡ್ತಾರಾ ಅನ್ನೋದು ಗೊತ್ತಿಲ್ಲ.. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಪ್ಡೇಟ್ ಕೊಡ್ತಾರಾ ಅಂತಾ ಕಾದು ನೋಡ್ಬೇಕು.