ಜೋಕರ್‌ ಜಗ್ಗು.. ಧನರಾಜ್‌ ಹೀರೋ – ಹಾರಾಡ್ತಿದ್ದ ಲಾಯರ್‌ ಕಣ್ಣೀರಿಟ್ಟಿದ್ದೇಕೆ?
ಚೈತ್ರ ಅಸಲಿ ಆಟ ಈಗ ಶುರು!

ಜೋಕರ್‌ ಜಗ್ಗು.. ಧನರಾಜ್‌ ಹೀರೋ – ಹಾರಾಡ್ತಿದ್ದ ಲಾಯರ್‌ ಕಣ್ಣೀರಿಟ್ಟಿದ್ದೇಕೆ?ಚೈತ್ರ ಅಸಲಿ ಆಟ ಈಗ ಶುರು!

I will Expose.. Destroy Bigg Boss.. ಆಚೆ ಹೋಗಿ ನಿಮ್ಮನ್ನೆಲ್ಲಾ ನೋಡ್ಕೊತ್ತೀನಿ ಅಂತಾ ಲಾಯರ್‌ ಜಗದೀಶ್‌ ದೊಡ್ಮನೆಯಲ್ಲಿ ರಂಪಾಟ ಮಾಡಿದ್ದು ನಿಮ್ಗೆಲ್ಲಾ ಗೊತ್ತೇ ಇದೆ.. ಇಷ್ಟೆಲ್ಲಾ ಕೂಗಾಡಿ ರಂಪಾಟ ಮಾಡಿದ್ದ ಜಗದೀಶ್‌ ಈಗ ಸೀದಾ ಸಾದಾ ಆಗಿದ್ದಾರೆ.. ಧನರಾಜ್‌ ಮೇಲೆ ಕೂಗಾಡಿದ್ದ ಜಗದೀಶ್‌ ನೀನು ಹೀರೋ ಆದೆ ಅಂತಾ ಹಾಡಿ ಹೊಗಳಿದ್ದಾರೆ.. ತನ್ನ ತಪ್ಪಿನ ಅರಿವಾಗಿ ಮನೆ ಸದಸ್ಯರ ಬಳಿ ಕೂಡ ಸಾರಿ ಕೂಡ ಹೇಳಿದ್ದಾರೆ.. ಅಷ್ಟೆಲ್ಲಾ ರಂಪಾಟ ಮಾಡಿದ್ದ ಜಗದೀಶ್‌ ಸೈಲೆಂಟ್‌ ಆಗಿದ್ಯಾಕೆ? ಕಣ್ಣೀರು ಹಾಕಿದ್ಯಾಕೆ? ಜಗದೀಶ್‌ ಅನ್ನ ಸಮಧಾನ ಮಾಡಿದ್ಯಾರು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ನವರಾತ್ರಿ ಮೊದಲ ದಿನವೇ ಗುಡ್​ನ್ಯೂಸ್ ಕೊಟ್ಟ ಭುವನ್ ದಂಪತಿ – ಹೆಣ್ಣು ಮಗುವಿಗೆ ಜನ್ಮ ನೀಡಿದ ಹರ್ಷಿಕಾ

ಬಿಗ್​​ ಬಾಸ್​ ಸೀಸನ್​ 11 ಭಾರೀ ಕುತೂಹಲದಿಂದ ಸಾಗುತ್ತಿದೆ. ದಿನವೂ ಜಗಳ, ಕೂಗಾಟ, ಬರೀ ಕಣ್ಣೀರು ಕಾಣಿಸುತ್ತಿದೆ. ಲಾಯರ್‌ ಜಗದೀಶ್‌ ಬುಧವಾರ ಹಾಗೂ ಗುರುವಾರದ ಎಪಿಸೋಡ್‌ನಲ್ಲಿ ಬೇಕಾಬಿಟ್ಟು ಮಾತನಾಡಿದ್ರು.. ಬಿಗ್‌ ಬಾಸ್‌ ಗೆ ಚಾಲೆಂಜ್‌ ಹಾಕಿ ಕೂಗಾಡಿದ್ರು.. ಬಿಗ್ ಬಾಸ್​ನೇ ಎಕ್ಸ್​ಪೋಸ್ ಮಾಡ್ತೀನಿ ಎಂದಿದ್ದ ಅವರು, ಈಗ ಬಿಗ್ ಬಾಸ್​ನೇ ಖರೀದಿ ಮಾಡೋವರೆಗೂ ಮಾತನಾಡಿದ್ರು.. ಇಷ್ಟೆಲ್ಲಾ ರಂಪಾಟ ಮಾಡಿದ್ದ ಜಗದೀಶ್‌ ಮತ್ತೆ ನಾರ್ಮಲ್‌ ಗೆ ಬಂದಿದ್ದಾರೆ..

ಹೌದು,  ಬಿಗ್​ ಬಾಸ್​ ಕಾರ್ಯಕ್ರಮದ ಯಾವುದೇ ಆವೃತ್ತಿಯಲ್ಲಿ, ಯಾವುದೇ ಸ್ಪರ್ಧಿಯೂ ಈ ರೀತಿಯ ಮಾತುಗಳನ್ನು ಆಡಿರಲಿಲ್ಲ. ಅಷ್ಟು ಹೀನಾಯವಾಗಿ ಲಾಯರ್​ ಜಗದೀಶ್​ ಮಾತನಾಡಿದ್ರು. ‘ಬಿಗ್​ ಬಾಸ್​ಗೆ ಬನ್ನಿ ಅಂತ ನೀವೇ ನನ್ನ ಬಳಿ ಮನವಿ ಮಾಡಿದ್ದು. ನಾನು ಬಂದು ನಿಮ್ಮನ್ನು ಕೇಳಿಲ್ಲ. ಬಿಗ್​ ಬಾಸ್​ಗೆ ಬಂದು ನಾನು ಹೆಸರು ಮಾಡಬೇಕಿಲ್ಲ. ನನ್ನಲ್ಲಿ ಎಷ್ಟು ಕೂದಲು ಇದೆಯೋ ಅಷ್ಟು ಲಕ್ಷ ರೂಪಾಯಿ ಹಣ ನಾನು ನೋಡಿದ್ದೇನೆ. ಪ್ರತಿ ತಿಂಗಳು ನಮ್ಮ ಮನೆಯ ನಾಯಿಗೆ ನಾನು ಒಂದು ಲಕ್ಷ ರೂಪಾಯಿ ಖರ್ಚು ಮಾಡುತ್ತೇನೆ. ಆದರೆ ದೌಲತ್ತು ತೋರಿಸಿಲ್ಲ. ಜನರ ನಡುವೆ ಒಬ್ಬನಾಗಿ ಇರೋಕೆ ಇಷ್ಟಪಟ್ಟಿದ್ದೇನೆ. ಆದರೆ ಈ ಜನರು ನನಗೆ ಹೋಗಲೇ ಅಂದರು. ನಾನು ಇಂದಲ್ಲಾ ನಾಳೆ ಸಿಎಂ ಆಗುವವನು. ನನ್ನನ್ನು ತಡೆಯೋಕೆ ಆಗಲ್ಲ ಎಂದು ಮಾತನಾಡಿದ್ರು.. ಇಷ್ಟೆಲ್ಲಾ ಕೂಡಾಗುತ್ತಿದ್ದನ್ನು ನೋಡಿ ಸಹ ಸ್ಪರ್ಧಿಗಳು ಸೈಲೆಂಟ್‌ ಆಗೇ ನೋಡಿದ್ರು… ಇವರಿಗೆ ಕೊಟ್ಟಿರುವ ಗೌರವವನ್ನು ಇವರೇ ಹಾಳು ಮಾಡಿಕೊಂಡ್ರು ಅಂತಾ ಮಾತಾಡಿಕೊಂಡ್ರು.. ಬಳಿಕ ತನ್ನ ತಪ್ಪಿನ ಅರಿವಾಗಿ ಎಲ್ಲರಿಗೂ ಕ್ಷಮೆ ಕೇಳಿದ್ದಾರೆ.

ಜಗದೀಶ್‌ ಮನೆಯವರ ಜೊತೆ ಸಿಕ್ಕಾಪಟ್ಟೆ ಕಿರಿಕ್‌ ಮಾಡಿಕೊಂಡಿದ್ರು. ಧನರಾಜ್‌ ಆಚಾರ್‌ ಅನ್ನ ತುಂಬಾ ಟಾರ್ಗೆಟ್‌ ಮಾಡಿದ್ರು.. ಆದ್ರೆ ಮರುದಿನ ಬೆಳಗ್ಗೆ ನಾನು ಮಾಡಿದ್ದೆಲ್ಲಾ ಡ್ರಾಮಾ.. ಅಂತಾ ಹೇಳಿದ್ದಾರೆ..

ಹೌದು, ನಾನು ಮಾಡಿದ ಡ್ರಾಮಾದಿಂದ ಬಿಗ್‌ ಬಾಸ್‌ ಗೆ ಟಿಆರ್‌ಪಿ ಚೆನ್ನಾಗಿ ಬಂದಿರುತ್ತೆ.. ಬಿಗ್‌ ಬಾಸ್‌ ಫೇಮಸ್‌ ಆಗಿರುತ್ತೆ.. ನಿಮ್ಮ ಕಡೆಯವರು ಹೇಟ್‌ ಮಾಡಿ ನೋಡಿರ್ತಾರೆ..  ನನ್ನ ಕಡೆಯವರು ಹೇಟ್‌ ಮಾಡ್ತಿರ್ತಾರೆ.. ಜನ ನಮ್ಮನ್ನ ನೋಡ್ಬೇಕು.. ನಾವು ಫೇಮಸ್‌ ಆಗ್ಬೇಕು.. ನೀನು ಎಲ್ಲರ ಪಾಲಿಗೆ ಹೀರೋ ಆದೆ.. ಅದು ಬೇಕಿತ್ತು ಧನರಾಜ್‌ ಅನ್ನ ಹಾಡಿ ಹೊಗಳಿದ್ದಾರೆ.. ಒಟ್ಟಿನಲ್ಲಿ ನಿನ್ನೆ ಬಿಗ್ ಬಾಸ್‌ಗೆ ಚಾಲೆಂಜ್ ಹಾಕಿದ್ದ ಜಗದೀಶ್‌‌ ಅಬ್ಬರ ಒಂದೇ ದಿನಕ್ಕೆ ಠುಸ್ ಪಟಾಕಿಯಾಗಿದೆ.

ನನ್ನ ತಂದೆ ತಾಯಿ ಜತೆ ಅಷ್ಟಾಗಿ ನಾನು ಟೈಮ್‌ ಸ್ಪೆಂಡ್‌ ಮಾಡಕ್ಕೆ ಆಗಿಲ್ಲ. ಆದರೆ ಜಗಳದ ಸಮಯದಲ್ಲಿ ನಾನು ಒಬ್ಬನೇ ಡಿಫೆಂಡ್‌‌ ಮಾಡಿಕೊಂಡೆ ಎಂದು ಕಣ್ಣೀರಿಟ್ಟಿದ್ದಾರೆ ಜಗದೀಶ್‌.. ಇನ್ನು ಈ ವಿಚಾರವಾಗಿ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ಏನು ಹೇಳ್ತಾರೆ ಅಂತ ಕಾದು ನೋಡಬೇಕಿದೆ.

ಇನ್ನು ನರಕ ನಿವಾಸಿಗಳು ಯಾರು ಸ್ವರ್ಗಕ್ಕೆ ಬರಬಾರದು ಎಂಬುದನ್ನ ಕಾರಣ ಕೊಟ್ಟು ಹೇಳಿ ಅಂತಾ ಬಿಗ್‌ ಬಾಸ್‌ ಸ್ವರ್ಗ ನಿವಾಸಿಗಳಿಗೆ ಹೇಳಿದ್ರು.. ಈ ವೇಳೆ ಕೆಲವರು ಚೈತ್ರಾ ಕುಂದಾಪುರ ಅವರನ್ನೇ ಟಾರ್ಗೆಟ್‌ ಮಾಡಿದ್ದಾರೆ.. ನರಕದಲ್ಲಿದ್ದುಕೊಂಡೇ ಆಕೆ ಸ್ವರ್ಗದವರಿಗೆ ನರಕ ತೋರಿಸಿದ್ದಾರೆ.. ಆಕೆಯ ಮಾತುಗಾರಿಕೆ ನಮಗೆ ಕಿರಿ ಕಿರಿ ಅನ್ನಿಸುತ್ತಿದೆ ಅನ್ನೋ ಅರ್ಥದಲ್ಲೇ ಕೆಲವು ಸ್ಪರ್ಧಿಗಳು ಕಾರಣ ಕೊಟ್ಟಿದ್ದಾರೆ. ಇದಕ್ಕೆ ಚೈತ್ರಾ ಕುಂದಾಪುರ ಸರಿಯಾಗೇ ಕೌಂಟರ್‌ ಕೊಟ್ಟಿದ್ದಾರೆ.. ತಾನು ಆಟವನ್ನು ಆಡುತ್ತಿದ್ದೇನೆ.. ನನ್ನ ದಾರಿ ಸರಿಯಾಗೇ ಇದೆ.. ಎದುರಾಳಿ ತಪ್ಪು ಸಂದೇಶ ಬಿಟ್ರೆ ಸತ್ರು ಬಿಡಲ್ಲ ಅಂತಾ ಹೇಳಿದ್ದಾರೆ..

ಒಟ್ಟಿನಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಆರಂಭದಲ್ಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.. ಮೊದಲ ವಾರದಲ್ಲೇ ಸ್ವರ್ಧಿಗಳು ಕಿತ್ತಾಟ ಶುರುಮಾಡ್ಕೊಂಡಿದ್ದಾರೆ. ಇದೀಗ ವೀಕ್ಷಕರು ಕೂಡ ಕಿಚ್ಚನ ಪಂಚಾಯ್ತಿಗೆ ಕಾಯ್ತಾ ಇದ್ದಾರೆ..

Shwetha M

Leave a Reply

Your email address will not be published. Required fields are marked *