ಬಿಗ್ ಬಾಸ್ ನಟ – ನಟಿಯರಿಗೆ ಮಾತ್ರ? – ದೊಡ್ಮನೆಯಲ್ಲಿ ಭಾರೀ ಬದಲಾವಣೆ?
ಏಕಾಏಕಿ ಇಂಥಾ ನಿರ್ಧಾರ ಯಾಕೆ?
ಬಿಗ್ ಬಾಸ್ ಕನ್ನಡ ಸೀಸನ್ 11ಗೆ ಕೌಂಟ್ ಡೌನ್ ಶುರುವಾಗಿದೆ.. ಇದೀಗ ಬಿಗ್ ಬಾಸ್ ಸೀಸನ್ 11 ಗೆ ಯಾರ್ಯಾರು ಬರ್ತಾರೆ ಅನ್ನೋದೇ ಹಾಟ್ ಟಾಪಿಕ್ ಆಗಿದೆ. ಈಗಾಗ್ಲೇ ಸಾಕಷ್ಟು ಮಂದಿಯ ಹೆಸ್ರು ಕೇಳಿ ಬರ್ತಾ ಇದೆ.. ಕೆಲವ್ರು ಈಗಾಗ್ಲೇ ಹರಿದಾಡ್ತಿರೋ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.. ನಾನು ಬಿಗ್ ಬಾಸ್ಗೆ ಬರಲ್ಲ.. ಬಂದಿರೋ ಆಫರ್ ಅನ್ನ ರಿಜೆಕ್ಟ್ ಮಾಡಿದ್ದೀನಿ ಅಂತಾ ಹೇಳಿಕೆ ಕೊಟ್ಟಿದ್ದೂ ಇದೆ. ಇದೀಗ ಮತ್ತೊಂದು ಹಾಟ್ ಟಾಪಿಕ್ ಚರ್ಚೆ ಆಗ್ತಾ ಇದೆ. ಅದೆನಪ್ಪಾ ಅಂದ್ರೆ ಈ ಬಾರಿಯ ಸೀಸನ್ ನಲ್ಲಿ ಬರೀ ನಟ ನಟಿಯರು ಮಾತ್ರ ಇರ್ತಾರಂತೆ.. ಅದು ಬಿಟ್ಟು ಬೇರೆಯವರಿಗೆ ನೋ ಎಂಟ್ರಿ ಅಂತೆ.. ಏನಿದು ಹೊಸ ಸಮಾಚಾರ? ನಟ, ನಟಿಯರು ಬಿಟ್ಟು ದೊಡ್ಮನೆಗೆ ಬೇರೆಯವರಿಗೆ ಯಾಕೆ ಅವಕಾಶ ಇಲ್ಲ? ಇದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ₹100 ಕೋಟಿಗೂ ಕೊಹ್ಲಿ RCB ಬಿಡಲ್ಲ – KING ನಿಷ್ಠೆ & ತ್ಯಾಗ ಎಂಥಾದ್ದು?
ಬಿಗ್ ಬಾಸ್ ಎಂದರೆ ಒಂದು ವರ್ಗದ ಪ್ರೇಕ್ಷಕರಿಗೆ ಸಖತ್ ಇಷ್ಟ. ಈ ಶೋನಲ್ಲಿ ಇರುವಷ್ಟು ಮಸಾಲೆ ಬೇರೆ ಯಾವ ಕಾರ್ಯಕ್ರಮದಲ್ಲಿ ಸಿಗೋದಿಲ್ಲ.. ಬರೀ ವಿವಾದಗಳಿಂದಲೇ ಸದ್ದು ಮಾಡ್ತಾ ಇರುತ್ತೆ ಈ ರಿಯಾಲಿಟಿ ಶೋ.. ಬಿಗ್ ಬಾಸ್ ಸೀಸನ್ 10 ಅಂತೂ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿತ್ತು. ಶೋ ಆರಂಭದಿಂದ ಮುಗಿಯೋ ವರೆಗೂ ಕಾರ್ಯಕ್ರಮ ವಿವಾದಗಳಿಂದಲೇ ಕೂಡಿತ್ತು. ಕೆಲವರು ಜೈಲಿಗೆ ಹೋಗಿ ಬಂದಿದ್ರೆ, ಇನ್ನೂ ಕೆಲವರು ಆಸ್ಪತ್ರೆಗೂ ಹೋಗಿ ಬಂದಿದ್ರು. ಇಷ್ಟೆಲ್ಲಾ ಆಗಿದ್ರು ಕೂಡ ಸೀಸನ್ 10 ಅತ್ಯಂತ ಜನಪ್ರೀಯ ಶೋ ಅಂತಾ ಅನಿಸಿಕೊಂಡಿತ್ತು. ಇದೀಗ ಬಿಗ್ಬಾಸ್ ಕನ್ನಡ ಸೀಸನ್ 11 ಗೆ ಸಿದ್ಧತೆ ಮಾಡಲಾಗ್ತಿದೆ. ಈಗಾಗಲೇ ನೂರಾರು ಜನರ ಟೀಮ್ ಶೋಗೆ ಬೇಕಾದ ತಯಾರಿ ನಡೆಸ್ತಿದೆ. ತೆರೆಮರೆಯಲ್ಲಿ ಸ್ಪರ್ಧಿಗಳ ಆಯ್ಕೆ ಕೂಡ ನಡೆತಾ ಇದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಚರ್ಚೆ ನಡಿತಾ ಇದೆ. ಬಿಗ್ಬಾಸ್ ಸೀಸನ್ 11 ಗೆ ನಟ ನಟಿಯರನ್ನ ಮಾತ್ರ ಕರಿಸಲಾಗ್ತಿದ್ಯಂತೆ.. ಸಾಮಾನ್ಯ ಜನರಿಗೆ ಅವಕಾಶ ಇಲ್ಲ ಅಂತಾ ಕೆಲವರು ಚರ್ಚೆ ಮಾಡ್ತಾ ಇದ್ದಾರೆ.
ಹೌದು, ಕಳೆದ ಸೀಸನ್ ಬರೀ ವಿವಾದಗಳಿಂದ ಸುದ್ದಿಯಾಗಿತ್ತು. ಡ್ರೋನ್ ಪ್ರತಾಪ್ ಬಿಗ್ಬಾಸ್ಗೆ ಬಂದಿರೋದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇನ್ನು ವರ್ತೂರ್ ಸಂತೋಷ್ ಕೂಡ ಜೈಲಿಗೆ ಹೋಗಿ ಬಂದಿದ್ರು.. ಮತ್ತೊಂದು ಕಡೆ ತನಿಷಾ ಕುಪ್ಪಂಡ ಕೂಡ ವಿವಾದಾತ್ಮಕ ಹೇಳಿಕೆ ನೀಡಿ ಕಾನೂನು ಸಂಕಷ್ಟ ಎದುರಿಸಿದ್ರು.. ಅದಾದ ಬಳಿಕ ಬಿಗ್ ಬಾಸ್ ಸ್ಪರ್ಧಿಗಳು ಟಾಸ್ಕ್ವೊಂದ್ರಲ್ಲಿ ಮಾನವೀಯತೆಯನ್ನ ಕೂಡ ಮರೆತಿದ್ರು ಅನ್ನೋ ಆರೋಪ ಕೇಳಿಬಂದಿತ್ತು.. ಇದ್ರಿಂದಾಗಿ ಬಿಗ್ ಬಾಸ್ ಕಾರ್ಯಕ್ರಮ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.. ಸೆಲೆಬ್ರಿಟಿಗಳಾಗಿ ಇಷ್ಟೊಂದು ವಿಕೃತಿ ಮೆರೆಯುತ್ತಿದ್ದಾರೆ.. ಬಿಗ್ಬಾಸ್ ಶೋನ ಬ್ಯಾನ್ ಮಾಡ್ಬೇಕು ಅನ್ನೋ ಕೂಗು ಕೂಡ ಕೇಳಿಬಂದಿತ್ತು.. ಬೀಗ್ಬಾಸ್ ಸೀಸನ್ 10 ವಿವಾದಗಳಿಂದಲೇ ಸುದ್ದಿಯಾಗಿರೋದ್ರಿಂದ ಈ ಬಾರಿಯ ಸ್ಪರ್ಧಿಗಳನ್ನ ಅಳೆದುತೂಗಿ ಆಯ್ಕೆ ಮಾಡಲಾಗುತ್ತಿದೆ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ.
ಬಿಗ್ಬಾಸ್ ರಿಯಾಲಿಟಿ ಶೋ ವಿವಾದಾತ್ಮಕ ಶೋ ಅಂತಾನೇ ಫೇಮಸ್ ಆಗಿದೆ. ವಿಭಿನ್ನ ಮನಸ್ಥಿತಿ, ವಿಭಿನ್ನ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವವರನ್ನೇ ದೊಡ್ಮನೆಗೆ ಕರೆತರಲಾಗುತ್ತೆ.. ಹೀಗಾಗಿ ದೊಡ್ಮನೆಯಲ್ಲಿ ಟಾಸ್ಕ್ ಜೊತೆಗೆ ಸ್ಪರ್ಧಿಗಳ ಕಿತ್ತಾಟ ಕೂಡ ಕಾಮನ್.. ಅವ್ರು ಕಿತ್ತಾಡಿಕೊಂಡಿದ್ರೆ ಟಿಆರ್ಪಿ ಕೂಡ ಹೆಚ್ಚಾಗುತ್ತೆ.. ಆದ್ರೆ, ಈ ಬಾರಿ ದೊಡ್ಮನೆಗೆ ಬರೀ ನಟ ನಟಿಯರನ್ನ ಮಾತ್ರ ಕರೆಸಿಕೊಳ್ಳಲಾಗುತ್ತೆ ಎಂಬ ವಿಚಾರ ಚರ್ಚೆಯಲ್ಲಿದೆ. ನಟ ನಟಿಯರು ಮಾತ್ರ ಇದ್ದರೆ ರಿಯಾಲಿಟಿ ಶೋ ಒಂದ್ ರೇಂಜ್ ಗೆ ಚೆನ್ನಾಗಿಯೂ ಇರುತ್ತೆ. ಜೊತೆಗೆ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ನಟ ನಟಿಯರು ಭೇಟಿಯಾಗ್ತಾನೆ ಇರ್ತಾರೆ. ಹೀಗಾಗಿ ನಟ ನಟಿಯರೇ ಶೋಗೆ ಬಂದ್ರೆ ಲಾಸ್ಟ್ ಟೈಮ್ ಥರಾ ಅನಾವಶ್ಯಕ ಕಿತ್ತಾಟ, ಕಾಂಟ್ರೋವರ್ಸಿ, ಪೊಲೀಸ್ ಕೇಸ್ ಅನ್ನೋ ಉಸಾಬರಿ ಇರೋದಿಲ್ಲ ಅನ್ನೋ ಲೆಕ್ಕಾಚಾರ ಸಾಗ್ತಿದೆ. ಜೊತೆಗೆ ನಟ, ನಟಿಯರು ಮಾತ್ರ ಇದ್ರೆ ವೀಕ್ಷಕರಿಗೂ ಅವರ ಬಗ್ಗೆ ಕ್ಯೂರಿಯಾಸಿಟಿ ಜಾಸ್ತಿನೇ ಇರುತ್ತೆ. ಈ ಪ್ಲ್ಯಾನ್ ವರ್ಕೌಟ್ ಆಗಬಹುದು ಎನ್ನಲಾಗ್ತಿದೆ.
ಇನ್ನು ಬಿಗ್ಬಾಸ್ ಸೀಸನ್ 11 ನಲ್ಲಿ ಸ್ಪರ್ಧಿಸುವ ಸಂಭವನೀಯ ಅನೇಕ ಪಟ್ಟಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕನ್ನಡ ಚಿತ್ರರಂಗದ ಹಿರಿಯ ನಟ ನಿರ್ದೇಶಕ ಎಸ್. ನಾರಾಯಣ್ ಪುತ್ರ ಪಂಕಜ್ ನಾರಾಯಣ್, ಲಕ್ಷ್ಮೀ ಬಾರಮ್ಮ ಸೀರಿಯಲ್ ನಟಿ ತನ್ವಿ ರಾವ್, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸತ್ಯ’ ಧಾರಾವಾಹಿ ಗೌತಮಿ ಜಾಧವ್, ವರುಣ್ ಆರಾಧ್ಯ, ಮಜಾ ಭಾರತ ‘ಗಿಚ್ಚಿ ಗಿಲಿಗಿಲಿ’ ಶೋ ಖ್ಯಾತಿಯ ರಾಘವೇಂದ್ರ, ಕನ್ನಡ ಕಿರುತೆರೆಯಲ್ಲಿ ಬೇಡಿಕೆಯ ನಟಿಯಾಗಿರುವ ಸುಕೃತಾ ನಾಗ್, ರಂಜಿನಿ ರಾಘವನ್, ಮುಂತಾದವರ ಹೆಸರು ಜೋರಾಗಿ ಕೇಳಿ ಬರ್ತಾ ಇದೆ. ಆದ್ರೆ ಬಿಗ್ಬಾಸ್ ರಿಯಾಲಿಟಿ ಶೋ ಟೀಮ್ ಆಗ್ಲೀ, ಕಲರ್ಸ್ ಕನ್ನಡ ಆಗ್ಲೀ.. ಈ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡಲ್ಲ.. ಯಾರು ಶೋನಲ್ಲಿ ಭಾಗವಹಿಸಲಿದ್ದಾರೆ, ಯಾವ ಯಾವ ಕ್ಷೇತ್ರದಲ್ಲಿ ಗುರುತಿಸಿಕೊಂಡವರನ್ನ ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿಲ್ಲ. ಹೀಗಿದ್ದರೂ ಕೆಲವು ಗಾಸಿಪ್ಗಳು ಓಡಾಡುತ್ತಿವೆ. ಅಂತಿಮವಾಗಿ ಬಿಗ್ಬಾಸ್ ಕನ್ನಡ ಸೀಸನ್ ಆರಂಭದ ದಿನ ಭಾಗವಹಿಸುವವರ ಹೆಸರು ಹೊರಬೀಳಲಿದೆ.