ಜಗದೀಶ್‌ ಗೆ ನರಕ ದರ್ಶನ: ಚೈತ್ರ – ಮಾನಸ.. ಮಾತಲ್ಲಿ ಗೆಲ್ಲೋದ್ಯಾರು?
ಕಿಚ್ಚನ ಮಾತಿಗೆ ಹೆದರಿದ್ರಾ ಲಾಯರ್‌?

ಜಗದೀಶ್‌ ಗೆ ನರಕ ದರ್ಶನ: ಚೈತ್ರ – ಮಾನಸ.. ಮಾತಲ್ಲಿ ಗೆಲ್ಲೋದ್ಯಾರು?ಕಿಚ್ಚನ ಮಾತಿಗೆ ಹೆದರಿದ್ರಾ ಲಾಯರ್‌?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ನಲ್ಲಿ ಮೊದಲ ಕಿಚ್ಚನ ಪಂಚಾಯ್ತಿ ನೆರವೇರಿದೆ.. ಬಿಗ್‌ ಬಾಸ್‌ ಕಾರ್ಯಕ್ರಮವನ್ನೇ ಹಾಳು ಮಾಡ್ತೀನಿ ಅಂತಾ ಅವಾಸ್‌ ಹಾಕಿದ್ದ ಜಗದೀಶ್‌ ಗೆ ಸುದೀಪ್‌ ನಯವಾಗೇ ಬುದ್ದಿಮಾತು ಕೂಡ ಹೇಳಿದ್ದಾರೆ. ಹಾಗೇ ಸ್ವರ್ಗವಾಸಿಗಳಿಗೆ ಸದಾ ನರಕ ತೋರಿಸಿದ ಜಗದೀಶ್‌ ಗೆ ಹಂಸ ನರಕ ದರ್ಶನ ಮಾಡಿಸಿದ್ದಾರೆ.. ಚೈತ್ರಾ ಕುಂದಾಪುರ ಹಾಗೂ ಕೆಲ ಸ್ವರ್ಧಿಗಳಿಗೆ ತಮ್ಮ ಅಸ್ತಿತ್ವ ಏನು ಅನ್ನೋದನ್ನ ಕೂಡ ತಿಳಿಸಿಕೊಟ್ಟಿದ್ದಾರೆ ಕಿಚ್ಚ.

ಇದನ್ನೂಓದಿ: ಸಿಎಂ ಬದಲಾವಣೆ ಫಿಕ್ಸ್?‌  – ಕುರ್ಚಿಗಾಗಿ ಕಸರತ್ತು.. ಕೈ ನಾಯಕರ ಸರಣಿ ಸಭೆ ರಹಸ್ಯ ಏನು?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಮೊದಲ ವಾರದಲ್ಲೇ ಜೋರಾಗಿ ಸದ್ದು ಮಾಡುತ್ತಿದೆ. ಲಾಯರ್‌ ಜಗದೀಶ್‌ ಬಿಗ್‌ ಬಾಸ್‌ ಪ್ರೋಗ್ರಾಂ ಹಾಳು ಮಾಡ್ತೀನಿ.. ಆಚೆ ಹೋಗಿ ನೋಡ್ತೀನಿ ಅಂತಾ ಅವಾಸ್‌ ಹಾಕಿದ್ರು.. ಈ ವಾರ ಜಗದೀಶ್‌ ಗೆ ಕಿಚ್ಚನ ಕ್ಲಾಸ್‌ ಪಕ್ಕಾ.. ಸುದೀಪ್‌ ಜಗದೀಶ್‌ ಅನ್ನ ಹೇಗೆ ಹ್ಯಾಂಡಲ್‌ ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಿಗೆ ಇತ್ತು.. ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಜಗದೀಶ್‌ಗೆ ತಮ್ಮದೇ ಸ್ಟೈಲ್‌ನಲ್ಲಿ ಕಿಚ್ಚ ಸುದೀಪ್‌ ಬಿಸಿ ಮುಟ್ಟಿಸಿದ್ದಾರೆ.

ಹೌದು, ಬಿಗ್ ಬಾಸ್‌ ನ ಎಕ್ಸ್‌ಪೋಸ್ ಮಾಡ್ತೀನಿ ಎಂದಿದ್ದ ಜಗದೀಶ್‌.. ಸುದೀಪ್‌ ಮುಂದೆ ಎಕ್ಸ್‌ಪ್ರೆಸ್ ಮಾಡಲಾಗದ ಸ್ಥಿತಿಗೆ ತಲುಪಿದ್ದರು. ಈ ವೇಳೆ ಪ್ರೋಗ್ರಾಂ ಹಾಳು ಮಾಡೋಕೆ ನಿಮ್ಮಪ್ಪರಾಣೆಗೂ ಸಾಧ್ಯವಿಲ್ಲ!  ಕ್ಯಾಮರಾ ಮುಂದೆ ನೀವು ಬಿಗ್ ಬಾಸ್‌ ಗೆ ಚಾಲೆಂಜ್‌ ಮಾಡಿದ್ರಲ್ಲ. ಅದು ತಪ್ಪೇ ಅಲ್ಲ. ದಟ್ ವಾಸ್ ಎ ಜೋಕ್! ಅಂತ ಕಿಚ್ಚ ಸುದೀಪ್ ಮಾತಲ್ಲೇ ತಿವಿದರು.

ಇನ್ನು ಕಿಚ್ಚನ ಪಂಚಾಯಿತಿಯಲ್ಲಿ ಸ್ಪರ್ಧಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಕಿಚ್ಚ, ಸೂಪರ್ ಸಂಡೇ ಎಪಿಸೋಡ್​​ನಲ್ಲಿ ಕಂಟೆಸ್ಟೆಂಟ್​ಗಳ ಕಾಲು ಎಳೆದಿದ್ದಾರೆ. ಬಿಗ್ ಬಾಸ್ ಸೀಸನ್​ 11 ಶುರುವಾಗಿ ವಾರ ಕಳೆದಿದೆ ಅಷ್ಟೇ, ಪ್ರತಿ ಎಪಿಸೋಡ್​ನಲ್ಲೂ ಜಗದೀಶ್​ ಅಬ್ಬರಿಸಿದ್ರು. ಇದೀಗ ಒಂದೇ ವಾರದಲ್ಲಿ ಜಗದೀಶ್ BBK ಸಿನಿಮಾ​ ಟ್ರೈಲರ್ ಔಟ್​ ಆಗಿದೆ, ನೋಡಿದವರು ದಂಗ್ ಆಗಿದ್ದಾರೆ. ಒಂದೇ ವಾರದಲ್ಲಿ ಈ ಹೀರೋಗೆ ಹಾಲಿವುಡ್​ನಿಂದಲೂ ಆಫರ್ ಬರ್ತಿದೆ ಎಂದ ಕಿಚ್ಚ ಜಗದೀಶ್ ಆಟದ ಝಲಕ್ ಇರುವ ಟ್ರೈಲರ್​  ರಿಲೀಸ್ ಮಾಡಿದ್ರು.  ಈ ಟ್ರೈಲರ್‌ ನಲ್ಲಿ ಹೀರೋ, ಫೈಟರ್, ಚಾಲೆಂಜರ್ ಆಗಿ ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಮಿಂಚಿದ್ರು. ಸೈಡಿಗ್ ಹೋಗೋ, ಸೈಡಿಗ್ ಹೋಗೋ ಜಗ್ಗ ಬರ್ತಾವ್ನೆ ಎನ್ನುವ ಪೋಸ್ಟರ್ ಕೂಡ ರಿಲೀಸ್ ಮಾಡಿದ್ರು, ಈ ಪೋಸ್ಟರ್​ನಲ್ಲಿ ಜಗದೀಶ್ ಬಾಹುಬಲಿ ಸಿನಿಮಾ ರೀತಿಯಲ್ಲಿ ಕಲರ್ಸ್‌ ಕನ್ನಡ ಟಿವಿ ಹಿಡಿದು ನಿಂತಿದ್ರು. ಇದನ್ನು ನೋಡಿದ ಜಗದೀಶ್ ಕೂಡ ನಕ್ಕಿದ್ದಾರೆ.

ಬಳಿಕ ಸುದೀಪ್ ಚೈತ್ರಾ ಬಗ್ಗೆ ಮಾತಾಡಿದ್ರು. ನಾನು ಈಗ, ಈ ಮನೆಗೆ ಬಂದ್ಮೇಲೆ ಮಾತಾಡೋದನ್ನ ಕಲೀತಿದ್ದೇನೆ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಚೈತ್ರಾ ಮಾತು ಕೇಳಿ ಸುದೀಪ್ ಕೂಡ ಶಾಕ್ ಆಗಿದ್ದು, ಒಂದು ನಿಮಿಷ ಇರೀ, ಏನ್ ಹೇಳಿದ್ರಿ ನೀವು ಎಂದು ಕಿಚ್ಚ ಮತ್ತೆ ಕೇಳಿದ್ದಾರೆ. ಇದಕ್ಕೆ ಬಿಗ್ ಬಾಸ್ ಮನೆ ಮಂದಿಯೆಲ್ಲಾ ಜೋರಾಗಿ ನಕ್ಕಿದ್ದಾರೆ. ಮತ್ತೆ ಮಾತು ಶುರು ಮಾಡಿದ ಚೈತ್ರಾ, ಹಾಗಲ್ಲ ಸರ್, ಈಗ ನಾನು ಇಲ್ಲಿ ಕೂತು ಮಾತಿನ ಚರ್ಚೆ ಮಾಡ್ತಿದ್ದೇನೆ. ರಂಜಿತ್ ಅಣ್ಣ, ಶಿಶಿರ್ ಅಣ್ಣ ಎಲ್ಲಾ ನನಗೆ ಈಗ ಹೇಗೆ ಮಾತಾಡ್ಬೇಕು ಅಂತ ಹೇಳಿಕೊಡ್ತಿದ್ದಾರೆ ಎಂದು ಚೈತ್ರಾ ಕುಂದಾಪುರ ಹೇಳಿದ್ದು, ಶಾಕ್ ನಲ್ಲಿ ರಂಜಿತ್ ಕಡೆ ನೋಡಿದ ಕಿಚ್ಚ ಸುದೀಪ್ ಇಂಥಾ ಸಾಹಸ ಯಾಕಪ್ಪ ಎಂದಿದ್ದಾರೆ.

ಇನ್ನು ಸೂಪರ್‌ ಹಿಟ್‌, ಪ್ಲಾಪ್‌ ಅನ್ನೋ ಗೇಮ್‌ ಅನ್ನ ಸುದೀಪ್‌ ಆಡ್ಸಿದ್ರು.. ಈ ವೇಳೆ ರಂಜಿತ್‌ ಸೂಪರ್‌ ಹಿಟ್‌ ಬ್ಯಾಡ್ಜ್‌ ಹೆಚ್ಚು ಪಂಡ್ಕೊಂಡ್ರೆ.. ಅತೀ ಹೆಚ್ಚು ಪ್ಲಾಪ್‌ ಅನ್ನ ಜಗದೀಶ್‌ ಪಡೆದುಕೊಂಡ್ರು.. ಆದ್ರೆ ಚೈತ್ರಾ, ಮೋಕ್ಷಿತಾ, ಐಶ್ವರ್ಯ ಯಾವುದೇ ಬ್ಯಾಡ್ಜ್‌ ಪಡ್ಕೊಂಡಿಲ್ಲ.. ಹೀಗಾಗಿ ನಿಮ್ಮ ಅಸಿತ್ವ ಏನು? ರೇಸ್‌ ನಲ್ಲೇ ಇಲ್ಲಾ ಅಲ್ವಾ ಅಂತಾ ಸುದೀಪ್‌ ಎಚ್ಚರಿಸಿದ್ರು.. ಸುದೀಪ್‌ ಎಚ್ಚರಿಸಿದ ಬೆನ್ನಲ್ಲೇ ಚೈತ್ರಾ ಮತ್ತೆ ಮಾತಲ್ಲೇ ಏಟು ಕೊಡಲು ಶುರುಮಾಡಿದ್ದಾರೆ.. ಟಾಸ್ಕ್‌ ವೇಳೆ ಮಾನಸ ಜೊತೆ ಸಿಕ್ಕಪಟ್ಟೆ ಕಿರಿಕ್‌ ಮಾಡಿಕೊಂಡಿದ್ದಾರೆ.

ಇನ್ನು ಹಂಸ ಕ್ಯಾಪ್ಟನ್‌ ಆದ ಬೆನ್ನಲ್ಲೇ ಸ್ಪೆಷಲ್‌ ಪವರ್‌ ಸಿಕ್ಕಿದೆ.. ಈ ಪವರ್‌ ಮೂಲಕ ಹಂಸ ಸ್ವರ್ಗ ನಿವಾಸಿ ಜಗದೀಶ್‌ ಅನ್ನ ನರಕಕ್ಕೆ ಕಳುಹಿಸಿದ್ದಾರೆ. ಕೊಟ್ಟ ಮಾತಿನಂತೆ ರಂಜಿತ್‌ ಅನ್ನ ಸ್ವರ್ಗಕ್ಕೆ ಕರೆತಂದಿದ್ದಾರೆ.. ಇದೀಗ ಸ್ವರ್ಗದಲ್ಲಿ ಕಿಚ್ಚು ಹಚ್ಚಿದ್ದ ಜಗದೀಶ್‌ ನರಕದಲ್ಲಿ ಹೇಗಿರಲಿದ್ದಾರೆ ಅಂತಾ ಕಾದು ನೋಡ್ಬೇಕಿದೆ.

Shwetha M

Leave a Reply

Your email address will not be published. Required fields are marked *