ಬಿಗ್‌ಬಾಸ್ ಮನೆಯಲ್ಲಿ ‘ಹ್ಯಾಪಿ’ ಮರೆಯಾಗಿದೆ – ಕಿತ್ತಾಟ, ಚೀರಾಟ, ಗೆಲ್ಲಲು ಹೋರಾಟ ಮಾಡುವವರಿಂದ ದ್ವೇಷವೇ ದೊಡ್ಡದಾಗಿದೆ

ಬಿಗ್‌ಬಾಸ್ ಮನೆಯಲ್ಲಿ ‘ಹ್ಯಾಪಿ’ ಮರೆಯಾಗಿದೆ – ಕಿತ್ತಾಟ, ಚೀರಾಟ, ಗೆಲ್ಲಲು ಹೋರಾಟ ಮಾಡುವವರಿಂದ ದ್ವೇಷವೇ ದೊಡ್ಡದಾಗಿದೆ

ಟಾಸ್ಕ್ ಅಂದಮೇಲೆ ಕಿತ್ತಾಟ. ಕಿತ್ತಾಟವಿದ್ದಲ್ಲಿ ಚೀರಾಟ. ಚೀರಾಟ ಅಂದ್ಮೇಲೆ ಗೆಲ್ಲೋ ಹೋರಾಟ. ಈ ಪ್ರೋಮೋ ಈಗ ಬಾರಿ ವೈರಲ್ ಆಗುತ್ತಿದೆ. ಆದರೆ, ಬಿಗ್‌ಬಾಸ್ ಮನೆಯಲ್ಲಿ ಬರೀ ಜಗಳ ದ್ವೇಷ ಕಿತ್ತಾಟವೇ ಆದರೆ ಮನರಂಜನೆಗೆ ಜಾಗವೆಲ್ಲಿ ಎಂಬ ಮಾತು ಕೇಳಿಬರುತ್ತಿದೆ. ಈ ಬಾರಿಯ ಬಿಗ್‌ಬಾಸ್ ಶೋನಲ್ಲಿ ಬರೀ ಗೇಲಿ, ಹಾಸ್ಯದ ನೆಪದಲ್ಲಿ ವೈಯಕ್ತಿಕ ದಾಳಿ, ವ್ಯಂಗ್ಯದ ಮಾತೇ ಹೆಚ್ಚಾಗಿದೆ. ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅಷ್ಟೆಲ್ಲಾ ಕಿವಿಹಿಂಡಿದರೂ ಎರಡನೇ ವಾರದಲ್ಲೂ ಅದೇ ಹೀಯಾಳಿಕೆ, ಅದೇ ದ್ವೇಷ, ಸ್ಪರ್ಧೆ ನೆಪದಲ್ಲಿ ಕಿತ್ತಾಟವೇ ಜಾಸ್ತಿಯಾಗಿದೆ.

ಇದನ್ನೂ ಓದಿ: ತುಕಾಲಿ ಸಂತುಗೆ ಮಾತೇ ಮುಳುವಾಗುತ್ತಾ? – ಹಾಸ್ಯ ಮಾಡುವುದನ್ನು ಬಿಟ್ಟು ಗೇಲಿ ಮಾಡುವದರಲ್ಲಿ ಕಾಲ ಕಳೆದ ನಟ

ಈ ಬಾರಿ ಬಿಗ್‌ಬಾಸ್ ಮನೆಗೆ ಕಾಲಿಟ್ಟ ಸ್ಪರ್ಧಿಗಳಿಂದ ಮನರಂಜನೆ ಕಡಿಮೆಯಾಗಿದೆ. ಎಲ್ಲರೂ ಗೆಲ್ಲೋದೇ ನಮ್ಮ ಗುರಿಯೆಂದು ತಾವು ಕಲಾವಿದರು ಎಂಬುದನ್ನು ಕೂಡಾ ಮರೆತಂತೆ ಆಡುತ್ತಿದ್ದಾರೆ. ಕುಟುಂಬದವರ ಜೊತೆ ಟಿವಿ ಮುಂದೆ ಕೂತು ಬಿಗ್‌ಬಾಸ್ ನೋಡಿದರೆ ಅಲ್ಲಿ ಬರೀ ಜಗಳ, ಸಿಟ್ಟು, ಕಣ್ಣೀರು ಮಾತ್ರ ಕಾಣಿಸುತ್ತಿದೆ. ಇನ್ನೂ ಎರಡು ವಾರ ಕೂಡಾ ಕಳೆದಿಲ್ಲ. ಆಗಲೇ ಯಾರ ಕೈ ಮೇಲು ಎಂಬ ಲೆಕ್ಕಾಚಾರ ಜೋರಾಗಿಯೇ ನಡೀತಿದೆ. ಅದರಲ್ಲೂ ಯಾರೂ ಸಿಗದಿದ್ದರೆ ಡ್ರೋನ್ ಪ್ರತಾಪ್ ಮೇಲೆ ಹರಿಹಾಯುವುದನ್ನೂ ಕೆಲವರು ಮರೆತಿಲ್ಲ. ಹಿಂದಿನಿಂದ ಡ್ರೋನ್ ಪ್ರತಾಪ್ ಬಗ್ಗೆ ಗೇಲಿ ಮಾಡಿ ನಗುವುದು. ಎದುರಿನಲ್ಲೂ ಕೇವಲವಾಗಿ ಮಾತನಾಡುವುದು ಈ ವಾರದಲ್ಲೂ ಮುಂದುವರೆದಿದೆ. ಇನ್ನು ಮಂಗಳವಾರದ ಸಂಚಿಕೆಯಲ್ಲಿ ಸಂಗೀತಾ ಶೃಂಗೇರಿಯ ಕಣ್ಣೀರು ಹೈಲೆಟ್ ಆಗಿದೆ. ಇನ್ನು ವಿನಯ್ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ರೌಡಿ ತರ ಆಡುತ್ತಿದ್ದಾರೆ ಎಂಬುದು ಹಲವರ ಆರೋಪ. ಸೋಶಿಯಲ್ ಮೀಡಿಯಾದಲ್ಲೂ ಇದೇ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ. ಅವರ ಆ್ಯಟಿಟ್ಯೂಡ್ ಸರಿ ಇಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಅಕ್ಟೋಬರ್ 17ರ ಎಪಿಸೋಡ್​ನಲ್ಲಿ ಮನೆಯಲ್ಲಿ ದೊಡ್ಡ ಜಗಳ ಆಗಿತ್ತು. ಇದರಲ್ಲಿ ವಿನಯ್ ಪಾಲೂ ಇದೆ. ಅಕ್ಟೋಬರ್ 18ರ ಎಪಿಸೋಡ್​ನಲ್ಲಿ ಅವರು ತನಿಷಾಗೆ ಅವಾಜ್ ಹಾಕಲು ಬಂದಿದ್ದಾರೆ. ಈ ವೇಳೆ ತನಿಷಾ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ. ವಿನಯ್ ಗೌಡ ಅವರು ಮೊದಲು ಕಿತ್ತಾಟ ಮಾಡಿಕೊಂಡಿದ್ದು ಸಂಗೀತಾ ಶೃಂಗೇರಿ ಜೊತೆ. ಸಂಗೀತಾ ಹಾಗೂ ವಿನಯ್ ಒಂದೇ ಧಾರಾವಾಹಿಯಲ್ಲಿ ನಟಿಸಿದ ಹೊರತಾಗಿಯೂ ಇಬ್ಬರೂ ಜಗಳ ಮಾಡಿಕೊಂಡಿದ್ದರು. ಈಗ ಈ ದ್ವೇಷದ ಕಿಡಿ ಕಾಡ್ಗಿಚ್ಚಿನಂತಾಗಿದೆ. ವಿನಯ್ ಹಾಗೂ ಸಂಗೀತಾ ಸಣ್ಣ ವಿಚಾರಕ್ಕೂ ಕಿತ್ತಾಡಿಕೊಳ್ಳುತ್ತಿದ್ದಾರೆ. ಈ ವಾರದ ಟಾಸ್ಕ್ ಆರಂಭ ಆಗಿದ್ದು, ಎರಡು ಟೀಂ ಮಾಡಲಾಗಿದೆ. ಒಂದಕ್ಕೆ ವಿನಯ್ ಕ್ಯಾಪ್ಟನ್ ಆದರೆ, ಮತ್ತೊಂದು ಟೀಂನ ಕಾರ್ತಿಕ್ ಅವರು ಮುನ್ನಡೆಸುತ್ತಿದ್ದಾರೆ. ಮಂಗಳವಾರದ ಟಾಸ್ಕ್​ನ್ನು ವಿನಯ್ ತಂಡ ಗೆದ್ದಿದೆ. ಬುಧವಾರದ ಎಪಿಸೋಡ್​ನ ಪ್ರೋಮೋ ರಿಲೀಸ್ ಮಾಡಲಾಗಿದೆ. ಎರಡೂ ತಂಡದವರಿಗೆ ಹೊಸ ಟಾಸ್ಕ್ ನೀಡಲಾಗಿತ್ತು. ಆಗ ತನಿಷಾ ಅವರು ಮಾತನಾಡಲು ಹೋಗಿದ್ದಾರೆ. ‘ಬೇಡದೆ ಇಲ್ಲದವರ ಮಾತು ಕೇಳಬೇಡಿ ಎಂದು ವಿನಯ್ ಹೇಳಿದ ಮಾತು ತನಿಷಾಗೆ ಕೋಪ ತರಿಸಿದೆ. ಬೇಡದೆ ಇದ್ದವರು ಯಾರೂ ಇಲ್ಲ. ನಾವೇನು ಬಿಕಾರಿಗಳಾ ಎಂದು ಪ್ರಶ್ನೆ ಮಾಡಿದ್ದಾರೆ ತನಿಷಾ. ಅವರ ಖಡಕ್ ಉತ್ತರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.

Sulekha