ಬಂಗಾರಮ್ಮನ ಮನೆ ಸೇರುತ್ತಾಳಾ ಸ್ನೇಹಾ? – ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಇನ್ಮುಂದೆ ಅತ್ತೆ-ಸೊಸೆ ಕಾಳಗ

ಬಂಗಾರಮ್ಮನ ಮನೆ ಸೇರುತ್ತಾಳಾ ಸ್ನೇಹಾ? – ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಇನ್ಮುಂದೆ ಅತ್ತೆ-ಸೊಸೆ ಕಾಳಗ

ಮನಸಾರೆ ಇಷ್ಟ ಪಟ್ಟ ಹುಡುಗ ಮೋಸ ಮಾಡಿದ ಅನ್ನೋದನ್ನ ಒಪ್ಪಿಕೊಳ್ಳೋಕೆ ಆಗ್ತಿಲ್ಲ. ತಾನು ಯಾರನ್ನ ಹೆಚ್ಚಾಗಿ ದ್ವೇಷ ಮಾಡುತ್ತಿದ್ದೆನೋ ಅವರೇ ತನ್ನ ಅತ್ತೆ ಅನ್ನೋದನ್ನ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಬಲವಂತದ ಮದುವೆಗೆ ಕಟ್ಟು ಬಿದ್ದು ಕಂಠಿ ಮನೆಗೆ ಬಂದಿರುವ ಸ್ನೇಹಾ ಈಗ ನಿಜಕ್ಕೂ ಗೊಂದಲದಲ್ಲಿದ್ದಾಳೆ. ತಾಳಿಯನ್ನೇ ಕಿತ್ತೆಸೆಯಲು ಮುಂದಾಗಿದ್ದ ಸ್ನೇಹಾ ಮುಂದೆ ಏನು ಮಾಡಬಹುದು ಅನ್ನೋದು ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ : ರಾಮ್‌ ಚರಣ್‌ ಮಗಳ ಹೆಸರು ಕ್ಲಿಕಾಕೊ! – ವಿಚಿತ್ರ ಹೆಸರಿನ ಅರ್ಥವೇನು ಗೊತ್ತಾ?

ಜೀ ಕನ್ನಡದಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಈಗ ರೋಚಕ ಘಟ್ಟ ತಲುಪಿದೆ. ಪುಟ್ಟಕ್ಕನ ಮಗಳು ಸ್ನೇಹಾ ಹಾಗೂ ಬಂಗಾರಮ್ಮನ ಮಗ ಕಂಠಿ ಪ್ರೀತಿ ಮಾಡುತ್ತಿದ್ದರು. ಸ್ನೇಹಾಗೆ ಬಂಗಾರಮ್ಮನನ್ನು ಕಂಡರೆ ಆಗೋದಿಲ್ಲ. ಅನೇಕ ಬಾರಿ ಇವರಿಬ್ಬರ ಮಧ್ಯೆ ಜಗಳ ಆಗಿದೆ. ಬಂಗಾರಮ್ಮನ ಮಗ ನಾನು ಅಂತ ಗೊತ್ತಾದರೆ ಸ್ನೇಹಾ ಪ್ರೀತಿ ಮಾಡಲ್ಲ ಅಂತ ಕಂಠಿ ಈ ಸತ್ಯವನ್ನು ಮುಚ್ಚಿಟ್ಟಿದ್ದನು. ಕಂಠಿ, ಸ್ನೇಹಾ ಪ್ರೀತಿ ಮಾಡುತ್ತಿರೋದು ಬಂಗಾರಮ್ಮನಿಗೆ ಗೊತ್ತಿತ್ತು. ಹೀಗಾಗಿ ಬಂಗಾರಮ್ಮನೇ ಪುಟ್ಟಕ್ಕನಿಗೆ ನಿನ್ನ ಮಗಳನ್ನು ನನ್ನ ಮಗನಿಂದ ದೂರ ಇಡಬೇಕು ಅಂತ ಮಾತು ತೆಗೆದುಕೊಂಡಿದ್ದಳು. ತಾಯಿ ಪುಟ್ಟಕ್ಕ ಹೇಳಿದ್ದಕ್ಕೆ ಸ್ನೇಹಾ ದೂರ ಮಾಡಿಕೊಂಡಿದ್ದಳು. ಬಂಗಾರಮ್ಮ ಕಂಠಿಗೆ ರಾಧಾ ಜೊತೆ ಮದುವೆ ಮಾಡಲು ರೆಡಿ ಆಗಿದ್ದಳು. ಸ್ನೇಹಾಳಿಂದ ದೂರ ಇರೋಕೆ ಆಗದೆ ಕಂಠಿ ಬಲವಂತವಾಗಿ ಅವಳನ್ನು ಮದುವೆ ಆಗಿದ್ದಾನೆ. ಕಂಠಿ ಹಾಗೂ ಸ್ನೇಹಾ ಬಂಗಾರಮ್ಮನ ಮನೆಗೆ ಬಂದಿದ್ದಾರೆ. ಈಗ ಸ್ನೇಹಾಗೆ ಬಂಗಾರಮ್ಮನ ಮಗ ಕಂಠಿ ಎನ್ನೋದು ಗೊತ್ತಾಗಿದೆ. ಅವಳು ತಾಳಿಯನ್ನು ಕಿತ್ತು ಎಸೆಯಬೇಕು ಎಂದುಕೊಂಡಿದ್ದಾಳೆ.

ಕಂಠಿ ಕಟ್ಟಿದ ತಾಳಿಯನ್ನು ಸ್ನೇಹಾ ತೆಗೆಯಬೇಕು ಎಂದು ತಾಳಿಗೆ ಕೈ ಹಾಕಿದ್ದಾಳೆ. ಆ ವೇಳೆ ಅವಳ ತಾಯಿ ಪುಟ್ಟಕ್ಕನ ಎಂಟ್ರಿಯಾಗಿದೆ. ತಾಳಿ ಕೀಳಲು ಮುಂದಾಗಿದ್ದ ಸ್ನೇಹಾಳ ಕೈ ಹಿಡಿದಿದ್ದಾಳೆ. ಹೀಗಾಗಿ ಪುಟ್ಟಕ್ಕ ತನ್ನ ಮಗಳಿಗೆ ತಾಳಿಯ ಮಹತ್ವ ತಿಳಿಸಿ ತಾಳಿ ಕೀಳದಂತೆ ನೋಡಿಕೊಳ್ಳಬಹುದು. ಹಾಗೂ ಮದುವೆಯಾಗಿದೆ ಅನ್ನೋ ಕಾರಣಕ್ಕೆ ಸ್ನೇಹಾ ಇಷ್ಟವಿಲ್ಲದಿದ್ದರೂ ಬಂಗಾರಮ್ಮನ ಮನೆಯಲ್ಲಿಯೇ ಉಳಿದುಕೊಳ್ಳಬಹುದು. ಸ್ನೇಹಾ ಹಾಗೂ ಬಂಗಾರಮ್ಮ ಒಂದೇ ಮನೆಯಲ್ಲಿ ಉಳಿದುಕೊಂಡರೆ ಜಗಳ ಗ್ಯಾರಂಟಿ. ಹೀಗಾಗಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಹೊಸ ತಿರುವು ಪಡೆಯಲಿದೆ.

 

suddiyaana