ಭಾಗ್ಯ ಮುಂದೆ ಕಣ್ಣೀರು.. ಶ್ರೇಷ್ಠಾ ಜೊತೆ ಕಲ್ಯಾಣ – ತಾಂಡವ್ ಡಬಲ್ ಗೇಮ್ ಗೆ ವೀಕ್ಷಕರು ಶಾಕ್

ಭಾಗ್ಯ ಮುಂದೆ ಕಣ್ಣೀರು.. ಶ್ರೇಷ್ಠಾ ಜೊತೆ ಕಲ್ಯಾಣ – ತಾಂಡವ್ ಡಬಲ್ ಗೇಮ್ ಗೆ ವೀಕ್ಷಕರು ಶಾಕ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಈಗ ಅಚ್ಚರಿಯ ತಿರುವು ಪಡೆದಿದೆ. ಭಾಗ್ಯಳನ್ನ ಕಂಡರೆ ಉರಿದುರಿದು ಬೀಳುತ್ತಿದ್ದ ತಾಂಡವ್ ಈಗ ಅಮ್ಮ ಹಾಗೂ ಪತ್ನಿ ಬಳಿ ಕ್ಷಮೆ ಕೇಳಿದ್ದಾನೆ. ನಾನು ಬದಲಾಗಿದ್ದೀನಿ ಅಂತಾ ನಾಟಕ ಮಾಡುತ್ತಿದ್ದಾನೆ. ಅಸಲಿಗೆ ತಾಂಡವ್ ಇಲ್ಲಿ ಬದಲಾಗಿಲ್ಲ. ಜೊತೆಗೆ ನಾಟಕ ಮಾಡುತ್ತಿದ್ದಾನೆ. ಇದೀಗ ಶ್ರೇಷ್ಠಾಳನ್ನ ಮದುವೆ ಕೂಡ ಮಾಡಿಕೊಂಡಿದ್ದಾನೆ.

ಅಪ್ಪ-ಅಮ್ಮನ ಒತ್ತಾಯಕ್ಕೆ ಮಣಿದು, ತಾಂಡವ್ ಭಾಗ್ಯಳನ್ನು ಮದುವೆಯಾಗಿದ್ದಾನೆ. ಭಾಗ್ಯ 9ನೇ ಕ್ಲಾಸ್ ಓದಿದ್ದು, ಅವನಿಗೆ ಅವಳನ್ನು ಕಂಡರೆ ಇಷ್ಟ ಇಲ್ಲ. ಆಫೀಸ್‌ನಲ್ಲಿ ಕೆಲಸ ಮಾಡುತ್ತಿರುವ ಶ್ರೇಷ್ಠಾ ಜೊತೆ ಪ್ರೀತಿಯಲ್ಲಿ ಬಿದ್ದಿರುವ ತಾಂಡವ್‌ಗೆ ಭಾಗ್ಯಳನ್ನು ಮನೆಯಿಂದ ಹೊರಗಡೆ ಹಾಕಲು ಅವನ ಅಪ್ಪ-ಅಮ್ಮ ಒಪ್ಪಲ್ಲ. ಈಗ ಅವನು ಒಳ್ಳೆಯವರ ರೀತಿ ನಾಟಕ ಮಾಡಿ ಭಾಗ್ಯ ಎನ್ನುವ ಸಮಸ್ಯೆಯಿಂದ ಮುಕ್ತಿ ಪಡೆಯಲು ಯೋಚನೆ ಮಾಡಿದ್ದಾನೆ. ತಾನು ಒಮ್ಮೆ ಬೈದು ಬುದ್ಧಿ ಹೇಳಿದ್ದಕ್ಕೆ ತಾಂಡವ್ ಬದಲಾದ ಅಂತ ಅವನ ತಾಯಿ ಕುಸುಮಾ ನಂಬಿಕೊಂಡು ಕೂತಿದ್ದಾಳೆ. ಇನ್ನೊಂದು ಕಡೆ ಭಾಗ್ಯ ಕೂಡ ತನ್ನ ಗಂಡ ಈಗ ನನ್ನ ಜೊತೆ ಚೆನ್ನಾಗಿದ್ದಾರೆ, ಇಡೀ ಮನೆ ಖುಷಿಯಿಂದ ಇದೆ ಅಂತ ಭ್ರಮೆಯಲ್ಲಿದ್ದಾಳೆ. ಮುಳ್ಳನ್ನು ಮುಳ್ಳಿನಿಂದಲೇ ತೆಗಿಬೇಕು ಅಂತ ತಾಂಡವ್ ಈಗ ಮನೆಯವರ ಬಳಿಯೇ ಡಬಲ್ ಗೇಮ್ ಆಡಲು ಹೊರಟಿದ್ದಾನೆ.

ಇದನ್ನೂ ಓದಿ : ಚಿತ್ರಮಂದಿರಗಳಿಂದ ‘ಆದಿಪುರುಷ್’ ಸಿನಿಮಾಗೆ ಗೇಟ್ ಪಾಸ್ – ಬಾಕ್ಸ್ ಆಫೀಸ್ ನಲ್ಲೂ ಮಕಾಡೆ ಮಲಗಿದ ಚಿತ್ರ

ಶ್ರೇಷ್ಠಾಗೆ ಅವಳಿಷ್ಟದ ತಾಳಿ ಸರ ಖರೀದಿಸಿ ಕೊಟ್ಟು, ಸೀರೆ ಕೊಟ್ಟು ದೇವಸ್ಥಾನದಲ್ಲಿ ಮದುವೆಯಾಗುವ ಪ್ಲ್ಯಾನ್ ಮಾಡಿದ್ದಾನೆ. ಈ ಮದುವೆ ನಿಜಕ್ಕೂ ನಡೆಯತ್ತಾ ಎನ್ನೋದು ಪ್ರಶ್ನೆಯಾಗಿದೆ. ಈ ಮದುವೆ ನಡೆದರೆ ಇನ್ನೊಂದಿಷ್ಟು ಅನಾಹುತ ಆಗುತ್ತದೆ. ಭಾಗ್ಯ ಜೊತೆ ತಾಂಡವ್ ಮನೆಯಲ್ಲಿ ಸಂಸಾರ ಮಾಡುತ್ತಿದ್ದರೂ ಕೂಡ, ತಾಂಡವ್‌ಗೆ ಅವನ ಅಪ್ಪ-ಅಮ್ಮನೇ ಮುಖ್ಯ ಅಂತ ಗೊತ್ತಿದ್ದರೂ ಕೂಡ ಶ್ರೇಷ್ಠ ಅವನ ಜೊತೆ ತಾನು ಮದುವೆ ಆಗಬೇಕು ಅಂತ ಪಣ ತೊಟ್ಟಿದ್ದಾಳೆ. ಈಗ ನಿಜಕ್ಕೂ ಮದುವೆ ಆದರೆ ಅವಳು ಇನ್ನೊಂದಿಷ್ಟು ಸಮಸ್ಯೆ ತಂದಿಡಬಹುದು.

ಮೊದಲ ಪತ್ನಿ ಭಾಗ್ಯಗೆ ವಿಚ್ಛೇದನ ಕೊಡದೆ ಇನ್ನೊಂದು ಮದುವೆ ಆಗೋದು ಕಾನೂನಿನ ಪ್ರಕಾರ ತಪ್ಪು. ಒಂದು ವೇಳೆ ಶ್ರೇಷ್ಠಾಳನ್ನು ತಾಂಡವ್ ಮದುವೆಯಾದರೆ ಭಾಗ್ಯ ಅವನಿಗೆ ಪಾಠ ಕಲಿಸದೆ ಇರಬಹುದು. ಈಗ ಶ್ರೇಷ್ಠಾ ಕತ್ತಲ್ಲಿ ತಾಳಿಯಿದೆ, ತಾಂಡವ್‌ನನ್ನು ಮದುವೆ ಆಗಿದ್ದೇನೆ ಎಂದು ಹೇಳಲು ಶ್ರೇಷ್ಠಾ ಅವಳ ಮನೆಗೆ ಬಂದಿದ್ದಾಳೆ. ತಾಳಿ ಕಟ್ಟಿದ್ದು ನಿಜಾನಾ? ಅಥವಾ ನಾಟಕವೇ ಎಂದು ರಿವೀಲ್ ಆಗಬೇಕಿದೆ. ಶ್ರೇಷ್ಠಾ ಮನೆಯವರು ಮದುವೆ ಮದುವೆ ಅಂತ ಪೀಡಿಸದಿರಲಿ ಅಂತ ಹೀಗೆ ಮಾಡಿದ್ದಾರಾ ಅನ್ನೋದು ಕೂಡ ಗೊತ್ತಿಲ್ಲ. ಮನೆ ಮರ್ಯಾದೆ ಹಾಳುಮಾಡಬಾರದು, ತಾಳಿ ಕಟ್ಟಿದ ಗಂಡನಿಗೆ ನೋವು ಕೊಡಬಾರದು ಅಂತ ಭಾಗ್ಯ ಅವಳೇ ಸುಮ್ಮನಾಗಬಹುದು. ಭಾಗ್ಯ ಓದುತ್ತಾಳೆ, ಓದಿ ತಾಂಡವ್‌ಗೆ ಸರಿಸಮಾನವಾಗಿ ನಿಲ್ಲುತ್ತಾಳೆ ಅಂತ ಕುಸುಮಾ ಜಂಬ ಕೊಚ್ಚಿಕೊಂಡು ಬರುತ್ತಿದ್ದಾಳೆ. ಇನ್ಮುಂದೆ ಓದಿನ ಕಥೆ ಏನಾಗಲಿದೆ ಅಂತ ಕಾದು ನೋಡಬೇಕಿದೆ. ​

suddiyaana