ಜೈದೇವ್‌ ನ ಮೋಸದಾಟ ಅಂತ್ಯ.. ನ್ಯಾಯದ ಪರ ನಿಂತ ಭೂಮಿಕಾ – ನಿಂತೇ ಹೋಯ್ತಾ ಮದುವೆ?

ಜೈದೇವ್‌ ನ ಮೋಸದಾಟ ಅಂತ್ಯ.. ನ್ಯಾಯದ ಪರ ನಿಂತ ಭೂಮಿಕಾ – ನಿಂತೇ ಹೋಯ್ತಾ ಮದುವೆ?

ಅಮೃತಧಾರೆ ಸೀರಿಯಲ್‌ ದಿನದಿಂದ ದಿನಕ್ಕೆ ರೋಚಕ ಹಂತಕ್ಕೆ ತಲುಪುತ್ತಿದೆ. ಸೀರಿಯಲ್‌ ಮದುವೆ ಸಂಭ್ರಮ ಮನೆಮಾಡಿದ್ದು, ಮನೆ ಮಂದಿ ಮದುವೆ ಶಾಸ್ತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ಇತ್ತ ಮದುಮಗಳು ಅಪೇಕ್ಷಾ ಮುಖದಲ್ಲಿ ಸ್ವಲ್ಪವೂ ಖುಷಿಯಿಲ್ಲ. ಅವಳ ಮನಸ್ಸೆಲ್ಲವೂ ಪ್ರಿಯಕರ ಪಾರ್ಥನ ಮೇಲೆಯೇ ಇದೆ. ಅಪೇಕ್ಷಾ ಮನೆಯವರ ಒಳಿತಿಗಾಗಿ ಮದುಮಗಳಾಗಿದ್ದು, ಪಾರ್ಥನಿಂದ ದೂರ ಇರಬೇಕಲ್ಲ ಎಂಬ ಚಿಂತೆಯಲ್ಲಿ ಮುಳುಗಿದ್ದಾಳೆ. ಇತ್ತ ಮದುಮಗ ಜೈದೇವ್‌ ಮಲ್ಲಿಗೆ ಮೋಸ ಮಾಡಿ ಮುಗ್ಧನಂತೆ ಎಲ್ಲರ ಎದುರು ನಟಿಸುತ್ತಿದ್ದಾನೆ.

ಇದನ್ನೂ ಓದಿ: ರೀಲ್ಸ್ ತುಂಬಾ ರಾಹುಲ್ಲನದ್ದೇ ಹವಾ – ಬೆಳ್ಳುಳ್ಳಿ ಕಬಾಬ್ ಕ್ರೇಜ್ ಹೇಗಿದೆ?

ಇತ್ತ ಜೈದೇವನ ಮೋಸದ ಬಗ್ಗೆ ತಿಳಿದ ಶಕುಂತಲಾ  ಮಗ ಜೈದೇವ್‌ ಬಗ್ಗೆ ಎಲ್ಲವನ್ನೂ ತಿಳಿದಿದ್ದರೂ ಏನು ಗೊತ್ತಿಲ್ಲದ ಹಾಗೆ ಭೂಮಿಕಾ ಮುಂದೆ ಇದ್ದಳು. ಶಕುಂತಲಾಗೆ ಅಪೇಕ್ಷಾ ಜೊತೆಗೆ ಜೈದೇವನ ಮದುವೆಯ ನಡೆಯಲೇಬೇಕು. ಇದು ದಿವಾನ್ ಕುಟುಂಬದ ಪ್ರೆಸ್ಟೀಜ್ ಪ್ರಶ್ನೆಯಾಗಿದೆ. ಈ ಮದುವೆ ಯಾವುದೇ ಕಾರಣಕ್ಕೂ ನಿಲ್ಲಬಾರೆಂಬುದು ಶಕುಂತಲಾ ಬಯಸುತ್ತಿದ್ದಾಳೆ. ಇನ್ನೊಂದೆಡೆ ಭೂಮಿಕಾಗೆ ಈ ಮದುವೆ ನಡೆಯುವುದು ಇಷ್ಟವಿರುವುದಿಲ್ಲ. ಜೈದೇವ ಮಾಡಿರುವ ತಪ್ಪಿನಿಂದ ಇಬ್ಬರು ಹೆಣ್ಣು ಮಕ್ಕಳ ಬಾಳಿಗೆ ತೊಂದರೆಯಾಗುತ್ತದೆ ಎಂದು ಯೋಚಿಸುತ್ತಿರುವಾಗಲೇ ಜೈದೇವ್‌ ಬಾಯಿಯಿಂದಲೇ ಸತ್ಯ ಹೊರ ಬಂದಿದೆ.

ಜೈದೇವ್‌ ರೂಮ್‌ ನಲ್ಲಿ ಮದುವೆಗೆ ರೆಡಿಯಾಗುತ್ತಿರುತ್ತಾನೆ. ಈ ವೇಳೆ ತನ್ನ ಮಾವ ಲಕ್ಷ್ಮೀಕಾಂತನ ಜೊತೆಗೆ ಮಲ್ಲಿ ವಿಚಾರವನ್ನು ಮಾತನಾಡಿ ಎಡವಟ್ಟು ಮಾಡಿಕೊಂಡಿದ್ದಾನೆ. ಮಲ್ಲಿ ಹೊಟ್ಟೆಯಲ್ಲಿರುವ ಮಗುವಿಗೆ ನಾನೇ ಕಾರಣ. ಇದು ಸುಳ್ಳಾಗುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾನೆ. ಇದನ್ನ ಭೂಮಿಕಾ ಕೇಳಿಸಿಕೊಂಡಿದ್ದಾಳೆ. ಮತ್ತೊಂದೆಡೆ ಮದುವೆ ಮಂಟಪದಲ್ಲಿ ತಾಳಿ ಕಟ್ಟಲು ಹೊರಟಿದ್ದ ಜೈದೇವ್​ ಕುತ್ತಿಗೆಗೆ ಮಲ್ಲಿಯ ಅಜ್ಜ ಕುಡುಗೋಲು ಇಟ್ಟಿದ್ದಾರೆ. ಈ ವೇಳೆ ಭೂಮಿಕಾ ಎಂಟ್ರಿ ಕೊಟ್ಟಿದ್ದು ಮುಂದೇನಾಗುತ್ತೆ? ಮದುವೆ ನಿಂತೇ ಬಿಟ್ಟಿತಾ ಅಂತಾ ವೀಕ್ಷಕರು ಕುತೂಹಲದಿಂದ ನೋಡ್ತಿದ್ದಾರೆ.

Shwetha M