ಇವ್ರ ಹಾವಳಿ ಶುರು, ಇವ್ರಿಗೆ ಯಾರ್ ಬೀಳ್ತಾರೆ ಗುರು..! – ‘ಜೀ ಕನ್ನಡ’ ವಾಹಿನಿಯಲ್ಲಿ ‘ಭರ್ಜರಿ ಬ್ಯಾಚುಲರ್ಸ್’ ಹವಾ

ಇವ್ರ ಹಾವಳಿ ಶುರು, ಇವ್ರಿಗೆ ಯಾರ್ ಬೀಳ್ತಾರೆ ಗುರು..! – ‘ಜೀ ಕನ್ನಡ’ ವಾಹಿನಿಯಲ್ಲಿ ‘ಭರ್ಜರಿ ಬ್ಯಾಚುಲರ್ಸ್’ ಹವಾ

ಇನ್ನು ಮುಂದೆ ವೀಕೆಂಡ್‌ನಲ್ಲಿ ಬ್ಯಾಚುಲರ್ ಹುಡುಗರ ಬಯೋಡಾಟಾ ಕನ್ನಡಿಗರ ಮುಂದೆ ಬರಲಿದೆ. ಜೂನ್ 24ರ ಶನಿವಾರ ರಾತ್ರಿ 9 ಗಂಟೆಗೆ ‘ಜೀ ಕನ್ನಡ’ ವಾಹಿನಿಯಲ್ಲಿ ಈ ರಿಯಾಲಿಟಿ ಶೋ ಆರಂಭ ಆಗಲಿದೆ.  ‘ಭರ್ಜರಿ ಬ್ಯಾಚುಲರ್ಸ್’ ಎಂಬುದು ಈ ಕಾರ್ಯಕ್ರಮದ ಹೆಸರು. ಇದು ಮದುವೆ ಆಗದೇ ಇರುವ ಹುಡುಗರಿಗೆ ಸಂಬಂಧಿಸಿದ ಕಾರ್ಯಕ್ರಮ. ಈ ಶೋ ಮೂಲಕ ಜೀ ಕನ್ನಡ ವಾಹಿನಿ ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಮದುವೆಯ ವಯಸ್ಸಿಗೆ ಬಂದ ಹದಿಹರೆಯದ ಹುಡುಗರಿಗೆ ಸಮಾಜದಲ್ಲಿ ಏನೆಲ್ಲ ತೊಂದರೆ ಎದುರಾಗುತ್ತಿದೆ ಎಂಬುದನ್ನು ಆಧಾರವಾಗಿ ಇಟ್ಟುಕೊಂಡು ಈ ರಿಯಾಲಿಟಿ ಶೋ ತೆರೆ ಮೇಲೆ ಬರಲಿದೆ.

ಇದನ್ನೂ ಓದಿ: ವಧುವಿನ ಮನೆಗೆ ವರನ ಕಡೆಯಿಂದ 15 ಟ್ರ್ಯಾಕ್ಟರ್‌ಗಳಲ್ಲಿ ಬಂತು ಉಡುಗೊರೆ – 500 ಗಿಫ್ಟ್ ನೋಡಿ ಸಂಭ್ರಮಿಸಿದ ಮದುಮಗಳು..!

ಕನ್ನಡ ಕಿರುತೆರೆ ವಾಹಿನಿಗಳ ನಡುವೆ ರಿಯಾಲಿಟಿ ಶೋಗಳ ವಿಚಾರದಲ್ಲಿ ಪೈಪೋಟಿ ಜೋರಾಗಿದೆ. ಭಿನ್ನವಾದ ಕಾನ್ಸೆಪ್ಟ್‌ಗಳಲ್ಲಿ ರಿಯಾಲಿಟಿ ಶೋಗಳು ಈಗ ಬರುತ್ತಿವೆ. ಇದೀಗ ‘ಭರ್ಜರಿ ಬ್ಯಾಚುಲರ್ಸ್’ ಕೂಡಾ ಹೊಸ ಕಾನ್ಸೆಪ್ಟ್‌ ಜೊತೆಗೆ ತೆರೆ ಮೇಲೆ ಬರಲಿದೆ. ಬೇರೆ ಬೇರೆ ವಾಹಿನಿಗಳಲ್ಲಿ ತಮ್ಮದೇ ಆದ ಅಭಿಮಾನಿಬಳಗ ಹೊಂದಿರುವ, ತಮ್ಮದೇ ಆದ ಟ್ಯಾಲೆಂಟ್ ತೋರಿಸಿರುವ ಕೆಲವು ಬ್ಯಾಚುಲರ್‌ಗಳನ್ನು ಒಂದೆಡೆ ಸೇರಿಸಿ ಅವರನ್ನ ಬ್ಯಾಚುಲರ್ ಬದುಕಿನಿಂದ ಮದುವೆಗೆ ಎಲಿಜಿಬಲ್ ಮಾಡಿಸುವ ಪ್ರಯತ್ನವೇ ಈ ಹೊಸ ರಿಯಾಲಿಟಿ ಶೋನ ಮುಖ್ಯ ಕಾನ್ಸೆಪ್ಟ್.

ಫೇಮಸ್ ನಿರೂಪಕ ಅಕುಲ್ ಬಾಲಾಜಿ ‘ಭರ್ಜರಿ ಬ್ಯಾಚುಲರ್ಸ್’ ರಿಯಾಲಿಟಿ ಶೋವನ್ನು ನಿರೂಪಣೆ ಮಾಡುತ್ತಿರುವುದು ಕೂಡಾ ಪ್ಲಸ್ ಪಾಯಿಂಟ್. ಕರುನಾಡಿಗೆ ಪ್ರೀತಿ-ಪ್ರೇಮದ ಪಾಠ ಹೇಳಿಕೊಟ್ಟ ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರು ಈ ರಿಯಾಲಿಟಿ ಶೋನಲ್ಲಿ ಲವ್ ಗುರು ಆಗಿ ಪಡ್ಡೆ ಹುಡುಗರನ್ನ ತಿದ್ದಿತೀಡುವ ಕೆಲಸ ಮಾಡಲಿದ್ದಾರೆ. ಹಾಗೆಯೇ, ನಟಿ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಅವರು ಬ್ಯಾಚುಲರ್ಸ್ ಪಾಲಿನ ಕನಸಿನ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಜೂನ್ 24ರ ಶನಿವಾರ ರಾತ್ರಿ 9 ಗಂಟೆಗೆ ‘ಜೀ ಕನ್ನಡ’ ವಾಹಿನಿಯಲ್ಲಿ ಈ ರಿಯಾಲಿಟಿ ಶೋ ಆರಂಭ ಆಗಲಿದೆ.

suddiyaana