ವೈಷ್ಣವ್​ಗೆ ಮದುವೆ ಇಷ್ಟವಿಲ್ಲ ಅನ್ನೋದು ಲಕ್ಷ್ಮೀಗೆ ಗೊತ್ತಾಯ್ತು – ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್!

ವೈಷ್ಣವ್​ಗೆ ಮದುವೆ ಇಷ್ಟವಿಲ್ಲ ಅನ್ನೋದು ಲಕ್ಷ್ಮೀಗೆ ಗೊತ್ತಾಯ್ತು – ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಈಗ ರೋಚಕ ಘಟ್ಟ ತಲುಪಿದೆ. ಲಕ್ಷ್ಮೀ ಹಾಗೂ ವೈಷ್ಣವ್ ಮದುವೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಕೀರ್ತಿಯನ್ನ ಮನಸಾರೆ ಪ್ರೀತಿಸುತ್ತಿರೋ ವೈಷ್ಣವ್​ಗೆ ಲಕ್ಷ್ಮೀ ಜೊತೆ ಮದುವೆಯಾಗಲು ಇಷ್ಟವಿಲ್ಲ. ಆದರೆ ಇಬ್ಬರ ಕುಟುಂಬಸ್ಥರು ಇಬ್ಬರ ಮದುವೆ ಮಾಡಿ ಮುಗಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ.

ಇದನ್ನೂ ಓದಿ : 67ನೇ ವಯಸ್ಸಿನಲ್ಲಿ ಬಿಲ್ ಗೇಟ್ಸ್ ಡೇಟಿಂಗ್ – ಪೌಲಾ ಹರ್ಡ್ ಜೊತೆ ಪ್ರೀತಿಯಲ್ಲಿ ಬಿದ್ದ ಬಿಲೇನಿಯರ್

ಕೀರ್ತಿಯನ್ನ ವೈಷ್ಣವ್ ಮನಸಾರೆ ಪ್ರೀತಿಸುತ್ತಿದ್ದು, ಇಬ್ಬರೂ ಕೂಡ ಇನ್ನೇನು ನಿಶ್ಚಿತಾರ್ಥ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಕೀರ್ತಿ ಬ್ರೇಕಪ್ ಮಾಡಿಕೊಳ್ಳುತ್ತಾಳೆ. ಆದ್ರೆ ಕೀರ್ತಿ ಹೀಗ್ಯಾಕೆ ನಿರ್ಧಾರ ಮಾಡಿದ್ಲು ಅನ್ನೋ ಕಾರಣ ಮಾತ್ರ ಈವರೆಗೂ ವೈಷ್ಣವ್​ಗೆ ಗೊತ್ತಾಗಿಲ್ಲ. ಇದೇ ಗೊಂದಲದಲ್ಲಿರುವ ವೈಷ್ಣವ್​ಗೆ ಮುಂದೇನು ಮಾಡಬೇಕು ಅನ್ನೋದು ಗೊತ್ತಾಗ್ತಿಲ್ಲ. ಆದ್ರೆ ಇದೇ ಸಮಯದಲ್ಲಿ ವೈಷ್ಣವ್ ತಾಯಿ ಕಾವೇರಿ ಎಮೋಷನಲ್ ಆಗಿ ಮಾತಾಡಿ ಮಗನ ಮದುವೆ ಮಾಡಿ ಮುಗಿಸಲು ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ.

ಕೀರ್ತಿ ಮೇಲಿನ ಸಿಟ್ಟಿಗೆ ವೈಷ್ಣವ್ ‘ನೀವು ತೋರಿಸಿದ ಹುಡುಗಿಯನ್ನೇ ಮದುವೆಯಾಗುತ್ತೇನೆ’ ಎಂದು ತಂದೆ ಕೃಷ್ಣಕಾಂತ್ ಹಾಗೂ ತಾಯಿ ಕಾವೇರಿ ಮುಂದೆ ಹೇಳಿದ್ದ. ಕೂಡಲೇ ಕಾವೇರಿ ಹಾಗೂ ಸಹೋದರಿ ಕುಸುಮಾ ಸೇರಿ ವೈಷ್ಣವ್ – ಲಕ್ಷ್ಮೀ ಮದುವೆ ಫಿಕ್ಸ್ ಮಾಡಿದ್ದರು. ಮತ್ತೊಂದೆಡೆ ವೈಷ್ಣವ್ ಹಾಗೂ ಲಕ್ಷ್ಮೀ ಮೀಟ್ ಆಗುವ ವೇಳೆ ಸುಪ್ರೀತಾ ಬೇಕು ಅಂತಲೇ ಎಡವಟ್ಟು ಮಾಡಿದ್ದಳು. ಲಕ್ಷ್ಮೀಗೆ ಸುಪ್ರೀತಾ ಅವಮಾನ ಮಾಡಿದಳು. ಹೀಗಾಗಿ ವೈಷ್ಣವ್ ಲಕ್ಷ್ಮೀಗೆ ಕ್ಷಮೆ ಕೇಳುವ ಸಲುವಾಗಿ ಸೀರೆ, ಬಳೆ, ಅರಿಶಿನ, ಕುಂಕುಮ, ಹೂವು ನೀಡಿದ್ದ. ಇದೇ ಸಮಯವನ್ನ ಸದುಪಯೋಗ ಪಡಿಸಿಕೊಂಡ ಕಾವೇರಿ ಹಾಗೂ ಕುಸುಮಾ, ಲಕ್ಷ್ಮೀ ಫ್ಯಾಮಿಲಿ ಜೊತೆ ತಾಂಬೂಲ ಬದಲಿಸಿಕೊಂಡು, ವಧು ಲಕ್ಷ್ಮೀಗೆ ಹೂವು ಮುಡಿಸುವ ಶಾಸ್ತ್ರವನ್ನೂ ಮುಗಿಸಿಬಿಟ್ಟರು. ಸದ್ಯ ಕುಸುಮಾ ಹಾಗೂ ಕಾವೇರಿಯ ಎಮೋಷನಲ್ ಬ್ಲಾಕ್‌ಮೇಲ್‌ಗೆ ವೈಷ್ಣವ್ ಸಿಲುಕಿದ್ದಾನೆ. ಹೀಗಾಗಿ, ಪರಿಸ್ಥಿತಿಯನ್ನ ವಿವರಿಸಿ ಲಕ್ಷ್ಮೀಗೆ ವೈಷ್ಣವ್ ಪತ್ರ ಬರೆದಿದ್ದಾನೆ. ವೈಷ್ಣವ್‌ಗೆ ಗೊತ್ತಿಲ್ಲದೆ ಅದೇ ಪತ್ರದಲ್ಲಿ ಸುಪ್ರಿತಾ ಎಕ್ಸ್‌ಟ್ರಾ ಫಿಟ್ಟಿಂಗ್ ಸೇರಿಸಿ ಲಕ್ಷ್ಮೀಗೆ ಪತ್ರವನ್ನ ತಲುಪಿಸಿದ್ದಾಳೆ. ಪತ್ರವನ್ನ ಓದಿದ ಲಕ್ಷ್ಮೀ ಕಣ್ಣೀರು ಹಾಕಿದ್ದಾಳೆ. ಹೀಗಾಗಿ ಲಕ್ಷ್ಮೀ ವೈಷ್ಣವ್​ನನ್ನ ಮದುವೆಯಾಗಲು ಒಪ್ಪುತ್ತಾಳಾ, ಇಲ್ವಾ ಅನ್ನೋ ಕುತೂಹಲ ಮೂಡಿದೆ.

ಸದ್ಯ ಕನ್ನಡತಿ ಸೀರಿಯಲ್ ಮುಗಿದ ಬಳಿಕ ಕಲರ್ಸ್ ಕನ್ನಡದಲ್ಲಿ ಸಂಜೆ 7ಗಂಟೆಯಿಂದ ರಾತ್ರಿ 8ರವರೆಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಮಹಾಸಂಚಿಕೆ ಪ್ರಸಾರವಾಗುತ್ತಿದೆ. ಮಹಾಸಂಚಿಕೆಯ ಅವಧಿಯಲ್ಲೇ ವೈಷ್ಣವ್ ಹಾಗೂ ಲಕ್ಷ್ಮೀ ಮದುವೆ ನಡೆಯುತ್ತಾ ಇಲ್ವಾ ಅನ್ನೋ ಸಂಚಿಕೆಗಳು ಪ್ರಸಾರವಾಗಲಿವೆ.

 

suddiyaana