ಶ್ರೇಷ್ಠಗೆ ಗುಡ್‌ಬೈ ಹೇಳಿದ ತಾಂಡವ್‌! – ಬಿಗ್‌ಬಾಸ್ ಗಾಗಿ ಮುಗಿಯುತ್ತಾ ಭಾಗ್ಯಲಕ್ಷ್ಮೀ ಸೀರಿಯಲ್?‌

ಶ್ರೇಷ್ಠಗೆ ಗುಡ್‌ಬೈ ಹೇಳಿದ ತಾಂಡವ್‌! – ಬಿಗ್‌ಬಾಸ್ ಗಾಗಿ ಮುಗಿಯುತ್ತಾ ಭಾಗ್ಯಲಕ್ಷ್ಮೀ ಸೀರಿಯಲ್?‌

ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭಕ್ಕೆ ಕೌಂಟ್​ಡೌನ್ ಶುರುವಾಗಿದೆ. ಕನ್ನಡದ ಬಾದ್ ಶಾ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್​ಬಾಸ್ ಶೋ ನೋಡಲು ಕರುನಾಡೇ ಕಾತರದಿಂದ ಕಾಯ್ತಿದೆ. ಅಕ್ಟೋಬರ್ 8 ರ ಸಂಜೆ 6 ಗಂಟೆಗೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಗ್ರ್ಯಾಂಡ್ ಓಪನಿಂಗ್ ಸಿಗಲಿದೆ. ಸೀಸನ್ 10ರ ದೊಡ್ಮನೆಗೆ ಸಿನಿಮಾ ಸ್ಟಾರ್ಸ್ ಬರ್ತಾರಾ, ಸೀರಿಯಲ್ ಸೆಲೆಬ್ರಿಟೀಸ್ ಇರ್ತಾರಾ, ಅಥವಾ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರೋರನ್ನ ಕರೆಸ್ತಾರಾ ಅನ್ನೂ ಕ್ಯೂರಿಯಾಸಿಟಿ ಇದೆ. ಈಗಾಗಲೇ 100 ದಿನದ ಹಬ್ಬ ಎನ್ನುವ ಪ್ರೋಮೋಗಳು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಎಲ್ಲೆಡೆ ಬಿಗ್​ಬಾಸ್ ಫೀವರ್ ಶುರುವಾಗಿದೆ.. ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ 9:30ರಿಂದ 11 ಗಂಟೆವರೆಗೆ ಅಂದ್ರೆ ಒಂದೂವರೆ ಗಂಟೆಗಳ ಕಾಲ ಕಾರ್ಯಕ್ರಮ ಪ್ರಸಾರವಾಗಲಿದೆ. ಆದ್ರೆ ಬಿಗ್​ಬಾಸ್ ಬರ್ತಿದೆ ಅಂತಾ ಖುಷಿಯಾಗಿರೋ ಅಭಿಮಾನಿಗಳಿಗೆ ಬೇಜಾರೂ ಆಗ್ತಿದೆ.. ಯಾಕಂದ್ರೆ ಇಷ್ಟು ದಿನ ಮನರಂಜನೆ ನೀಡ್ತಿದ್ದ ಕೆಲ ಧಾರಾವಾಹಿಗಳೂ ಮುಕ್ತಾಯವಾಗಿವೆ.. ಅದ್ರಲ್ಲೂ ಮೊದಲ ದಿನದಿಂದಲೇ ಜನಮನ ಗೆದ್ದಿರುವ ಭಾಗ್ಯಲಕ್ಷ್ಮೀ ಸೀರಿಯಲ್​ ಕೂಡ ಮುಗಿಯಿತಾ ಅನ್ನೋ ಅನುಮಾನ ಶುರುವಾಗಿದೆ.. ತಾಂಡವ್ ಈಗ ಒಳ್ಳೆಯವನಾಗಿದ್ದು ಬಿಗ್​ಬಾಸ್​ಗಾಗಿ ಭಾಗ್ಯಲಕ್ಷ್ಮೀ ಧಾರಾವಾಹಿ ಕೂಡಾ ಮುಗಿಯುತ್ತಾ ಎಂಬ ಪ್ರಶ್ನೆ ಎದುರಾಗಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ ಭಾಗ್ಯಲಕ್ಷ್ಮೀ ಸೀರಿಯಲ್ ಮನೆ ಮಾತಾಗಿದೆ. ಭಾರತದ ಇತಿಹಾಸದಲ್ಲೇ ಯಾರೂ ಮಾಡಿರದ ಸಾಹಸವನ್ನ ಈ ಧಾರಾವಾಹಿಯಲ್ಲಿ ಮಾಡಲಾಗಿತ್ತು. ಅಕ್ಕತಂಗಿಯ ಅನುಬಂಧದ ಮೂಲಕ ಆರಂಭವಾದ ಈ ಕಥೆ ನಂತರದಲ್ಲಿ ಇಬ್ಭಾಗವಾಗಿತ್ತು. ಒಂದು ಕಡೆ ಭಾಗ್ಯಳ ಕಥೆಯಾದ್ರೆ ಮತ್ತೊಂದೆಡೆ ಲಕ್ಷ್ಮೀಯ ಮದುವೆ ಮೂಲಕ ಸೀರಿಯಲ್ ಬೇರ್ಪಟ್ಟಿತ್ತು. ಈ ಎರಡೂ ಧಾರಾವಾಹಿಗಳು ಈಗ ಕಿರುತೆರೆ ಲೋಕದಲ್ಲಿ ಅಪಾರ ಅಭಿಮಾನಿಗಳನ್ನ ಸಂಪಾದಿಸಿವೆ. ಭಾಗ್ಯಲಕ್ಷ್ಮಿ ಸೀರಿಯಲ್ ಗಾಗಿಯೇ ಕಾದು ನೋಡುವಂತಹ ಅಭಿಮಾನಿಗಳಿದ್ದಾರೆ. ಟಿಆರ್​ಪಿ ರೇಸ್​ನಲ್ಲೂ ಟಾಪ್​ನಲ್ಲಿರುವ  ಭಾಗ್ಯಲಕ್ಷ್ಮೀ ಸೀರಿಯಲ್ ಇದ್ದಕ್ಕಿದ್ದಂತೆ ಮುಗಿಯುತ್ತಾ ಅನ್ನೋ ಚರ್ಚೆ ಶುರುವಾಗಿದೆ. ವಿಭಿನ್ನ ಕಥಾಹಂದರದ ಮೂಲಕ ಜನರ ಮುಂದೆ ಬಂದಿದ್ದ ಈ ಸೀರಿಯಲ್ ಜನಜೀವನಕ್ಕೆ ಬೇಗ ಹತ್ತಿರವಾಗಿತ್ತು. ತಾನೇ ಮೇಧಾವಿ ಎಂಬಂತೆ ವರ್ತಿಸೋ ಗಂಡ, ಜೋರು ಮಾತಲ್ಲೂ ಸೊಸೆ ಪರ ನಿಲ್ಲುವ ಅತ್ತೆ, ಸೊಸೆಯನ್ನ ಮಗಳಂತೆ ಕಾಣೋ ಮಾವ.. ಅತ್ತೆ ಸೊಸೆ ಅಂದ್ರೆ ಹಾವು ಮುಂಗುಸಿ ಥರ ತೋರಿಸೋ ಸೀರಿಯಲ್​ಗಳ ನಡುವೆ ಭಾಗ್ಯ ಮತ್ತು ಕುಸುಮಾ ಅನುಬಂಧ ಹಲವರಿಗೆ ಮಾದರಿಯಾಗಿತ್ತು.

ಇದನ್ನೂ ಓದಿ:  ಲಕ್ಷಣ ಧಾರಾವಾಹಿಯ ಡೆವಿಲ್ ಸೀಕ್ರೆಟ್ ಬಯಲು..! – ಸತ್ಯ ಗೊತ್ತಾದ ಮೇಲೆ ಭೂಪತಿ, ನಕ್ಷತ್ರ, ಚಂದ್ರಶೇಖರ್‌ಗೆ ಶಾಕ್

ಸೊಸೆಯನ್ನ ಓದಿಸಬೇಕು ಅನ್ನೋ ಅತ್ತೆಯ ನಿರ್ಧಾರಕ್ಕೆ ಇಡೀ ರಾಜ್ಯವೇ ಶಹಬ್ಬಾಸ್ ಅಂದಿತ್ತು.. ಆದ್ರೆ ಹಾಲುಜೇನಿನಂಥ ಸಂಸಾರದಲ್ಲಿ ಹೀರೋ ಆಗ್ಬೇಕಿದ್ದ ತಾಂಡವ್ ವಿಲನ್ ಆಗಿದ್ದ.. ಮುತ್ತಿನಂಥ ಹೆಂಡ್ತಿ ಮನೆಯಲ್ಲಿದ್ರೂ ತಮ್ಮದೇ ಆಫೀಸ್​ನ ಶ್ರೇಷ್ಠಾ ಹಿಂದೆ ಬಿದ್ದು ಫಜೀತಿಗೆ ಸಿಲುಕಿದ್ದಾನೆ.. ಹೇಗಾದ್ರೂ ಮಾಡಿ ತಾಂಡವ್​ನನ್ನ ಪಡೆಯಲೇಬೇಕು ಅಂತಾ ಪಟ್ಟು ಹಿಡಿದಿರುವ ಶ್ರೇಷ್ಠ ಈಗ ಮದುವೆ ಕುತಂತ್ರ ಶುರು ಮಾಡಿದ್ದಾಳೆ.. ಮತ್ತೊಂದೆಡೆ ಶ್ರೇಷ್ಠಾ ಅಪ್ಪ ಅಮ್ಮನನ್ನ ನಂಬಿಸೋಕೆ ಬಾಡಿಗೆ ತಂದೆ ತಾಯಿಯನ್ನ ಕರೆ ತಂದಿದ್ದ ತಾಂಡವ್​ ಸರಿಯಾಗೇ ಲಾಕ್ ಆಗಿದ್ದಾನೆ.. ತಾಂಡವ್ ತನ್ನ ಹೆಸರನ್ನ ತರುಣ್ ಎಂದು ಹೇಳಿಕೊಂಡು ಶ್ರೇಷ್ಠಾ ಅಪ್ಪ ಅಮ್ಮನನ್ನ ನಂಬಿಸಿದ್ದ.. ನಾವು ನಿಮ್ಮ ಮನೆ ನೋಡಬೇಕು ಅಂದಾಗ ಬಾಡಿಗೆ ಅಮ್ಮನನ್ನ ಮನೆಗೆ ಕರೆಸಿ ನಾಟಕ ಮಾಡಿದ್ದ.. ಮಗಳನ್ನ ರೂಮ್​ನಲ್ಲಿ ಲಾಕ್​ ಮಾಡಿ ಜೀವಕ್ಕೂ ಆಪತ್ತು ತಂದಿದ್ದ.. ಇದರ ನಡುವೆಯೇ ತಾಂಡವ್ ಮನೆಗೆ ಬಂದಿದ್ದ ಬಾಡಿಗೆ ತಾಯಿ ಬೆಳ್ಳಿ ವಸ್ತುಗಳನ್ನೆಲ್ಲಾ ಕದ್ದು ಎಸ್ಕೇಪ್ ಆಗಿದ್ದಳು.. ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಇನ್ನೇನು ತಾಂಡವ್ ಹೆಸರು ಹೇಳೇ ಬಿಡ್ತಾಳೆ ಅನ್ನುವಷ್ಟ್ರಲ್ಲಿ ಠಾಣೆಯಲ್ಲೇ ಡೀಲ್ ಮಾತನಾಡಿ ಸೈಲೆಂಟ್ ಆಗಿದ್ದಳು.. ಮಹಿಳೆಯ ವರಸೆ ಮತ್ತು ತಾಂಡವ್​ ನಡೆ ಕಂಡು ಅನುಮಾನಗೊಂಡ ಭಾಗ್ಯ ತನ್ನ ಗಂಡನನ್ನ ಸಾಲು ಸಾಲು ಪ್ರಶ್ನೆ ಕೇಳಿದ್ಲು.. ಈ ವಾಗ್ವಾದದ ನಡುವೆಯೇ ತಾಂಡವ್​ಗೆ ಕರೆ ಮಾಡಿದ್ದ ಶ್ರೇಷ್ಠಾ ನೀನು ಕೂಡ್ಲೇ ಬರಬೇಕು.. ಇಲ್ಲದಿದ್ರೆ ನಾನು ನಿಮ್ಮ ಅಮ್ಮನ ಮುಂದೆ ಹೋಗಿ ನಿಲ್ಲುತ್ತೇನೆ.. ಆಮೇಲೆ ಏನಾದ್ರೂ ನಾನು ಜವಾಬ್ದಾರಳಲ್ಲ ಅಂತಾ ಬೆದರಿಕೆ ಹಾಕಿದ್ಲು.. ಇದ್ರಿಂದ ಭಯಗೊಂಡ ತಾಂಡವ್ ಭಾಗ್ಯಳನ್ನ ಅರ್ಧದಲ್ಲೇ ಬಿಟ್ಟು ಸೀದಾ ಹೋಗಿದ್ದ.. ಇದರ ನಡುವೆ ಮನೆಯಲ್ಲಿ ಗಣಪತಿ ಪೂಜೆ ನಡೆಯುತ್ತಿದ್ದು ಭಾಗ್ಯ ಮನೆಗೆ ಮರಳಿದ್ಲು.. ಆದ್ರೆ ಶ್ರೇಷ್ಠಾಳ ನಡೆ ಮೇಲೆ ಅನುಮಾನಗೊಂಡು ಪೂಜಾ ಅವಳನ್ನ ಹಿಂಬಾಲಿಸಿದ್ಲು.. ಈ ವೇಳೆ ಬೆಟ್ಟವೊಂದರ ಮೇಲೆ ತಾಂಡವ್ ಮತ್ತು ಶ್ರೇಷ್ಠಾಳನ್ನ ಕಂಡು ಗಾಬರಿಯಾಗಿದ್ಲು.. ಮರೆಯಲ್ಲಿ ನಿಂತು ಇವರಿಬ್ಬರು ಏನು ಮಾತಾಡ್ತಿದ್ದಾರೆ ಅನ್ನೋದನ್ನ ವಿಡಿಯೋ ಮಾಡಿಕೊಂಡಿದ್ದಾಳೆ..

ತಾಂಡವ್ ಬರುತ್ತಿದ್ದಂತೆ ಇನ್ನು ನನಗೆ ಕಾಯೋಕೆ ಆಗೋದಿಲ್ಲ, ಮದುವೆ ಆಗು ಎಂದು ತಾಂಡವ್‌ಗೆ ಶ್ರೇಷ್ಠ ಹೇಳಿದ್ದಾಳೆ.. ಇಷ್ಟು ದಿನ ಹನಿ ಹನಿ ಅಂತಾ ಶ್ರೇಷ್ಠಾ ಹಿಂದೆ ಸುತ್ತುತ್ತಿದ್ದ ತಾಂಡವ್ ಮದುವೆ ವಿಚಾರ ಬರ್ತಿದ್ದಂತೆ ಫುಲ್ ಉಲ್ಟಾ ಆಗಿದ್ದಾನೆ.. ತನ್ನ ಮನಸ್ಸಲ್ಲಿ ಇರೋದನ್ನೆಲ್ಲಾ ಹೇಳಿಕೊಂಡಿದ್ದಾನೆ.. ನನಗೆ ಮನಸ್ಸಿಗೆ ಬೇಸರ ಆದಾಗ ನಿನ್ನ ಬಳಿ ಬರ್ತಿದ್ದೆ.. ನೀನು ಮಾತ್ರ ನನ್ನನ್ನು ಅರ್ಥ ಮಾಡಿಕೊಂಡಿದ್ದೀಯಾ ಅಂತ ಅಂದುಕೊಂಡೆ.. ನಾವಿಬ್ಬರೂ ಆರಾಮಾಗಿ ಇರುವಾಗ ಮದುವೆ ವಿಷಯ ಯಾಕೆ ಬೇಕಿತ್ತು? ಎಂದು ಪ್ರಶ್ನಿಸಿದ್ದಾನೆ.. ಆಗ ಶ್ರೇಷ್ಠಾ ಮದುವೆ ಆಗದೆ ಕದ್ದು ಮುಚ್ಚಿ ಓಡಾಡೋಕೆ ಆಗಲ್ಲ.. ನಾನು ನಿನ್ನ ಮದುವೆ ಆಗ್ಲೇಬೇಕು ಎಂದು ಶ್ರೇಷ್ಠಾ ಹೇಳಿದ್ದಾಳೆ.. ಶ್ರೇಷ್ಠ ಮಾತುಗಳಿಗೆ ಆರಂಭದಲ್ಲಿ ಸಮಾಧಾನವಾಗಿ ಮಾತನಾಡಿದ ತಾಂಡವ್ ಆಮೇಲೆ ಅವಳ ಕಪಾಳಕ್ಕೆ ಹೊಡೆದಿದ್ದಾನೆ.. ನೀನು ಎಂಥ ಕ್ರಿಮಿನಲ್ ಅಂತ ನನಗೆ ಗೊತ್ತಿರಲಿಲ್ಲ.. ನನ್ನ ತಾಯಿಯನ್ನು ನೀನು ಬೀಳಿಸಿದ್ದೀಯಾ.. ಕೊಲ್ಲೋಕೂ ಹೇಸಲ್ಲ.. ನನಗೆ ಸಾಕಾಗಿದೆ ಈ ಬದುಕು.. ನನ್ನ ಅಪ್ಪ ಅಪ್ಪನಿಗೆ ಯಾವಾಗ್ಲೂ ನಾನು ಒಳ್ಳೆಯ ಮಗನಾಗಿರಬೇಕು.. ನನ್ನ ಮಕ್ಕಳಿಗೆ ನಾನೇ ಹೀರೋ ಆಗಿರಬೇಕು.. ನಿನ್ನ ಸಹವಾಸ ಬೇಡ.. ನನ್ನ ಲೈಫ್‌ನಲ್ಲಿ ತಲೆ ಹಾಕಬೇಡ ಅಂತಾ ಶ್ರೇಷ್ಠಗೆ ಗುಡ್​ಬೈ ಹೇಳಿ ತಾಂಡವ್ ಅಲ್ಲಿಂದ ಹೊರಟು ಹೋಗ್ತಾನೆ..

ಸೀರಿಯಲ್​ನಲ್ಲಿ ಇದ್ದದ್ದೇ ತಾಂಡವ್ ಮತ್ತು ಶ್ರೇಷ್ಠಾ ಸಂಬಂಧದ ಸಮಸ್ಯೆ.. ಈಗ ತಾಂಡವ್ ಶ್ರೇಷ್ಠಾಳನ್ನೇ ಬಿಟ್ಟರೆ ಮನೆಯಲ್ಲಿ ಒಳ್ಳೆಯವನಾಗುತ್ತಾನೆ.. ಭಾಗ್ಯಳನ್ನೂ ಚೆನ್ನಾಗಿ ನೋಡಿಕೊಳ್ತಾನೆ.. ಹೀಗಾಗಿ ಕಥೆ ಹೇಗೆ ಮುಂದುವರಿಯುತ್ತೆ.. ಬಿಗ್​ಬಾಸ್​ಗಾಗಿ ಭಾಗ್ಯಲಕ್ಷ್ಮೀಯನ್ನ ಮುಗಿಸ್ತಾರಾ ಅಂತಾ ಅಭಿಮಾನಿಗಳು ಮಾತನಾಡಿಕೊಳ್ತಿದ್ದಾರೆ.. ಆದ್ರೆ ಭಾಗ್ಯಲಕ್ಷ್ಮೀ ಸೀರಿಯಲ್ ಇಷ್ಟಕ್ಕೇ ಮುಗಿಯಲ್ಲ.. ಭಾವನ ಕಳ್ಳಾಟವನ್ನ ಪೂಜಾ ರೆಕಾರ್ಡ್ ಮಾಡಿಕೊಂಡಿದ್ದಾರೆ.. ಹಾಗೇ ತಾಂಡವ್-ಶ್ರೇಷ್ಠ ಚಾಪ್ಟರ್ ಕೂಡ ಕ್ಲೋಸ್ ಆಗಿಲ್ಲ.. ತಾಂಡವ್‌ನನ್ನು ಶ್ರೇಷ್ಠ ಪ್ರೀತಿ ಮಾಡಿದ್ದು ಅವನನ್ನು ಬಿಟ್ಟು ಕೊಡೋಕೆ ರೆಡಿ ಇಲ್ಲ.. ಹೀಗಾಗಿ ಬೇರೆ ಏನಾದ್ರೂ ಪ್ಲ್ಯಾನ್ ಮಾಡ್ತಾಳೆ.. ಬ್ಲ್ಯಾಕ್​ಮೇಲ್ ಮಾಡಿ ಮತ್ತೆ ತನ್ನತ್ರ ಕರೆಸಿಕೊಳ್ಳಬಹುದು.. ಎಲ್ಲಿ ತನ್ನ ವಿಚಾರ ಹೊರಗೆ ಬರುತ್ತೋ ಅಂತಾ ತಾಂಡವ್ ಕೂಡ ಶ್ರೇಷ್ಠ ಹಾಕಿದ್ದ ತಾಳಕ್ಕೆ ಕುಣಿಯಬಹುದು.. ಭಾಗ್ಯಲಕ್ಷ್ಮೀ ಧಾರಾವಾಹಿ ಯಾವ ತಿರುವು ಪಡೆಯುತ್ತೆ ಅನ್ನೋದನ್ನ ಕಾದು ನೋಡ್ಬೇಕು..

Shwetha M