ಭಾಗ್ಯ ರೆಬೆಲ್‌ ಅಲ್ಲ.. ದಡ್ಡಿ! – ವೀಕ್ಷಕರಿಗೆ ಪೆದ್ದುತನ ನೋಡುವ ದೌರ್ಭಾಗ್ಯ!
ಸೀರಿಯಲ್‌ ಫ್ಯಾನ್ಸ್‌ ಸಿಟ್ಟಾಗಿದ್ದೇಕೆ?

ಭಾಗ್ಯ ರೆಬೆಲ್‌ ಅಲ್ಲ.. ದಡ್ಡಿ! – ವೀಕ್ಷಕರಿಗೆ ಪೆದ್ದುತನ ನೋಡುವ ದೌರ್ಭಾಗ್ಯ!ಸೀರಿಯಲ್‌ ಫ್ಯಾನ್ಸ್‌ ಸಿಟ್ಟಾಗಿದ್ದೇಕೆ?

ಸೀರಿಯಲ್ ನಲ್ಲಿ ಮುಖ್ಯ ಪಾತ್ರದಾರಿಯನ್ನ ಒಂದಾ  ಮುಗ್ಧೆ ಅಂತಾ ತೋರಿಸಲಾಗುತ್ತೆ.. ಇಲ್ಲ ಅಂದ್ರೆ ತುಂಬಾ ಸ್ಮಾರ್ಟ್ ಅಂತ ತೋರಿಸಲಾಗುತ್ತೆ.. ಬಹುತೇಕ ಎಲ್ಲಾ ಸೀರಿಯಲ್ ನಲ್ಲಿ ಹೀಗೇ ತೋರಿಸಲಾಗುತ್ತೆ.. ಆದ್ರೆ ಇತ್ತೀಚೆಗೆ ಸೀರಿಯಲ್ ನಲ್ಲಿ‌ ಮುಗ್ದೆ ಅಂತಾ ತೋರಿಸಲು ಹೋಗಿ ಇದು ನಗೆಪಾಟಲಿಗೆ ಈಡಾಗುತ್ತಿವೆ.. ಇಂತಹ ಪಾತ್ರಗಳನ್ನು ನೋಡಿ ನೋಡಿ ವೀಕ್ಷಕರಿಗೂ ತಲೆ ಕೆಟ್ಟು ಹೋಗಿವೆ. ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಾ ಇರೋ ಭಾಗ್ಯಲಕ್ಷ್ನೀ ಸೀರಿಯಲ್ ಕೂಡ ವೀಕ್ಷಕರ ತಾಳ್ಮೆ‌ ಪರೀಕ್ಷೆ ಮಾಡ್ತಾ ಇದೆ.. ಭಾಗ್ಯಳ ಪೆದ್ದುತನ ವೀಕ್ಷಕರಿಗೆ ಸಿಟ್ಟು ತರಿಸುತ್ತಿದೆ..

ಇದನ್ನೂ ಓದಿ: ಸುಧಾಕರ್‌ಗೆ ಒಂದು ವೋಟ್‌ ಜಾಸ್ತಿ ಬಂದ್ರೂ ಶಾಸಕ ಸ್ಥಾನಕ್ಕೆ ರಾಜೀನಾಮೆ -ಪ್ರದೀಪ್ ಈಶ್ವರ್

ಸೀರಿಯಲ್ ನಲ್ಲಿ ಬಹುತೇಕ ಕಾಲ್ಪನಿಕವಾಗಿ ತೋರಿಸಿದ್ರೂ ಕೆಲವೊಂದು ವಾಸ್ತವತೆಯಿಂದಲೂ ಕೂಡಿರುತ್ತವೆ.. ಮೊದ್ಲೆಲ್ಲಾ ಏನ್ ತೋರಿಸಿದ್ರೂ ಕೂಡ ವೀಕ್ಷಕರು ಒಪ್ಪಿಕೊಳ್ತಿದ್ರು.. ಆದ್ರೆ ಈಗ ಹಾಗಲ್ಲ.. ಸೀರಿಯಲ್ ಟೀಂ ಮಾಡಿರುವ ಸಣ್ಣ ಪುಟ್ಟ ತಪ್ಪುಗಳನ್ನು ವೀಕ್ಷಕರು ಕಂಡುಹಿಡಿಯುತ್ತಾರೆ.. ಇದೀಗ ಭಾಗ್ಯ ಸೀರಿಯಲ್ ನಲ್ಲೂ ಆಗಿದ್ದು ಇದೇ.. ಸಣ್ಣ ಪುಟ್ಟ ತಪ್ಪುಗಳನ್ನೇ ವೀಕ್ಷಕರು ಪಾಯಿಂಟ್ ಔಟ್ ಮಾಡ್ತಿದ್ದಾರೆ..

ಹೌದು.. ಭಾಗ್ಯಲಕ್ಷ್ಮೀ ಧಾರಾವಾಹಿ ಇತ್ತೀಚೆಗೆ ಹಲವರಿಗೆ ಬೇಸರ ತರಿಸಿದೆ. ಭಾಗ್ಯಾಳನ್ನು ತಾಂಡವ್ ದಡ್ಡಿ, ಶತ ದಡ್ಡಿ ಅಂತ ಹೇಳುವುದಕ್ಕೂ, ಭಾಗ್ಯಾ ಅದೇ ಥರ ಆಡುವುದಕ್ಕೂ ಸಮವಾಗಿದೆ. ಇದಕ್ಕೆ ನೋಡುಗರು ಕೊಂಚ ಬೇಸರ ಮಾಡಿಕೊಂಡಿದ್ದಾರೆ. ಭಾಗ್ಯಾಳನ್ನು ದಡ್ಡಿ ಎಂದೇ ತೋರಿಸುವುದಾದರೇ, ಅರ್ಥವೇ ಆಗದಂತೆ ಆಡುವುದಾದರೆ ತಾಂಡವ್ ಮಾತುಗಳೇ ಸರಿ ಎಂದು ಬಿಂಬಿಸಿದಂತೆ ಆಗುವುದಿಲ್ಲವೇ ಎನ್ನುತ್ತಿದ್ದಾರೆ ಸೀರಿಯಲ್ ಫ್ಯಾನ್.

ಡಿವೋರ್ಸ್ ಬೇಕು ಎಂದಾಗ, ಎಸ್ಎಸ್ಎಲ್‌ಸಿ ಓದುವುದು ಬೇಡ ಎಂದಾಗ ಭಾಗ್ಯಾಳ ವರ್ತನೆಯೇ ಬೇರೆ ಇತ್ತು. ಗಟ್ಟಿಗಿತ್ತಿಯಾಗಿ ನಡೆದುಕೊಂಡಿದ್ದಳು. ಗಂಡನನ್ನೇ ದಿಟ್ಟಿಸಿ ನಿಂತಿದ್ದಳು. ಭಾಗ್ಯಳಿಗೆ ಬಂದಿರುವ ಸಂಕಷ್ಟವನ್ನು ನೋಡಿ ವೀಕ್ಷಕರು ಅಯ್ಯೋ ಪಾಪ ಎನ್ನುತ್ತಿದ್ದರು. ಆದರೆ ಯಾಕೋ ಇತ್ತೀಚಿನ ಕೆಲವು ಎಪಿಸೋಡ್‌ಗಳನ್ನು ನೋಡಿದ ಮೇಲೆ ಭಾಗ್ಯಳ ವಿರುದ್ಧವೇ ಸೀರಿಯಲ್‌ ಫ್ಯಾನ್ಸ್‌ ತಿರುಗಿ ಬಿದ್ದಿದ್ದಾರೆ. ಸೀರಿಯಲ್‌ ಸ್ಟೋರಿಯಲ್ಲಿ ಈಗ ಎಲ್ಲವೂ ಉಲ್ಟಾ ಆಗಿದೆ. ರೆಬಲ್ ಭಾಗ್ಯ ಹೋಗಿ ಪೆದ್ದಿ ಭಾಗ್ಯ ಆಗಿದ್ದಾಳೆ..  ತೊದಲು ನುಡಿಯುತ್ತಾಳೆ.. ಎಲ್ಲದಕ್ಕೂ ಹೆದರುತ್ತಾಳೆ.. ಈ ಬೆಳವಣಿಗೆ ಪ್ರೇಕ್ಷಕರಿಗೆ ಬೇಡವಾಗಿದೆ. ಒಬ್ಬಳನ್ನು ಮುಗ್ಧೆ ಎಂದು ತೋರಿಸಬೇಕು‌‌.. ಆದರೆ ಮುಗ್ಧೆ ಎನ್ನುವ ಹೆಸರಿನಲ್ಲಿ ಅತೀ ಎನಿಸುವಷ್ಟು ಪೆದ್ದು ಎಂದು ಅಂತಾ ತೋರಿಸ್ಬಾರ್ದು ಅಂತಾ ವೀಕ್ಷಕರು ಹೇಳ್ತಿದ್ದಾರೆ.‌

ಇನ್ನು ಕೆಲವರು ಭಾಗ್ಯಳದ್ದು ಮುಗ್ಧತೆ ಅಲ್ಲ, ಇದು ಪೆದ್ದು, ದಡ್ಡತನದ ಪರಮಾವಧಿ ಎಂದಿರುವ ಸೀರಿಯಲ್‌ ಪ್ರೇಮಿಗಳು, ಇಂಥ ಪತ್ನಿಯ ಜೊತೆ ಯಾವ ಗಂಡ ತಾನೆ ಸಂಸಾರ ಮಾಡುತ್ತಾನೆ, ಅದಕ್ಕೇ ತಾಂಡವ್‌ ಇನ್ನೊಬ್ಬಳನ್ನು ಹುಡುಕಿಕೊಂಡು ಹೋಗಿರುವುದು ಎನ್ನುತ್ತಿದ್ದಾರೆ. ಇನ್ನು ಕೆಲವರು ಈ ಕಮೆಂಟಿಗೆ ತಿರುಗೇಟು ನೀಡಿದ್ದು, ಎರಡು ಮಕ್ಕಳಾದ ಮೇಲೆ, 16 ವರ್ಷ ಸಂಸಾರ ಮಾಡಿದ ಮೇಲೆ ಇದು ಗೊತ್ತಾಯ್ತಾ ಎಂದು ಕೇಳುತ್ತಿದ್ದಾರೆ.

ಅಷ್ಟಕ್ಕೂ ಆಗಿದ್ದೇನೆಂದರೆ,  ಭಾಗ್ಯ 5 ಸ್ಟಾರ್‌ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರುತ್ತಾಳೆ. ಅಡುಗೆ ಮಾಡುವ ಬದಲು ಆಕೆಗೆ, ವೈಟರ್‌  ಕೆಲಸ ನೀಡಲಾಗಿದೆ. ಬರುವ ಗ್ರಾಹಕರು ಇಂಗ್ಲಿಷ್​ನಲ್ಲಿ ಮಾತನಾಡುತ್ತಿದ್ದಾರೆ. ಅವರು ಆರ್ಡರ್​ ಮಾಡುವ ತಿನಿಸು ಯಾವುದು ಎಂದು ಭಾಗ್ಯಳಿಗೆ ತಿಳಿಯುವುದಿಲ್ಲ. ಇದರಿಂದ ಪರದಾಡುತ್ತಿದ್ದಾಳೆ ಭಾಗ್ಯ. ನನಗೆ ಆರ್ಡರ್‌ ತೆಗೆದುಕೊಳ್ಳುವುದಕ್ಕಿಂತ ಅಡುಗೆ ಮಾಡುವುದು ಚೆನ್ನಾಗಿ ಬರುತ್ತದೆ. ಅದನ್ನೇ ಮಾಡುತ್ತೇನೆ ಎಂದು ಶೆಫ್​ಗೆ ಹೇಳುತ್ತಾಳೆ. ಅವನು ಈಕೆಯನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಳ್ಳುತ್ತಾನೆ.

ಇನ್ನು ತಾಂಡವ್‌ ಹಾಗೂ ಭಾಗ್ಯ ದಾಂಪತ್ಯದಲ್ಲಿ ಬಿರುಕು ಬಿದ್ದಿದೆ. ಮನೆ ಎರಡು ಭಾಗವಾಗಿದೆ. ಈಗ ಭಾಗ್ಯಳ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಮನೆಯ ಅರ್ಧ ಇಎಂಐ ನಾನೇ ಕಟ್ಟುತ್ತೇನೆ ಎಂದು ಪತಿ ತಾಂಡವ್​ ಎದುರು ಭಾಗ್ಯ ಒಪ್ಪಿಕೊಂಡು ಬಂದಿದ್ದಾಳೆ. ಈಕೆ ಹೇಗಾದರೂ ಮಾಡಿ ದುಡಿಯಲೇಬೇಕು. ಆದರೆ ಇದೀಗ ಇದೇ ಪೆದ್ದುತನದಿಂದ ಭಾಗ್ಯ ಕೆಲಸ ಕಳೆದುಕೊಳ್ಳುವಂತಾಗಿದೆ. ಹಿತಾಳಿಗೆ ಅಸಲಿಯತ್ತು ಗೊತ್ತಾಗಿ, ಭಾಗ್ಯಳಿಗೆ ಛೀಮಾರಿ ಹಾಕಿ ಕಳಿಸಿದ್ದಾಳೆ. ಅತ್ತ ಅತ್ತೆಯೂ ಕೆಲಸ ಕಳೆದುಕೊಂಡಿದ್ದಾಳೆ. ಆದರೆ ಸೀರಿಯಲ್‌ ಕಥೆಯನ್ನು ಬಿಟ್ಟು ಇದೀಗ ಭಾಗ್ಯಳ ವಿರುದ್ಧ ತಿರುಗಿ ಬಿದ್ದಿರುವ ಸೀರಿಯಲ್‌ ಪ್ರೇಮಿಗಳು ತಾಂಡವ್‌ ಪರ ವಹಿಸಿಕೊಳ್ಳುತ್ತಿದ್ದಾರೆ.

Shwetha M